ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

107 'ಶೌರ್ಯ ಪ್ರಶಸ್ತಿ'ಗೆ ಮುರ್ಮು ಅಸ್ತು: ಹುತಾತ್ಮ ಶ್ವಾನಕ್ಕೆ ಪ್ರಶಸ್ತಿ

|
Google Oneindia Kannada News

ಬೆಂಗಳೂರು ಆಗಸ್ಟ್ 15: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾ ದಿನ ಸಶಸ್ತ್ರ ಪಡೆಗಳು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 107 'ಶೌರ್ಯ ಪ್ರಶಸ್ತಿ' ಗಳಿಗೆ ಅನುಮೋದನೆ ನೀಡಿದ್ದಾರೆ.

ಮುಖ್ಯವಾಗಿ ಜಮ್ಮು- ಕಾಶ್ಮೀರದ ಪುಲ್ವಾಮಾ ದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ವಿರುದ್ಧ ಅದಮ್ಯ ಧೈರ್ಯ ಪ್ರದರ್ಶಿಸಿದ್ದರಿಂದ ಸೇನೆಯ ರಾಷ್ಟ್ರೀಯ ರೈಫಲ್ಸ್‌ನ ನಾಯಕ್ ದೇವೇಂದ್ರ ಪ್ರತಾಪ್ ಸಿಂಗ್ ಅವರು 'ಕೀರ್ತಿಚಕ್ರ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅದಲ್ಲದೇ ಸೇನೆ, ಸಶಸ್ತ್ರಪಡೆಗಳಲ್ಲಿ ಧೈರ್ಯ, ಸಾಹಸ ಮೆರೆದ ಯೋಧರಿಗೆ ವಿವಿಧ ಪ್ರಶಸ್ತಿ, ಗೌರವಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ.

ಸಂಸತ್ತು ರೌಂಡಪ್: ದ್ರೌಪದಿ ಮುರ್ಮು ಕುರಿತು ಕಾಂಗ್ರೆಸ್ ನಾಯಕರ ಟೀಕೆ- ಕ್ಷಮೆಗೆ ಒತ್ತಾಯ ಸಂಸತ್ತು ರೌಂಡಪ್: ದ್ರೌಪದಿ ಮುರ್ಮು ಕುರಿತು ಕಾಂಗ್ರೆಸ್ ನಾಯಕರ ಟೀಕೆ- ಕ್ಷಮೆಗೆ ಒತ್ತಾಯ

ತಿಂಗಳ ಹಿಂದೆ ಕಾಶ್ಮೀರದಲ್ಲಿನ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕ-ವಿರೋಧಿ ಕಾರ್ಯಾಚರಣೆಯ ವೇಳೆ ಭಯೋತ್ಪಾದಕರಿಂದ ಗುಂಡಿಗೆ ಬಲಿಯಾದ ಆರ್ಮಿ ಶ್ವಾನ ಆಕ್ಸೆಲ್, ವಿಶಿಷ್ಟ ಮತ್ತು ಅರ್ಹ ಸೇವೆಯನ್ನು ಗುರುತಿಸುವ 42 'ಪ್ರಸ್ತಾಪನೆಯಲ್ಲಿ-ಡೆಸ್ಪ್ಯಾಚ್'ಗಳ ಪಟ್ಟಿಗೆ ಸೇರಿದೆ. ಅಶೋಕ ಚಕ್ರ ಬಳಿಕ 'ಕೀರ್ತಿಚಕ್ರ'ವು ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ.

Amrit Mahotsav Draupadi Murmu by Approved of 107 Shaurya Awards

ಬಿಎಸ್‌ಎಫ್‌ನ ಪೇದೆ ಸುದೀಪ್ ಸರ್ಕಾರ್ ಮತ್ತು ಉಪ ಪೇದೆ ಪಯೋಟಿನ್ ಸಾಟ್ ಗೈಟ್ ಅವರಿಗೆ ಮರಣೋತ್ತರವಾಗಿ 'ಕೀರ್ತಿಚಕ್ರ' ನೀಡಿ ಗೌರವಿಸಲಾಗುತ್ತಿದೆ ಎಂದು ರಾಷ್ಟ್ರಪತಿಗಳ ಅನುಮೋದನೆ ಪಟ್ಟಿ ತಿಳಿಸಿದೆ.

ಪಟ್ಟಿ ಎಷ್ಟು ಪ್ರಶಸ್ತಿ ಒಳಗೊಂಡಿದೆ

ಒಟ್ಟು ಘೋಷಣೆಗೊಂಡ ಪ್ರಶಸ್ತಿ ಪೈಕಿ ಮೂರು 'ಕೀರ್ತಿ ಚಕ್ರ, 13 'ಶೌರ್ಯಚಕ್ರ' ಪ್ರಶಸ್ತಿ ಎರಡು 'ಬಾರ್ ಟು ಸೇನಾ ಪದಕ'(ಶೌರ್ಯ), 81 ಸೇನಾ ಪದಕ(ಶೌರ್ಯ)', 1 'ನವಸೇನಾ' ಪದಕ (ಶೌರ್ಯ) ಮತ್ತು 7 'ವಾಯುಸೇನಾ' ಪದಕ(ಶೌರ್ಯ)ಗಳು ಒಳಗೊಂಡಿವೆ. ವಿವಿಧ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಕೊಡುಗೆಗಳಿಗಾಗಿ ಸೈನ್ಯಕ್ಕೆ 40 ಮೆನ್ಷನ್ ಇನ್ ಡೆಸ್ಪ್ಯಾಚ್'ಗಳನ್ನು ಘೋಷಿಸಲಾಗಿದೆ. ಒಬ್ಬ ಏರ್‌ರ್ಫೋರ್ಸ್ ಸಿಬ್ಬಂದಿಗೆ ಹಾಗೂ ಮತ್ತೊಂದು ಸೇನಾ ಶ್ವಾನ ಆಕ್ಸೆಲ್‌ಗೆ ನೀಡುವ (ಮರಣೋತ್ತರ) ಪ್ರಶಸ್ತಿ ನೀಡಲಾಗುತ್ತಿದೆ.

Amrit Mahotsav Draupadi Murmu by Approved of 107 Shaurya Awards

ಪುಲ್ವಾಮಾದಲ್ಲಿ ನಡೆದಿದ್ದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿಯಲ್ಲಿ ಎದೆಕೊಟ್ಟು ನಿಂತ ರಾಷ್ಟ್ರೀಯ ರೈಫಲ್ಸ್‌ನ 55ನೇ ಬೆಟಾಲಿಯನ್ ಆರ್ಮಡ್ ಕಾರ್ಪ್ಸ್‌ ನಾಯಕ್ ದೇವೇಂದ್ರ ಪ್ರತಾಪ್ ಸಿಂಗ್ ಅವರಯ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರು. ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕನನ್ನು ಪತ್ತೆಹಚ್ಚಲು ಸಹಾಯ ಮಾಡಿದ ನಂತರ ಬೆಲ್ಜಿಯಂನ ಮಾಲಿನೊಯಿಸ್ ಎಂಬ ಸೇನಾ ನಾಯಿ ಆಕ್ಸೆಲ್ ಅನ್ನು ಕೊಲ್ಲಲಾಯಿತು ಎಂದು ಸೇನಾ ಸಾಹಸ ಕಾರ್ಯ ಬಗ್ಗೆ ವಿವರಿಸಲಾಗಿದೆ. ಜತೆಗೆ ಅಧ್ಯಕ್ಷ ಮುರ್ಮು ಅವರು ಇದೇ ವೇಳೆ 'ರಾಷ್ಟ್ರಪತಿಗಳ ತತ್ರಾಕ್ಷಕ್ ಪದಕ' ನೀಡಿ ಗೌರವಿಸುವ ಹೊಸ ಪ್ರಕ್ರಿಯೆಗೂ ಈವರ್ಷದಿಂದ ಅನುಮೋದನೆ ನೀಡಿದರು ಎಂದು ತಿಳಿದು ಬಂದಿದೆ.

English summary
The President of India Draupadi Murmu Approved to 107 'Shaurya Awards' before day celebration of 75th Independence day celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X