ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದವರಿಗೆ ದೀಪಾವಳಿ ಗಿಫ್ಟ್
ನವದೆಹಲಿ, ಅಕ್ಟೋಬರ್ 25: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು, ಯಾತ್ರೆಯಲ್ಲಿನ ಚಾಲಕರು ಮತ್ತು ಕಾರ್ಮಿಕರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿನ ಕಾರ್ಯಕರ್ತರಿಗೆ ಬೆಳ್ಳಿ ನಾಣ್ಯ ಮತ್ತು ಸಿಹಿತಿಂಡಿಗಳನ್ನು ನೀಡಿದ್ದಾರೆ.
ಭಾರತದ ನಿಜವಾದ ಮೌಲ್ಯಗಳಲ್ಲಿ ಅವರ ನಂಬಿಕೆಯು ಮುಂದಿನ ಹಾದಿಯನ್ನು ಬೆಳಗಿಸುತ್ತದೆ ಎಂದು ಹೇಳಿದರು. ಅವರು ಇಡೀ ಯಾತ್ರೆಯಲ್ಲಿ ಸಾಗುತ್ತಿರುವ ಭಾರತ್ ಯಾತ್ರಿಗಳಿಗೆ ಮತ್ತು ಕೆಲಸಗಾರರಿಗೆ ಮತ್ತು ಚಾಲಕರಿಗೆ ಬೆಳ್ಳಿ ನಾಣ್ಯ ಮತ್ತು ಸಿಹಿತಿಂಡಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
"ಸುಂದರವಾದ ಭಾರತ್ ಜೋಡೋ ಯಾತ್ರೆಯಲ್ಲಿ ನಾವು ಕೈಜೋಡಿಸಿದ್ದೇವೆ. ನಿಮ್ಮ ನಂಬಿಕೆ, ನಿಮ್ಮ ಮೇಲಿನ ನಿಮ್ಮ ನಂಬಿಕೆ ಮತ್ತು ಭಾರತದ ನಿಜವಾದ ಮೌಲ್ಯಗಳಾಗಿದ್ದು, ದ್ವೇಷ ಭಾವನೆಯನ್ನು ಸೋಲಿಸುತ್ತದೆ ಹಾಗೂ ಮುಂದಿನ ಹಾದಿಯನ್ನು ಬೆಳಗಿಸುತ್ತದೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ:
ನೀವು ಮಾತನಾಡಬೇಡಿ, ಕೆಲಸ ಮಾಡಿ. ಹೇಳಬೇಡಿ, ಮಾಡಿ ತೋರಿಸಿ, ಭರವಸೆ ನೀಡಬೇಡಿ, ಸಾಬೀತುಪಡಿಸಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಾನು ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ," ಎಂದು ರಾಹುಲ್ ಗಾಂಧಿಯವರು ಎಲ್ಲಾ ಯಾತ್ರಿಗಳು ಮತ್ತು ಭಾರತ್ ಜೋಡೋಗಾಗಿ ದುಡಿದ ಪ್ರತಿಯೊಬ್ಬರಿಗೂ ತಮ್ಮ ಪತ್ರದ ಮೂಲಕ ತಿಳಿಸಿದ್ದಾರೆ.
ಭಾರತ್ ಯೋಜೋ ಯಾತ್ರಿಗಳಿಗೆ ಅದ್ಭುತ ಉಡುಗೊರೆ:
ಕಾಂಗ್ರೆಸ್ ಕೂಡ ಗಾಂಧಿಯವರ ಪತ್ರವನ್ನು ಟ್ವೀಟ್ ಮಾಡಿದ್ದು, "ವಾವ್... ಸುಂದರವಾಗಿದೆ... ಪ್ರೀತಿಯಿಂದ ತುಂಬಿದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಭಾರತ ಯಾತ್ರಿಗಳು, ಶಿಬಿರದ ಕಾರ್ಯಕರ್ತರು ಮತ್ತು ಚಾಲಕರಿಗೆ ಪತ್ರದ ರೂಪದಲ್ಲಿ ಸಿಹಿತಿಂಡಿಗಳು ಮತ್ತು ಬೆಳ್ಳಿ ನಾಣ್ಯಗಳ ಅದ್ಭುತ ಉಡುಗೊರೆಯನ್ನು ನೀಡಿದ್ದಾರೆ. ಅವರು ಇದನ್ನು ಎಂದಿಗೂ ಮರೆಯುವುದಿಲ್ಲ," ಎಂದು ಉಲ್ಲೇಖಿಸಿದೆ.
ಭಾರತ್ ಜೋಡೋ ಯಾತ್ರೆ ಉದ್ದೇಶ:
ಬಿಜೆಪಿಯು ಸಮಾಜವನ್ನು ವಿಭಜಿಸುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್, ದೇಶವನ್ನು ಒಂದುಗೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಯಾತ್ರೆಯನ್ನು ನಡೆಸಲಾಗುತ್ತಿದೆ. ಕಳೆದ ಸೆಪ್ಟೆಂಬರ್ 7ರಂದು ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು 3,570 ಕಿಮೀವರೆಗೂ ಸಂಚರಿಸಲಿದೆ. ಮುಂದಿನ ಐದು ತಿಂಗಳವರೆಗೂ ನಡೆಯಲಿರುವ ಯಾತ್ರೆಯು ಫೆಬ್ರವರಿ ಅಂತ್ಯದವರೆಗೆ ಮುಂದುವರಿಯುತ್ತದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು 12 ರಾಜ್ಯಗಳಲ್ಲಿ ಹಾದುಹೋಗುತ್ತದೆ.












Click it and Unblock the Notifications