ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡೋ ಮುನ್ನ ನಕಲಿ ಖಾತೆ ಬಗ್ಗೆ ಎಚ್ಚರವಿರಲಿ!
ಮುಂಬೈ, ಜುಲೈ 12: ಇದು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಸಮಯ. ಈ ಸಮಯದಲ್ಲಿ ಐಟಿ ಇಲಾಖೆಯ ರೀತಿಯಲ್ಲೇ ಹಲವು ನಕಲಿ ಖಾತೆಗಳಿಂದ ನಿಮಗೆ ಇ ಮೇಲ್ ಬರಬಹುದು.
ಇದು ಥೇಟ್ ಸರ್ಕಾರದ ಐಟಿ ಇಲಾಖೆಯಿಂದ ಬರುವ ಮೇಲ್ ನಂತೆಯೇ ಇರುತ್ತದೆ. ಅಕಸ್ಮಾತ್ ಈ ಇಮೇಲ್ ಅನ್ನು ಸರಿಯಾಗಿ ಪರಿಶೀಲಿಸದೆ, ಅಗತ್ಯ ವಿವರಗಳನ್ನು ಸಲ್ಲಿಸಿದ್ದೇ ಆದರೆ ಸಂಕಷ್ಟ ಕಟ್ಟಿಟ್ಟಬುತ್ತಿ!
[email protected] ಎಂಬ ಐಡಿಯಿಂದ ನಿಮಗೆ ಇಮೇಲ್ ಬಂದಿದ್ದರೆ ಅದರ ಸ್ಪೆಲಿಂಗ್ ಗಳನ್ನು ಸರಿಯಾಗಿ ಗಮನಿಸಿ. ಆದಾಯ ಇಲಾಖೆಯ ಐಡಿಯಿಂದ ಬಂದಿದ್ದಾದರೆ, [email protected] ಎಂಬ ಐಡಿಯಿಂದ ಮೇಲ್ ಬರುತ್ತದೆ. ಈ ಎರಡೂ ಮೇಲ್ ಗಳೂ ಒಂದೇ ರೀತಿ ಅನ್ನಿಸುತ್ತವಾದರೂ, ಸರಿಯಾಗಿ ಪರಿಶೀಲಿಸಿದರೆ ವ್ಯತ್ಯಾಸ ತಿಳಿಯುತ್ತದೆ.

ನಕಲಿ ಐಡಿ([email protected])ಯಲ್ಲಿ efiling ಬದಲು ಕೇವಲ filling ಎಂದಿದೆ. ಅಷ್ಟೇ ಅಲ್ಲ, filing ಬದಲು filling ಎಂದಿದೆ. ಇವನ್ನು ಪರಿಶೀಲಿಸಿದ ನಂತರವೇ ಮುಂದುವರಿಯಿರಿ.
ಈ ಕುರಿತು ಈಗಾಗಲೇ ಐಟಿ ಇಲಾಖೆ ಎಲ್ಲಾ ತೆರಿಗೆದಾರರಿಗೂ ತನ್ನ ವೆಬ್ ಸೈಟ್ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ, ಮೆಸೇಜ್ ಗಳ ಮೂಲಕ ಮಾಹಿತಿ ನೀಡಿದ್ದು, ಎಚ್ಚರಿಕೆ ವಹಿಸುವಂತೆ ಕೇಳಿಕೊಂಡಿದೆ.
ಚಾರ್ಟರ್ಡ್ ಅಕೌಂಟಂಟ್ ಗಳು ಈಗಾಗಲೇ ತಮ್ಮ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಈ ಕುರಿತು ಮಾಹಿತಿ, ಮುನ್ನೆಚ್ಚರಿಕೆ ನೀಡಿದ್ದಾರೆ. "ಒಂದು ಪ್ರಮುಖ ಪ್ರಕಟಣೆ: ಈಗಾಗಲೇ ರಿಟರ್ನ್ಸ್ ಫೈಲ್ ಮಾಡಿರುವವರಿಗೆ ರೀಫಂಡ್ ಲೆಕ್ಕಾಚಾರದಲ್ಲಿ ಸ್ವಲ್ಪ ದೋಷವಾಗಿದೆ ಎಂಬ ಇಮೇಲ್ ಬಂದರೆ ಅದು ನಕಲಿ ಇ ಮೇಲ್. ಹ್ಯಾಕರ್ ಗಳು ಕಳಿಸಿದ್ದು. ಅಕಸ್ಮಾತ್ ಈ ಇಮೇಲ್ ನಲ್ಲಿರುವ ಲಿಂಕ್ ಅನ್ನೇನಾದರೂ ಕ್ಲಿಕ್ ಮಾಡಿದರೆ ನೆಟ್ ಬ್ಯಾಂಕಿಂಗ್ ಪೇಜ್ ಓಪನ್ ಆಗುತ್ತೆ. ಇಲ್ಲಿ ನಿಮ್ಮ ನೆಟ್ ಬ್ಯಾಂಕಿಂಗ್ ಡಿಟೇಲ್ಸ್ ನೀಡಿದರೆ, ನಿಮ್ಮ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಇಂಥ ಈ ಮೇಲ್ ಬಗ್ಗೆ ಹುಷಾರಾಗಿರಿ. ಐಟಿ ಇಲಾಖೆಯಿಂದ ಇಂಥ ಯಾವುದೇ ಇಮೇಲ್ ಬಂದಿಲ್ಲ" ಎಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ.
ಆದ್ದರಿಂದ ಐಟಿ ರಿಟರ್ನ್ಸ್ ಫೈಲ್ ಮಾಡುವವರು ಹುಷಾರಾಗಿರಿ.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications