ಕಿಂಗ್ ಕೋಬ್ರಾಗೂ ಶಾಂಪೂ ಸ್ನಾನ: ವಿಡಿಯೋ ನೋಡಿ ಜನ ಶಾಕ್
ಹಾವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಸದ್ಯ ವೈರಲ್ ಆಗಿರುವ ವಿಡಿಯೋವನ್ನು ನೀವು ಕನಸಿನಲ್ಲೂ ಕಂಡಿರಲು ಸಾಧ್ಯವಿಲ್ಲ. ಯಾಕೆಂದರೆ ಈ ವಿಡಿಯೋದಲ್ಲಿ ಹಾವಿನ ರಾಜ ನಾಗರಹಾವುಗೆ ಸ್ನಾನ ಮಾಡಿಸಲಾಗುತ್ತಿದೆ. ಕೇಳಲು ಆಶ್ಚರ್ಯ ಎನಿಸಿದರು ಇದು ಸತ್ಯ. ಬೃಹತ್ ಗಾತ್ರದ ನಾಗರ ಹಾವಿಗೆ ವ್ಯಕ್ತಿಯೊಬ್ಬ ಪುಟ್ಟ ಮಕ್ಕಳಿಗೆ ಸ್ನಾನ ಮಾಡಿಸುವಂತೆ ಶಾಂಪು ಹಚ್ಚಿ ಸ್ನಾನ ಮಾಡಿಸಿದ್ದಾನೆ. ಇದನ್ನು ಕಂಡ ಜನ ಬಾಯಿಗೆ ಬೆರಳು ಇಟ್ಟುಕೊಂಡಿದ್ದಾರೆ.
ಒಂದೊಮ್ಮೆ ಹಾವು ಈ ಹಾದಿಯಲ್ಲಿದೆ ಅಂದರೆ ಆ ಹಾದಿಯಲ್ಲಿ ಹೋಗುವುದಿರಲಿ ಮಾರ್ಗವನ್ನೇ ಬದಲಿಸುವ ಜನ ಇದ್ದಾರೆ. ಹೀಗಿರುವಾಗ ವಿಶ್ವದ ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ ದೈತ್ಯ ಕಿಂಗ್ ಕೋಬ್ರಾ ಬಳಿ ಸಂಬಂಧಿಯಂತೆ ಕುಳಿತು, ಅದರ ಮುಖ ಮೈ ಶಾಂಪು ಹಚ್ಚಿ ಉಜ್ಜಿ ಸ್ನಾನ ಮಾಡಿಸುವುದು ಅಂದರೆ ನಿಜಕ್ಕೂ ಇದು ಆಶ್ಚರ್ಯವೇ ಸರಿ.

ಸಾಮಾಜಿಕ ಜಾಲತಾಣದಲ್ಲಿ ಹಾವಿನೊಂದಿಗೆ ಸ್ನೇಹದಿಂದ ವರ್ತಿಸುವ, ಅದನ್ನು ಹಿಡಿಯುವ, ಅದನ್ನು ಮುಟ್ಟುವ ಪ್ರಯತ್ನಗಳ ವಿಡಿಯೋಗಳನ್ನು ನಾವು ನೋಡಿದ್ದೇವೆ. ಅವೆಲ್ಲವೂ ಉರಗ ತಜ್ಞ ಅಥವಾ ಅನುಭವಿಗಳ ಎಚ್ಚರಿಕೆಯಿಂದಾಗುತ್ತವೆ. ಈ ವಿಚಾರದಲ್ಲಿ ಸ್ವಲ್ಪ ಯಾವಾರಿದರೂ ಪ್ರಾಣಕ್ಕೆ ಕುತ್ತು ಗ್ಯಾರೆಂಟಿ. ಅದರಲ್ಲೂ ವಿಷಕಾರಿ ಹಾವಿನೊಂದಿಗೆ ಎಷ್ಟು ಜಾಗರೂಕತೆಯಿಂದ ಇದ್ದರೂ ಕಡಿಮೆಯೇ. ಹೀಗಿರುವಾಗ ಈ ವಿಡಿಯೋದಲ್ಲಿ ಬೃಹತ್ ನಾಗರಹಾವು ಮನುಷ್ಯನಿಂದ ಸಲೀಸಾಗಿ ಸ್ನಾನ ಮಾಡಿಸಿಕೊಳ್ಳುತ್ತದೆ ಅಂದರೆ ಇದು ನಿಜಕ್ಕೂ ಅಚ್ಚರಿಯ ವಿಚಾರ.
See the bond between the snake and the person.
— D Prasanth Nair (@DPrasanthNair) November 16, 2022
The background Malayalam song is a movie song where the father gives bath to his kid
Rcvd from WA pic.twitter.com/3RqUfhZINt
@DPrasanthNair ಹೆಸರಿನ ಬಳಕೆದಾರರು ಅಂಗವರ್ ಶಹಾರೆ ಅವರ ಈ ರೋಮಾಂಚಕ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 45 ಸೆಕೆಂಡುಗಳ ಈ ವಿಡಿಯೋ ನೆಟ್ಟಿಗರು ಹುಬ್ಬೇರುವಂತೆ ಮಾಡಿದೆ. ಈ ವಿಡಿಯೊ ಇದುವರೆಗೆ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.
-
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications