ನೈತಿಕ ಪೊಲೀಸ್ ಗಿರಿ ಅಲ್ಲ, ಬಗ್ಗುಬಡಿಯುವ ಕಾರ್ಯ: ಉ.ಪ್ರ. ಡಿಐಜಿ
ಬೀದಿ ಕಾಮಣ್ಣರನ್ನು ಹತ್ತಿಕ್ಕಲು ಆರಂಭವಾಗಿರುವ ಪೊಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರು ನೈತಿಕ ಪೊಲೀಸ್ ಗಿರಿ ಅನುಸರಿಸುತ್ತಿದ್ದಾರೆಂದು ಹೇಳಲಾಗಿತ್ತು. ಇದನ್ನು ಅಲ್ಲಿನ ಡಿಐಜಿ ಅಲ್ಲಗಳೆದಿದ್ದಾರೆ.
ಲಕ್ನೋ, ಜನವರಿ 22: ಉತ್ತರ ಪ್ರದೇಶದಲ್ಲಿ ಬೀದಿ ಕಾಮಣ್ಣರ ವಿರುದ್ಧ ಆರಂಭವಾಗಿರುವ ಪೊಲೀಸರ ಕಾರ್ಯಾಚರಣೆಯು ನೈತಿಕ ಪೊಲೀಸ್ ಗಿರಿಯಿಂದ ಕೂಡಿಲ್ಲ. ಹೆಂಗಸರನ್ನು ಕಾಡುವ ಯಾರೇ ಆಗಿರಲಿ, ಅವರನ್ನು ಬಗ್ಗು ಬಡಿದು ಜೈಲು ಪಾಲು ಮಾಡುವ ಕಠಿಣ ಕ್ರಮವನ್ನು ಅದು ಒಳಗೊಂಡಿದೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಎಸ್. ಜಾವೇದ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಯುವತಿಯರನ್ನು ಚುಡಾಯಿಸುವ, ಅವರಿಗೆ ಲೈಂಗಿಕ ಕಿರುಕುಳ ಕೊಡುವ ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ಡೆಯಡಿ ಪ್ರಕರಣದ ದಾಖಲಿಸಿ ಅವರನ್ನು ಜೈಲಿಗೆ ತಳ್ಳುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ಆದರೆ, ಈ ಬಗ್ಗೆ ಕೆಲವಾರು ಊಹಾಪೋಹಗಳೂ ಹರಡಿದ್ದು ಪೊಲೀಸರು ನೈತಿಕ ಪೊಲೀಸ್ ಗಿರಿ ಅನುಸರಿಸುತ್ತಿದ್ದಾರೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಟ್ವೀಟ್ ಮಾಡಿರುವ ಜಾವೇದ್, ಈ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.












Click it and Unblock the Notifications