ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...
'ತಂಬಾಕು ಕೊಲ್ಲುತ್ತದೆ' ಎಂಬ ಸೂಚನಾ ಫಲಕಗಳನ್ನು ನಾವು ಪ್ರತಿನಿತ್ಯ ನೋಡುತ್ತೇವೆ, 'ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ' ಎಂದು ಸಿಗರೇಟ್, ಗುಟ್ಕಾ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಪ್ಯಾಕೇಟ್ ಗಳ ಮೇಲೆ ಓದುತ್ತೇವೆ.
ಜೊತೆಗೆ ಶ್ವಾಸಕೋಶಗಳ ಹಾಳಾದ ಚಿತ್ರ, ಚೇಳಿನ ಅಸ್ತಿ ಪಂಜರದ ಚಿತ್ರ ಹೀಗೆ ಹಲವಾರು ಭಯಾನಕ ಚಿತ್ರಗಳನ್ನು ಕಾಣುತ್ತೇವೆ. ತಂಬಾಕಿನ ಸೇವನೆ ಚೇಳಿನ ವಿಷಕ್ಕಿಂತಲೂ ಹೆಚ್ಚು ವಿಷಕಾರಿ ಎಂದು ತಿಳಿದರೂ ಸಹ ಜನರು ಇದಕ್ಕೆ ದಾಸರಾಗಿರುವುದು ನಿಜಕ್ಕೂ ವಿಷಾದನೀಯ. ಜಗತ್ತನಲ್ಲಿ ಒಂದು ವರ್ಷಕ್ಕೆ 60 ಲಕ್ಷ ಜನರು ತಂಬಾಕು ಸೇವನೆಯಿಂದಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Recommended Video

ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಜನರು ತಂಬಾಕು ಸಂಬಂಧಿ ರೋಗಗಳಿಂದ ಸಾವನ್ನಪ್ಪುತ್ತಿದ್ದಾರೆ, ಪ್ರತಿ ದಿನ 2200 ಕ್ಕಿಂತ ಹೆಚ್ಚು ಜನ ನಮ್ಮ ದೇಶದಲ್ಲಿ ತಂಬಾಕನ್ನು ಉಪಯೋಗಿಸುವುದರಿಂದ ಸಾವನ್ನಪ್ಪುತ್ತಿದ್ದಾರೆ. ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಸಂಖ್ಯೆಯ ಬಾಯಿಯ ಕ್ಯಾನ್ಸರ್ ರೋಗಿಗಳನ್ನು ಹೊಂದಿದೆ ಮತ್ತು ಶೇಕಡ 90 ರಷ್ಟುಬಾಯಿಯ ಕ್ಯಾನ್ಸರ್ ಗಳಿಗೆ ಕಾರಣ ತಂಬಾಕಿಗೆ ಸಂಬಂಧಿಸಿದ್ದಾಗಿದೆ, ಎಲ್ಲಾ ರೀತಿಯ ಕ್ಯಾನ್ಸರ್ಗಳ ಶೇಕಡ 40 ರಷ್ಟು ಕಾರಣವು ತಂಬಾಕಿನ ಬಳಕೆಯೇ ಆಗಿದೆ.
ಇದು ಏಡ್ಸ್, ಕ್ಷಯ ಮತ್ತು ಮಲೇರಿಯಾ ಈ ಮೂರು ರೋಗಗಳಿಂದ ಒಟ್ಟಾರೆಯಾಗಿ ಸಾಯುವ ಜನರಿಗಿಂತ ಹೆಚ್ಚಿನ ಸಂಖ್ಯೆಯಾಗಿದೆ. ಬೀಡಿ ಸಿಗರೇಟ್, ಗುಟ್ಕಾ ಇವು ಧುಮಪಾನದ ರೂಪದಲ್ಲಿ ತಂಬಾಕು ಸೇವನೆಯ ವಿಧಗಳು, ಧೂಮರಹಿತ ತಂಬಾಕು ಉತ್ಪನ್ನಗಳಾದ ಅಗಿಯುವಂತಹ ಜರ್ದಾ, ಖೈನೀ, ಪಾನ್ ಮಸಾಲ, ಮಾವಾ ಇತ್ಯಾದಿಗಳು ಕೂಡ ತಂಬಾಕು ಸೇವನೆಯಾಗಿದೆ.
ಮೊದಮೊದಲು ಕೇವಲ ಶೋಕಿಗಾಗಿ ಸಿಗರೇಟ್, ಗುಟ್ಕಾ ತಂಬಾಕು ಸೇವನೆ ಪ್ರಾರಂಭವಾಗಿ ನಂತರ ಅವು ಚಟವಾಗಿ ಪರಿಣಮಿಸುತ್ತದೆ, ಸುಮಾರು ಹದಿನೈದು-ಇಪ್ಪತ್ತು ವಯಸ್ಸಿನ ಹರೆಯದವರು ಮುಂದಿನ ಘೋರ ಪರಿಣಾಮಗಳ ಅರಿವಿಲ್ಲದೆ ಧೂಮಪಾನ ಮತ್ತು ಧೂಮರಹಿತ ತಂಬಾಕು ಉತ್ಪನ್ನಗಳನ್ನು ಉಪಯೋಗಿಸಲು ಆರಂಭಿಸುತ್ತಾರೆ, ತಂಬಾಕಿನಲ್ಲಿರುವ ನಿಕೋಟಿನ್ ಎಂಬ ವಸ್ತುವೇ ಧೂಮಪಾನ ಚಟಗಳಿಗೆ ಒಳಗಾಗಲು ಕಾರಣವಾಗುತ್ತದೆ. ಇದರಿಂದಾಗಿಯೇ ಧೂಮಪಾನ ಹಾಗೂ ತಂಬಾಕು ಬಳಕೆಯ ವಿರುದ್ಧ ನಡೆಯುತ್ತಿರುವ ಆಂದೋಲನಗಳು ಬಹುಮಟ್ಟಿಗೆ ಯಶಸ್ವಿಯಾಗುತ್ತಿಲ್ಲ. (ಚಿತ್ರ ಕೃಪೆ: ಪಿಟಿಐ)

ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ
ಇತ್ತೀಚಿನ ದಶಕಗಳಲ್ಲಿ ವಿಶ್ವಾದ್ಯಂತ ಧೂಮಪಾನ, ತಂಬಾಕು ಚಟ ಬೆಳೆಯುತ್ತಿರುವ ವೇಗವನ್ನು ನೋಡಿದರೆ ಮುಂಬರುವ ವರ್ಷಗಳಲ್ಲಿ ಶ್ವಾಸಕೋಶಗಳ ಕ್ಯಾನ್ಸರ್ ಸಾಂಕ್ರಾಮಿಕ ರೋಗದಂತೆ ಹರಡಿದರೆ ಅಚ್ಚರಿಯೇನಿಲ್ಲ. ಸಿಗರೇಟ್- ತಂಬಾಕು ಸೇವನೆ ಹೆಚ್ಚಾದಂತೆ ಹೃದಯ ಕಾಯಿಲೆಗಳು, ಕೆಮ್ಮು, ಅಸ್ತಮ, ಪಾರ್ಶ್ವವಾಯು, ಕ್ಷಯ ಹಾಗೂ ಗಂಟಲು, ಧ್ವನಿಪಟ್ಟಿಗೆ, ಶ್ವಾಸಕೋಶ, ಅನ್ನನಾಳ, ಕರಳು, ಮೂತ್ರಕೋಶ, ಮೂತ್ರಪಿಂಡ ಇವೇ ಮೊದಲಾದ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತವೆ.

ನಪುಂಸಕತ್ವಕ್ಕೂ ಕಾರಣ
ಪುರುಷರಲ್ಲಿ ನಪುಂಸಕತ್ವ ಉಂಟಾಗುವಿಕೆಯ ಪ್ರಮಾಣ ಶೇ. 58 ರಷ್ಟು ಹೆಚ್ಚಾಗಿರುತ್ತದೆ. ಮಹಿಳೆಯರಲ್ಲಿ ಅಂಡಾಣುವಿನ ಫಲವತ್ತತೆಯಲ್ಲಿ ಕ್ಷಿಣತೆ, ಮುಟ್ಟಿನಲ್ಲಿ ಏರುಪೇರು, ಗರ್ಭಪಾತ, ಕಡಿಮೆ ತೂಕದ ಶಿಶುಜನನ, ಗರ್ಭಕಂಠದ ಕ್ಯಾನ್ಸರ್ ಕಂಡುಬರುತ್ತದೆ. ಹೆಚ್ಚು ಶ್ವಾಸಕೋಶದ ಖಾಯಿಲೆಗಳಾದ ಬ್ರಾಂಕೈಟೀಸ್ (ಶ್ವಾಸಕೋಶಗಳ ಒಳಪೊರೆಯ ಉರಿಯೂತ) ಎಂಫಿಸೀಮಾ (ಶ್ವಾಸಕೋಶದ ವಾಯುಕೋಶದ ಊತ) ರೋಗಗಳ ಉಲ್ಬಣಗೊಳ್ಳುತ್ತದೆ.

4000 ರಾಸಾಯನಿಕ, 60 ಕ್ಯಾನ್ಸರ್ ಕಾರಕ ವಸ್ತು!
ಸಿಗರೇಟ್ ಮತ್ತು ಬೀಡಿಗಳಲ್ಲಿ ಅಮೋನಿಯಾ ಅರ್ಸೆನಿಕ್, ಕಾರ್ಬನ್ ಮೊನಾಕ್ಸೈಡ್, ಹೈಡ್ರೋಜನ್ ಸೈನೆಡ್, ನಾಪ್ತಾಲಿನ್, ನಿಕೋಟಿನ್, ಟಾರ್, ವಿಕಿರಣವನ್ನುಂಟು ಮಾಡಬಲ್ಲ ಮಿಶ್ರಣಗಳಿರುತ್ತದೆ. ಹಾಗೆಯೇ ಜಗಿಯುವ ತಂಬಾಕಿನಲ್ಲಿ ಕ್ಯಾಡ್ಮಿಯಂ ಪಾರ್ಮಲ್ಡಿಹೈಡ್, ಸುಣ್ಣ, ಮೆಂಥಾಲ್ ಸತುಗಳಿರುತ್ತದೆ, ಅಂದರೆ 4 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳು ಮತ್ತು 60 ಕ್ಯಾನ್ಸರ್ಕಾರಕ ವಸ್ತುಗಳಿವೆ.

ಕಷ್ಟಪಟ್ಟು ಸಂಪಾದಿಸಿದ ಹಣದಿಂದ ರೋಗ ಖರೀದಿಸಬೇಕೆ?
ಜೀವಿತಾವಧಿಯಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನು ಕಳೆಯುವುದರ ಬದಲಾಗಿ ಕುಟುಂಬಕ್ಕೆ ಪೌಷ್ಠಿಕ ಆಹಾರ, ಮಕ್ಕಳ ಶಿಕ್ಷಣ, ಉತ್ಪಾದಕ ಉದ್ದೇಶಗಳಿಗೆ ಉಪಯೋಗಿಸಬಹುದು. ತಂಬಾಕಿನ ಬೆಳೆ ಬೆಳೆಯಲು ಮತ್ತು ಸಂಸ್ಕರಣೆ ಮಾಡಲು ಮರಗಳನ್ನು ಕಡಿಯುವುದರಿಂದ ಅರಣ್ಯನಾಶವಾಗುತ್ತದೆ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಜನಸಾಮಾನ್ಯರನ್ನು ತಂಬಾಕಿನ ದುಷ್ಪರಿಣಾಮಗಳಿಂದ ರಕ್ಷಿಸಲು ಭಾರತ ಸರ್ಕಾರವು ಒಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯಿದೆಯನ್ನು ಜಾರಿಗೊಳಿಸಿದೆ ಈ ಕಾಯಿದೆಯಡಿ ಕೆಳಕಂಡವು ಅಪರಾಧವಾಗುತ್ತದೆ.

ಕಾನೂನಿನ ಬೆಂಬಲ
ಸೆಕ್ಷನ್ 4 ರಂತೆ : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ನಿಯಮ ಮೀರಿದರೆ 200/- ರೂ ವರೆಗೆ ದಂಡ ವಿಧಿಸಲಾಗುವುದು. ಸೆಕ್ಷನ್ 5 ರಲ್ಲಿ : ತಂಬಾಕು ಉತ್ಪನ್ನಗಳ ಜಾಹಿರಾತು ನಿಷೇಧ ನಿಯಮ ಮೀರಿದರೆ ದಂಡ ಮತ್ತು ಸೆರೆವಾಸ ಎರಡನ್ನು ವಿಧಿಸಬಹುದು. ಸೆಕ್ಷನ್ 6(ಎ) ರಲ್ಲಿ : 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಮತು ಖರೀದಿಸಲು ನಿಷೇಧ. ಸೆಕ್ಷನ್ 6(ಬಿ) ; ಶಿಕ್ಷಣ ಸಂಸ್ಥೆಗಳಿಂದ 100 ಗಜ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಸೆಕ್ಷನ್ 7 ರಂತೆ : ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಆರೋಗ್ಯ ಎಚ್ಚರಿಕೆಗಳ ಸಂದೇಶ ಇರಲೇಬೇಕು. ನಿಯಮ ಮೀರಿದರೆ ದಂಡ ಮತ್ತು ಸೆರೆವಾಸ ಎರಡನ್ನು ವಿಧಿಸಲಾಗುವುದು.

ನಿರ್ಮೂಲನೆ ಖಂಡಿತ ಸಾಧ್ಯ
ತಂಬಾಕು ನಿರ್ಮೂಲನೆ ಖಂಡಿತ ಸಾಧ್ಯ, ಇದಕ್ಕೆ ಬೇಕಾಗಿರುವುದು ಮನೋದೃಢತೆ, ಅಚಲ ನಿರ್ಧಾರ ಹಾಗೂ ಮನೋವೈದ್ಯರ ಸಹಾಯ ಹಸ್ತ. ತಂಬಾಕನ್ನು ತ್ಯಜಿಸಿ ಆರೋಗ್ಯಕರ ಜೀವನಕ್ಕೆ ಮುಂದಾಗಿ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications