ಕೃತಕ ಬುದ್ದಿಮತ್ತೆ ಮನುಕುಲಕ್ಕೆ ಹಾನಿಕಾರಕ : ಸ್ಟಿಫನ್ ಹಾಕಿಂಗ್
ನ್ಯೂಸ್ ಇಂಡಿಯಾ, ನವೆಂಬರ್ 29 : ಈಗ ಎಲ್ಲೆಲ್ಲೂ ಕೃತಕ ಬುದ್ದಿಮತ್ತೆಯದ್ದೆ ಮಾತು, ಗೂಗಲ್, ಫೆಸ್ ಬುಕ್, ಜಪಾನಿನ ಹಲವು ಪ್ರತಿಷ್ಟಿತ ಕಂಪೆನಿಗಳು ಕೃತಕ ಬುದ್ದಿಮತ್ತೆಯ (ಎ.ಐ) ಹಿಂದೆ ಬಿದ್ದಿವೆ.
ಇತ್ತೀಚೆಗೆ ಫೇಸ್ ಬುಕ್ ಕೃತಕ ಬುದ್ದಿಮತ್ತೆ ಯಂತ್ರವೊಂದನ್ನು ಪರೀಕ್ಷೆ ನಡೆಸುವ ಸಂದರ್ಭ ಯಂತ್ರದ ಕಾರ್ಯಾಚರಣ ವ್ಯವಸ್ಥೆ ಹೊಸದೆ ಭಾಷೆಯನ್ನು ತನ್ನಷ್ಟಕ್ಕೆ ತಾನೇ ಸೃಷ್ಠಿಮಾಡಿಸಿಕೊಂಡಿದ್ದು, ಕೃತಕ ಬುದ್ದಿಮತ್ತೆ ಹಿಂದೆ ಬಿದ್ದಿದ್ದ ವಿಜ್ಞಾನಿಗಳಲ್ಲಿ ಗಾಬರಿ ಹುಟ್ಟಿಸಿದೆ. ಜನರಲ್ಲಿಯೂ ಕೃತಕ ಬುದ್ದಿಮತ್ತೆಯ ಬಗ್ಗೆ ಭಯ ಮೂಡಲು ಪ್ರಾರಂಭಿಸಿದೆ.

ಕೃತಕ ಬುದ್ದಿಮತ್ತೆ ಹೊಂದಿದ ಯಂತ್ರಗಳು ಅಥವಾ ರೊಬಾಟ್ ಗಳು ತನ್ನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತವೆ. ಹಾಗಾಗಿ ಅವುಗಳ ಮೇಲೆ ಮಾನವರ ಹಿಡಿತ ಇರುವುದಿಲ್ಲ ಇದೆ ವಿಜ್ಞಾನಿಗಳ ಭಯಕ್ಕೆ ಮೂಲ ಕಾರಣ. ಆದರೆ ಇದು ಮಾನವನ ಕೆಲಸವನ್ನು ವಿಪರೀತ ಸರಳ ಮಾಡಿಬಿಡಬಲ್ಲದು ಎಂಬುದು ಕೃತಕ ಬುದ್ದಿಮತ್ತೆ ಯಂತ್ರಗಳ (ಎ.ಐ) ಪರವಾಗಿರುವವರ ವಾದ.
ಆದರೆ ಜಗತ್ತಿನಲ್ಲಿನ ಎಲ್ಲ ವಿಜ್ಞಾನಿಗಳು ಗೌರವಿಸುವ, ಪ್ರಸ್ತುತ ಭೂಮಿಮೇಲೆ ಬದುಕಿರುವ ನಂ.1 ವಿಜ್ಞಾನಿ ಎಂದೇ ಕರೆಯಲ್ಪಡುವ ಸ್ಟಿಫನ್ ಹಾಕಿಂಗ್ ಅವರು ಕೃತಕ ಬುದ್ದಿಮತ್ತೆ ಬಗ್ಗೆ ನಿರಾಶಾದಾಯಕ ಮಾತುಗಳನ್ನಾಡಿದ್ದಾರೆ.
ಕೃತಕ ಬುದ್ದಿಶಕ್ತಿ ಸಣ್ಣ ಪುಟ್ಟ ಸಹಾಯವನ್ನು ಮನುಕುಲಕ್ಕೆ ಮಾಡಬಹುದು, ಆದರೆ ಅದು ಮಾಡುವ ಕೆಡುಕುಗಳು ಬಹಳಷ್ಟು ಎಂದು ತಾರ್ಕಿಕ ಭವಿಷ್ಯ ನುಡಿದಿದ್ದಾರೆ.
ಲಿಸ್ಬಾನ್ ನಲ್ಲಿ ನಡೆದ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೃತಕ ಬುದ್ದಿಮತ್ತೆಯನ್ನು ನಿಯಂತ್ರಿಸುವ ಸಾಧನ ತಯಾರಿಸದೆ ಕೃತಕ ಬುದ್ದಿಮತ್ತೆ ತಯಾರಿಸುವುದು ಅಪಾಯಕಾರಿ ಎಂದ ಅವರು 'ಕೃತಕ ಬುದ್ದಿಮತ್ತೆ ಸಾಧನಗಳು ಮನುಷ್ಯನ ಬುದ್ದಿವಂತಿಕೆಯನ್ನು ಅನುಸರಿಸಿ ಅದನ್ನು ಮೀರಲು ಪ್ರಯತ್ನಿಸುತ್ತವೆ ಇದು ಬಹು ದೊಡ್ಡ ಅಪಾಯ ಎಂದು ಅವರು ಎಚ್ಚರಿಸಿದ್ದಾರೆ.
ಸ್ಟಿಫನ್ ಹಾಕಿಂಗ್ ಅವರ ಎಚ್ಚರಿಕೆಯಿಂದ ಕೃತಕ ಬುದ್ದಿಮತ್ತೆ ಸಂಶೋದನೆಗೆ ಹಿನ್ನಡೆ ಆಗಲಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications