ದಕ್ಷಿಣ ಭಾರತಕ್ಕೆ ಬಾಂಗ್ಲಾದೇಶಿ ಉಗ್ರರ ಸ್ಥಳಾಂತರ..?
ಪಶ್ಚಿಮ ಬಂಗಾಳ ರಾಜ್ಯದ ಬರ್ದ್ವಾನ್ ನಗರದಲ್ಲಿ ಬಾಂಬ್ ಸ್ಫೋಟಗೊಂಡ ನಂತರ ಉಗ್ರರು ದಕ್ಷಿಣ ಭಾರತಕ್ಕೆ ತಮ್ಮ ನೆಲೆ ಬದಲಾಯಿಸಿದ್ದಾರೆ. ತೋಟದಲ್ಲಿ ಮಾಲಿಗಳಾಗಿ ಹಾಗೂ ಕಟ್ಟಡಗಳ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಸ್ಫೋಟದ ಪ್ರಮುಖ ಆರೋಪಿಯಾಗಿರುವ ಕೌಸರ್ ಇನ್ನೂ ಬಾಂಗ್ಲಾದೇಶಕ್ಕೆ ಪಾರಾಗಿಲ್ಲ ಹಾಗೂ ಭಾರತದಲ್ಲಿಯೇ ಹಾಯಾಗಿದ್ದಾನೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉದ್ದೇಶಿತ ಕಾರ್ಯಾಚರಣೆಗಾಗಿ ಉಗ್ರರು ಈಗಾಗಲೇ 18 ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿದ್ದಾರೆ ಮತ್ತು ಅದನ್ನು ವ್ಯರ್ಥವಾಗಲು ಖಂಡಿತ ಅವಕಾಶ ನೀಡುವುದಿಲ್ಲ. ದೇಶದೆಲ್ಲೆಡೆ ತಮ್ಮ ಬೆಂಬಲಿಗರನ್ನು ಹೊಂದಿದ್ದಾರೆ. ಸ್ಫೋಟದ ಪ್ರಕರಣವನ್ನು ಜನರು ಮರೆಯುತ್ತಿದ್ದಂತೆ ಬೆಂಗಲಿಗರು ಚಟುವಟಿಕೆ ಆರಂಭಿಸಬಹುದು.

ಜೆಎಂಬಿ ಕಾರ್ಯಾಚರಣೆ ದಕ್ಷಿಣಕ್ಕೆ ಸ್ಥಳಾಂತರ?
ಭಾರತೀಯರಂತೆ ನಟಿಸುತ್ತಿರುವ ಬಾಂಗ್ಲಾದೇಶ ಮೂಲದ ಉಗ್ರರ ಸಂಖ್ಯೆ ಸುಮಾರು 6000 ದಷ್ಟಿದೆ. ದಕ್ಷಿಣ ಭಾರತಕ್ಕೆ ಸ್ಥಳಾಂತರಗೊಂಡಿರುವ ಅವರು ಹಾಗೂ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಂತೆ ನಟಿಸುತ್ತಿದ್ದಾರೆ. ಇವರೆಲ್ಲ ತಾವು ಭಾರತದ ಪ್ರಜೆಗಳು ಎಂಬುದಕ್ಕೆ ಅಧಿಕೃತ ದಾಖಲೆಗಳನ್ನು ಹೊಂದಿದ್ದಾರೆ. ಆದ್ದರಿಂದ ನಾವು ಅಸಹಾಯಕರಾಗಿದ್ದೇವೆಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.
ಅವರೆಲ್ಲರೂ ದೀರ್ಘ ಕಾಲದವರೆಗೆ ಬೇರೆ ಬೇರೆಯಾಗಿ ಉಳಿಯುತ್ತಾರೆ. ನಂತರ ಮತ್ತೆ ಒಂದಾಗಿ ಚಟುವಟಿಕೆ ಆರಂಭಿಸುತ್ತಾರೆ. ತಾವು ನಡೆಸಬೇಕಾದ ಕಾರ್ಯಾಚರಣೆಗಾಗಿ ದೀರ್ಘ ಕಾಲದವರೆಗೆ ಕಾಯಬೇಕೆಂಬುದನ್ನೂ ಅವರು ಅರಿತಿದ್ದಾರೆ. 2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯ ನಂತರ ಸುಮಾರು ಆರು ವರ್ಷಗಳ ಕಾಲ ಸುಮ್ಮನಿದ್ದು ಮತ್ತೆ ಈಗ ಚಟುವಟಿಕೆ ಆರಂಭಿಸಿದ್ದಾರೆ. ಇದು ಅವರ ಸಹನೆಯ ಶಕ್ತಿಗೆ ಸಾಕ್ಷಿ ಎಂದರು.
ಜೆಎಂಬಿ ಮತ್ತು ಅಲ್-ಉಮ್ಮಾಹ್ ಮಧ್ಯೆ ಸೈದ್ಧಾಂತಿಕ ಸ್ನೇಹ
ಜೆಎಂಬಿ ಹಾಗೂ ಅಲ್-ಉಮ್ಮಾಹ್ ಸಿದ್ಧಾಂತಗಳು ಹೆಚ್ಚು ಹೊಂದಿಕೆಯಾಗುವ ಕಾರಣ ಇವೆರಡೂ ಜತೆಯಾಗಿ ಕಾರ್ಯ ಕೈಗೊಳ್ಳುತ್ತಿವೆ. ಸಿಮಿ ಜತೆ ಸಂಬಂಧವನ್ನೂ ಹೊಂದಿದ್ದವು. ಜೆಎಂಬಿ ಸದಸ್ಯರು ನಿರಾಶ್ರಿತರನ್ನು ತಲುಪಲು ಅಲ್-ಉಮ್ಮಾಹ್ ಸಹಾಯ ಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಎರಡೂ ಸಂಘಟನೆಗಳು ಸೇರಿರುವ ಹಿನ್ನೆಲೆಯಲ್ಲಿ ಜೆಎಂಬಿ ಸದಸ್ಯರು ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಆಶ್ರಯ ಪಡೆದಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಇಂಥವರನ್ನು ಪತ್ತೆ ಹಚ್ಚಲು ಎನ್ಐಎ ಸ್ಥಳೀಯ ಪೊಲೀಸರ ನೆರವು ಪಡೆಯಲಿದೆ. ಈ ಕುರಿತು ವಿಶೇಷ ಸೂಚನೆಗಳನ್ನೂ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications