ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಡವಾಗಿ ಹೊರಟ ವಿಮಾನದೊಳಗೆ ವಿಮಾನಯಾನ ಸಚಿವರು ಸಿಕ್ಕಿಹಾಕಿಕೊಂಡಾಗ...

By Sachhidananda Acharya
|
Google Oneindia Kannada News

ನವದೆಹಲಿ, ಡಿಸೆಂಬರ್ 14: ಸ್ಥಳ ನವದೆಹಲಿ.. ಅಲ್ಲಿ ನಿಂತಿದ್ದದ್ದು ವಿಜಯವಾಡಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ.. ವಿಮಾನದೊಳಗೆ 100ಕ್ಕೂ ಹೆಚ್ಚು ಪ್ರಯಾಣಿಕರು.. ಒಂದೂವರೆ ಗಂಟೆ ನೆಲ ಬಿಟ್ಟು ಕದಡದ ವಿಮಾನ.. ಅಲ್ಲಿ ತಾಳ್ಮೆಯ ಕಟ್ಟೆ ಒಡೆದ ಪ್ರಯಾಣಿಕರ ಜತೆ ವಿಮಾನದೊಳಗಿದ್ದರು ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು!

ಸದ್ಯ ವಿಮಾನದೊಳಗಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಈ ಎಲ್ಲಾ ಘಟನೆ ನಡೆದಿದ್ದು ಬುಧವಾರ ಬೆಳಿಗ್ಗೆ.

Aviation Minister Faces Angry Passengers Inside Delayed Flight

ತಡವಾಗಿ ಹೊರಟ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರಯಾಣಿಕರು ಆಕ್ರೋಶಿತರಾಗಿದ್ದರು. ಅದೇ ವೇಳೆಗೆ ವಿಮಾನಯಾನ ಸಚಿವರು ವಿಮಾನದಲ್ಲೇ ಸಿಕ್ಕರೆ ಕೇಳಬೇಕೇ?

ಎಲ್ಲರೂ ಸೇರಿ ವಿಮಾನದೊಳಗೆಯೇ ಅಶೋಕ್ ಗಜಪತಿರಾಜು ಅವರಿಗೆ ಕ್ಲಾಸ್ ತೆಗೆದುಕೊಂಡರು. ಪ್ರಯಾಣಿಕರ ಪ್ರತಿಭಟನೆಯಿಂದ ಮುಜುಗರ ಅನುಭವಿಸಿದ ರಾಜು ನೇರವಾಗಿ ಏರ್ ಇಂಡಿಯಾ ಮುಖ್ಯಸ್ಥ ಪ್ರದೀಪ್ ಸಿಂಗ್ ಖರೋಲಾಗೆ ಫೋನಾಯಿಸಿ ತಮ್ಮ ಅಸಹನೆ ತೋಡಿಕೊಂಡರು.

ಪರಿಣಾಮ ತಕ್ಷಣ ಮೂವರು ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ಜತೆಗೆ ತಡವಾಗಿ ಬಂದ ಪೈಲಟ್ ಗೆ ಎಚ್ಚರಿಕೆ ನೀಡಲಾಗಿದೆ.

English summary
Air India AI 459 Delhi to Vijayawada flight was on Wednesday delayed by around 1.30 hours with over 100 passengers including minister of civil aviation P Ashok Gajapati Raju onboard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X