ಕೃತಕ ಬುದ್ದಿಮತ್ತೆ ಮನುಕುಲಕ್ಕೆ ಹಾನಿಕಾರಕ : ಸ್ಟಿಫನ್ ಹಾಕಿಂಗ್
ನ್ಯೂಸ್ ಇಂಡಿಯಾ, ನವೆಂಬರ್ 29 : ಈಗ ಎಲ್ಲೆಲ್ಲೂ ಕೃತಕ ಬುದ್ದಿಮತ್ತೆಯದ್ದೆ ಮಾತು, ಗೂಗಲ್, ಫೆಸ್ ಬುಕ್, ಜಪಾನಿನ ಹಲವು ಪ್ರತಿಷ್ಟಿತ ಕಂಪೆನಿಗಳು ಕೃತಕ ಬುದ್ದಿಮತ್ತೆಯ (ಎ.ಐ) ಹಿಂದೆ ಬಿದ್ದಿವೆ.
ಇತ್ತೀಚೆಗೆ ಫೇಸ್ ಬುಕ್ ಕೃತಕ ಬುದ್ದಿಮತ್ತೆ ಯಂತ್ರವೊಂದನ್ನು ಪರೀಕ್ಷೆ ನಡೆಸುವ ಸಂದರ್ಭ ಯಂತ್ರದ ಕಾರ್ಯಾಚರಣ ವ್ಯವಸ್ಥೆ ಹೊಸದೆ ಭಾಷೆಯನ್ನು ತನ್ನಷ್ಟಕ್ಕೆ ತಾನೇ ಸೃಷ್ಠಿಮಾಡಿಸಿಕೊಂಡಿದ್ದು, ಕೃತಕ ಬುದ್ದಿಮತ್ತೆ ಹಿಂದೆ ಬಿದ್ದಿದ್ದ ವಿಜ್ಞಾನಿಗಳಲ್ಲಿ ಗಾಬರಿ ಹುಟ್ಟಿಸಿದೆ. ಜನರಲ್ಲಿಯೂ ಕೃತಕ ಬುದ್ದಿಮತ್ತೆಯ ಬಗ್ಗೆ ಭಯ ಮೂಡಲು ಪ್ರಾರಂಭಿಸಿದೆ.

ಕೃತಕ ಬುದ್ದಿಮತ್ತೆ ಹೊಂದಿದ ಯಂತ್ರಗಳು ಅಥವಾ ರೊಬಾಟ್ ಗಳು ತನ್ನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತವೆ. ಹಾಗಾಗಿ ಅವುಗಳ ಮೇಲೆ ಮಾನವರ ಹಿಡಿತ ಇರುವುದಿಲ್ಲ ಇದೆ ವಿಜ್ಞಾನಿಗಳ ಭಯಕ್ಕೆ ಮೂಲ ಕಾರಣ. ಆದರೆ ಇದು ಮಾನವನ ಕೆಲಸವನ್ನು ವಿಪರೀತ ಸರಳ ಮಾಡಿಬಿಡಬಲ್ಲದು ಎಂಬುದು ಕೃತಕ ಬುದ್ದಿಮತ್ತೆ ಯಂತ್ರಗಳ (ಎ.ಐ) ಪರವಾಗಿರುವವರ ವಾದ.
ಆದರೆ ಜಗತ್ತಿನಲ್ಲಿನ ಎಲ್ಲ ವಿಜ್ಞಾನಿಗಳು ಗೌರವಿಸುವ, ಪ್ರಸ್ತುತ ಭೂಮಿಮೇಲೆ ಬದುಕಿರುವ ನಂ.1 ವಿಜ್ಞಾನಿ ಎಂದೇ ಕರೆಯಲ್ಪಡುವ ಸ್ಟಿಫನ್ ಹಾಕಿಂಗ್ ಅವರು ಕೃತಕ ಬುದ್ದಿಮತ್ತೆ ಬಗ್ಗೆ ನಿರಾಶಾದಾಯಕ ಮಾತುಗಳನ್ನಾಡಿದ್ದಾರೆ.
ಕೃತಕ ಬುದ್ದಿಶಕ್ತಿ ಸಣ್ಣ ಪುಟ್ಟ ಸಹಾಯವನ್ನು ಮನುಕುಲಕ್ಕೆ ಮಾಡಬಹುದು, ಆದರೆ ಅದು ಮಾಡುವ ಕೆಡುಕುಗಳು ಬಹಳಷ್ಟು ಎಂದು ತಾರ್ಕಿಕ ಭವಿಷ್ಯ ನುಡಿದಿದ್ದಾರೆ.
ಲಿಸ್ಬಾನ್ ನಲ್ಲಿ ನಡೆದ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೃತಕ ಬುದ್ದಿಮತ್ತೆಯನ್ನು ನಿಯಂತ್ರಿಸುವ ಸಾಧನ ತಯಾರಿಸದೆ ಕೃತಕ ಬುದ್ದಿಮತ್ತೆ ತಯಾರಿಸುವುದು ಅಪಾಯಕಾರಿ ಎಂದ ಅವರು 'ಕೃತಕ ಬುದ್ದಿಮತ್ತೆ ಸಾಧನಗಳು ಮನುಷ್ಯನ ಬುದ್ದಿವಂತಿಕೆಯನ್ನು ಅನುಸರಿಸಿ ಅದನ್ನು ಮೀರಲು ಪ್ರಯತ್ನಿಸುತ್ತವೆ ಇದು ಬಹು ದೊಡ್ಡ ಅಪಾಯ ಎಂದು ಅವರು ಎಚ್ಚರಿಸಿದ್ದಾರೆ.
ಸ್ಟಿಫನ್ ಹಾಕಿಂಗ್ ಅವರ ಎಚ್ಚರಿಕೆಯಿಂದ ಕೃತಕ ಬುದ್ದಿಮತ್ತೆ ಸಂಶೋದನೆಗೆ ಹಿನ್ನಡೆ ಆಗಲಿದೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications