ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ವಿನಃ, ಕಾಂಗ್ರೆಸ್‌ ಬಳಿ ಭಿಕ್ಷೆ ಬೇಡಲ್ಲ: ಮಾಯಾವತಿ

ನವದೆಹಲಿ, ಅಕ್ಟೋಬರ್ 09: ಕಾಂಗ್ರೆಸ್‌ ವಿರುದ್ಧ ಮಾಯಾವತಿ ಅವರ ದಿಢೀರ್‌ ಮುನಿಸು ಇನ್ನಷ್ಟು ಹೆಚ್ಚಾಗುತ್ತಿದೆ. ಕಾಂಗ್ರೆಸ್‌ ಅನ್ನು ಕಟು ಶಬ್ದಗಳಲ್ಲಿ ಟೀಕಿಸಲು ಬಿಎಸ್‌ಪಿ ನಾಯಕಿ ಮಾಯಾವತಿ ಶುರು ಹಚ್ಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಕಾಂಗ್ರೆಸ್‌ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಮಾಯಾವತಿ ಅವರು ಇಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತೇವೆಯೇ ವಿನಃ ಸೀಟುಗಳಿಗಾಗಿ ಕಾಂಗ್ರೆಸ್‌ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿದ್ದಾರೆ ಬಿಎಸ್‌ಪಿ ನಾಯಕಿ ಮಾಯಾವತಿ.

BSP would not beg for seats in front of congress: Mayawati

ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಎಸ್‌ಪಿ-ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿತ್ತು. ಆದರೆ ಎರಡೂ ಪಕ್ಷಗಳ ನಡುವೆ ಮೈತ್ರಿ ಮಾತುಕತೆ ಮುರಿದುಬಿದ್ದಿತ್ತು.

ಬಿಎಸ್‌ಪಿಯು ದಲಿತರ ಆತ್ಮಗೌರವದ ಪರ ಸದಾ ನಿಲ್ಲುತ್ತದೆ ಎಂದು ಹೇಳಿರುವ ಅವರು, ಜೊತೆ-ಜೊತೆಗೆ ಹಿಂದುಳಿದವರ, ಮುಸ್ಲಿಮರ ಮತ್ತು ಬಡವರ ಪರ ನಿಲ್ಲುವುದನ್ನು ಅದು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಹಾಗಾಗಿಯೇ ನಾವು ಉತ್ತಮ ಸಂಖ್ಯೆಯ ಸೀಟುಗಳಿಗಾಗಿ ಕಾಂಗ್ರೆಸ್‌ ಬಳಿ ಮನವಿ ಮಾಡಿದ್ದೆವು ಎಂದು ಮಾಯಾವತಿ ಹೇಳಿದ್ದರು.

ನಮ್ಮ ಬೇಡಿಕೆಯಷ್ಟು ಸೀಟು ದೊರಕಲಿಲ್ಲವೆಂದರೆ ಮೈತ್ರಿ ಮಾತುಕತೆಯಲ್ಲಿ ಅರ್ಥವಿಲ್ಲ ಎಂದು ಖಡಾ-ಖಂಡಿತವಾಗಿ ಹೇಳಿರುವ ಮಾಯಾವತಿ ನಾವು ಏಕಾಂಗಿಯಾಗಿ ಬೇಕಾದರೂ ಸ್ಪರ್ಧಿಸುತ್ತೇವೆಯೇ ವಿನಃ ಸೀಟುಗಳಿಗಾಗಿ ಭಿಕ್ಷೆ ಬೇಡೆವು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+