ಬಿಜೆಪಿ-ಪಿಡಿಪಿಯದು ಅಸಮಂಜಸ ಮದುವೆ, ವಿಚ್ಛೇದನಕ್ಕಿದು ಸಕಾಲ!
ನವದೆಹಲಿ, ಜೂನ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ) ಸಮ್ಮಿಶ್ರ ಸರ್ಕಾರ ಒಂದು ಅಸಮಂಜಸ ಮದುವೆಯ ಹಾಗೇ. ಇಬ್ಬರ ನಡುವೆ ವಿಚ್ಛೇದನದ ಅಗತ್ಯವಿದೆ ಎಂದು ಜೆಡಿಯು ನಾಯಕ ಕೆ.ಸಿ.ತ್ಯಾಗಿ ವ್ಯಂಗ್ಯವಾಡಿದ್ದಾರೆ.
ಇಂದು ಕಣಿವೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಿಂಸೆಗೆ ಕಾರಣ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮೆಹಬೂಬಾ ಮುಫ್ತಿ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಬಿಜೆಪಿ ಮತ್ತು ಪಿಡಿಪಿ ಮದುವೆ ಸಂಬಂಧಕ್ಕೆ ವಿಚ್ಛೇದನದ ಸಮಯ ಬಂದಿದೆ. ಇಬ್ಬರೂ ವಿಚ್ಛೇದನ ತೆಗೆದುಕೊಳ್ಳುವುದು ಭಾರತ ಇಡೀ ದೇಶಕ್ಕೆ ಮತ್ತು ಕಾಶ್ಮೀರಕ್ಕೂ ಒಳ್ಳೆಯದು ಎಂದವರು ಹೇಳಿದ್ದಾರೆ.












Click it and Unblock the Notifications