ನಿಧಿಗಾಗಿ ನಿಂಬೆ ತೋಟದಲ್ಲಿ ಮಾಟಮಂತ್ರ ಮಾಡುತ್ತಿದ್ದ ನಾಲ್ವರ ಬಂಧನ
ಅಮರಾವತಿ, ಅಕ್ಟೋಬರ್ 23: ದಕ್ಷಿಣ ಭಾರತದಲ್ಲಿ ಮೂಢನಂಬಿಕೆಯ ಮತ್ತೊಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದ್ದು, ಆಂಧ್ರಪ್ರದೇಶ ಪೊಲೀಸರು ನೂಜಿವೀಡು ಕ್ಷೇತ್ರದ ಮುಸುನೂರು ಮಂಡಲದಲ್ಲಿ ಮಾಟಮಂತ್ರ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಈ ನಾಲ್ವರು ಪೆಡಪತಿವಾರಿಗುಡೆಂ ಗ್ರಾಮದಲ್ಲಿ ಗುಪ್ತ ನಿಧಿಗಳನ್ನು ಅಗೆಯಲು ಮಧ್ಯರಾತ್ರಿಯಲ್ಲಿ ಅತೀಂದ್ರಿಯ ಪೂಜೆ ಮತ್ತು ಮಾಟಮಂತ್ರ ಮಾಡುತ್ತಿದ್ದು ಸಿಕ್ಕಿಬಿದ್ದಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ (ಎಸ್ಐ) ಕುಟುಂಬ ರಾವ್ ಮಾಹಿತಿ ನೀಡಿದ್ದಾರೆ. ಮುಸುನೂರು ಮಂಡಲದ ಗೋಪಾವರಂ ಗ್ರಾಮದ ಉಪನಗರದಿಂದ ಘಟನೆ ವರದಿಯಾಗಿದೆ.
ಈ ಗ್ರಾಮದ ರೈತರೊಬ್ಬರಾದ ಬೋಡ ರಾಜೇಶ್ ಅವರು ಸಂಪತ್ತು ಪಡೆಯಲು ಶುಕ್ರವಾರ ಮಧ್ಯರಾತ್ರಿ ತಮ್ಮ ನಿಂಬೆ ತೋಟದಲ್ಲಿ ಕ್ಷುದ್ರ ಪೂಜೆ ಹಾಗೂ ಅಗೆತ ನಡೆಸುತ್ತಿದ್ದ ದೃಶ್ಯ ಕಂಡು ಬಂದಿದೆ. ನಾಲ್ವರು ನಿಂಬೆ ಹಣ್ಣಿನ ತೋಟದಲ್ಲಿ ಒಟ್ಟಿಗೆ ಇದ್ದು, ಬೋಡ ರಾಜೇಶ್ ಅಗೆಯುತ್ತಿದ್ದಾಗ ಅವರ ಕೈ ಹಿಡಿಯಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಾಟಮಂತ್ರ, ಕ್ಷುದ್ರ ಪೂಜೆ, ಗುಪ್ತ ಸಂಪತ್ತು ಅಗೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಣದ ಆಮಿಷವೊಡ್ಡಿ ಇಬ್ಬರು ಮಹಿಳೆಯರನ್ನು ಧಾರ್ಮಿಕ ವಿಧಿವಿಧಾನದ ಹೆಸರಿನಲ್ಲಿ ಬರ್ಬರವಾಗಿ ಹತ್ಯೆಗೈದ ಕೇರಳದ ನರಬಲಿ ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರು ನಡೆಸಿದ ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಕೊಚ್ಚಿ ಪ್ರಕರಣದಲ್ಲಿ ಸಾಕ್ಷ್ಯ ಸಂಗ್ರಹದ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಈ ಪ್ರಕರಣದಲ್ಲಿ ಸೈಬರ್ ಪುರಾವೆಗಳು ಮುಖ್ಯವಾದ ಕಾರಣ ಅವರು ಸೈಬರ್ ಸಾಕ್ಷ್ಯವನ್ನು ಅವಲಂಬಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ರಿಮಾಂಡ್ ವರದಿಯು ಹೃದಯವಿದ್ರಾವಕ ನರಬಲಿಗಳನ್ನು ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಆಚರಣೆಯ ಭಾಗವಾಗಿ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಪತ್ತನಂತಿಟ್ಟ ಜಿಲ್ಲೆಯ ಆರೋಪಿ ಭಗವಲ್ ಸಿಂಗ್ ಮತ್ತು ಲೈಲಾ ಅವರ ನಿವಾಸದ ಬಳಿಯ ಹೊಂಡಗಳಿಂದ ಅಲ್ಲಿ ಪದ್ಮ ಮತ್ತು ರೋಸ್ಲಿನ್ ಎಂದು ಗುರುತಿಸಲಾದ ಇಬ್ಬರು ಮೃತ ಮಹಿಳೆಯರ ಅವಶೇಷಗಳನ್ನು ನಂತರ ಹೊರತೆಗೆಯಲಾಯಿತು.

ಶವಗಳನ್ನು ಹೂಳುವ ಮೊದಲು ಶವ ಕತ್ತರಿಸಿದ್ದರು
ಪೊಲೀಸರ ಪ್ರಕಾರ, ಆರೋಪಿಗಳು ಹಣದ ಭರವಸೆ ನೀಡಿ ಸಂತ್ರಸ್ತರಿಗೆ ಆಮಿಷವೊಡ್ಡಿದ್ದರು. ಆರೋಪಿಗಳು ಸಂತ್ರಸ್ತರ ಶವಗಳನ್ನು ಹೂಳುವ ಮೊದಲು ಕತ್ತರಿಸಿ ಹಾಕಿದ್ದರು ಎಂದು ರಿಮಾಂಡ್ ವರದಿಯಲ್ಲಿ ತಿಳಿಸಲಾಗಿದೆ. ಆರೋಪಿಯಿಂದ ಹಲವು ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿಗಳು ಕಟುಕ ಶೈಲಿಯಲ್ಲಿ ದೇಹಗಳನ್ನು ವಿರೂಪಗೊಳಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಶಫಿಯೊಂದಿಗೆ ಅಪರಾಧ ಮಾಡಲು ಸಂಚು
ವರದಿಗಳ ಪ್ರಕಾರ, ಸಂತ್ರಸ್ತೆ ಪದ್ಮಾ ಅವರಿಗೆ ಸೇರಿದ 39 ಗ್ರಾಂ ಚಿನ್ನವನ್ನು ಶಫಿ 1 ಲಕ್ಷ ರೂ.ಗೆ ಅಡಮಾನವಿಟ್ಟಿದ್ದು, ಅದರಲ್ಲಿ 40,000 ರೂ.ಗಳನ್ನು ತನ್ನ ಪತ್ನಿಗೆ ನೀಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿ ಪತಿ-ಪತ್ನಿ ಜೋಡಿ ಭಗವಲ್ ಸಿಂಗ್ ಮತ್ತು ಲೈಲಾ ಪ್ರಧಾನ ಆರೋಪಿ ಮುಹಮ್ಮದ್ ಶಾಫಿಯೊಂದಿಗೆ ಅಪರಾಧಗಳನ್ನು ಮಾಡಲು ಸಂಚು ರೂಪಿಸಿದ್ದರು.

ಲೈಂಗಿಕ ಕೆಲಸಕ್ಕೆ 15,000 ರೂ. ಆಮಿಷ
ಸೆಪ್ಟೆಂಬರ್ 26 ರಂದು, ಕೊಚ್ಚಿಯಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ 52 ವರ್ಷದ ಪದ್ಮಾ ಅವರನ್ನು ಶಾಫಿ ಸಂಪರ್ಕಿಸಿದರು ಮತ್ತು ಲೈಂಗಿಕ ಕೆಲಸಕ್ಕೆ 15,000 ರೂ.ಗಳನ್ನು ನೀಡುವುದಾಗಿ ಆಮಿಷ ಒಡ್ಡಿದ್ದರು. ನಂತರ ಆಕೆ ಒಪ್ಪಿ ಶಫಿಯೊಂದಿಗೆ ಪತ್ತನಂತಿಟ್ಟ ಜಿಲ್ಲೆಯ ಭಗವಲ್ ಸಿಂಗ್ ಮತ್ತು ಲೈಲಾ ಅವರ ಮನೆಗೆ ಹೋದಳು. ಅಲ್ಲಿ ಆರೋಪಿಗಳು ಆಕೆಯ ಕುತ್ತಿಗೆಗೆ ಪ್ಲಾಸ್ಟಿಕ್ ದಾರದಿಂದ ಕತ್ತು ಹಿಸುಕಿ ಆಕೆಯನ್ನು ಪ್ರಜ್ಞಾಹೀನಗೊಳಿಸಿದ್ದಾರೆ. ಬಳಿಕ ಶಾಫಿ ಪದ್ಮಾಳ ಖಾಸಗಿ ಅಂಗಗಳನ್ನು ಚಾಕುವಿನಿಂದ ಛಿದ್ರಗೊಳಿಸಿ ಕತ್ತು ಸೀಳಿದ್ದಾನೆ. ಆ ಬಳಿಕ ಆಕೆಯನ್ನು 56 ತುಂಡುಗಳಾಗಿ ಕತ್ತರಿಸಿ, ಛಿದ್ರಗೊಂಡಿದ್ದ ದೇಹದ ಭಾಗಗಳನ್ನು ಬಕೆಟ್ಗಳಲ್ಲಿ ಹಾಕಿ ಗುಂಡಿಯಲ್ಲಿ ಹೂತು ಹಾಕಿದ್ದಾರೆ ಎಂದು ವರದಿ ವಿವರಿಸಿದೆ.

ವಿಕೃತ ಮತ್ತು ಕ್ರಿಮಿನಲ್ ಹಿನ್ನೆಲೆಯವನು
ಆರೋಪಿಗಳು ಸಂತ್ರಸ್ತರ ಮಾಂಸವನ್ನು ತಿಂದಿರುವ ನರಭಕ್ಷಕತೆಯ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಚ್ಚಿ ಪೊಲೀಸ್ ಕಮಿಷನರ್ ಸಿ.ಎಚ್.ನಾಗರಾಜು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಮುಖ ಆರೋಪಿ ಶಾಫಿ ವಿಕೃತ ಮತ್ತು ಕ್ರಿಮಿನಲ್ ಹಿನ್ನೆಲೆಯವನು ಎಂದು ಹೇಳಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications