2022ರೊಳಗೆ ದೇಶದ ಎಲ್ಲ ಮನೆಗೂ ವಿದ್ಯುತ್ ಸಂಪರ್ಕ : ಪಿಯೂಷ್ ಗೋಯಲ್
ನವದೆಹಲಿ, ಆಗಸ್ಟ್ 10: ಆಗಸ್ಟ್ 15, 2022ರೊಳಗೆ ದೇಶದ ಎಲ್ಲ ಮನೆಗಳಲ್ಲೂ ವಿದ್ಯುತ್ ಸಂಪರ್ಕ ಇರುತ್ತದೆ.ಮುಂದಿನ ವರ್ಷದ ಮೇ ತಿಂಗಳಿಗೂ ಮುನ್ನ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಗುರುವಾರ ಲೋಕಸಭೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಆಗಸ್ಟ್ 15, 2022 ಗಡುವಾಗಿ ಇರಿಸಿಕೊಂಡಿರುವ ಸರಕಾರ ದೇಶದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. ಮತ್ತು ಮೇ 2018ರೊಳಗೆ ಎಲ್ಲ ಹಳ್ಳಿಗಳಲ್ಲೂ ವಿದ್ಯುದ್ದೀಕರಣ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದರು.
ಈ ಹಿಂದೆ ಇರಿಸಿಕೊಂಡಿದ್ದ ಗಡುವಿಗೂ ಮುಂಚೆಯೇ ಗುರಿ ತಲುಪುತ್ತಿರುವುದು ಸಂತೋಷವಾಗಿದೆ ಎಂದು ಸಚಿವ ಗೋಯಲ್ ಹೇಳಿದ್ದಾರೆ.
ಪ್ರಶ್ನಾ ಸಮಯದಲ್ಲಿ ಮಾತನಾಡಿದ ಸಚಿವರು, ಡಿಸ್ಕಾಂಗಳ ಸಂಗ್ರಹಿತ ನಷ್ಟವು 2012-13ರಲ್ಲಿ 2,53,700 ಕೋಟಿ ಇದ್ದದ್ದು 2014-15ರಲ್ಲಿ 3,60,736 ಕೋಟಿ ಆಗಿದೆ ಎಂದರು.

ಪವರ್ ಫೈನಾನ್ಸ್ ಕಾರ್ಪೋರೇಷನ್ ನ (ಪಿಎಫ್ ಸಿ) ರಾಜ್ಯಗಳ ವಿದ್ಯುತ್ ಬಳಕೆ ಪ್ರಮಾಣದ ವರದಿ ಪ್ರಕಾರ, ಡಿಸಾಂನ ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ ಕ್ರಮವಾಗಿ 2,53,700 ಕೋಟಿ ಮತ್ತು 3,04,228 ಕೋಟಿಯಿಂದ 2014-15ಕ್ಕೆ 3,60,736 ಕೋಟಿ ಮತ್ತು 4,06,825 ಕೋಟಿಗೆ ಏರಿಕೆಯಾಗಿದೆ.
"ರಾಜ್ಯ ಸರಕಾರಗಳ ನೆರವಿನಿಂದ ಈ ಸನ್ನಿವೇಶವನ್ನು ಉತ್ತಮಗೊಳಿಸುತ್ತೇವೆ ಎಣ್ಬ ನಂಬಿಕೆಯಿದೆ" ಎಂದು ಸಚಿವರು ಹೇಳಿದ್ದಾರೆ.
ಉಜ್ವಲ್ ಡಿಸ್ಕಾಂ ಆಶ್ಯುರೆನ್ಸ್ ಯೋಜನಾ ( UDAY) ಎರಡು ವರ್ಷದ ಹಿಂದೆ ನವೆಂಬರ್ ನಲ್ಲಿ ಆರಂಭಿಸಿದ ನಂತರ ರಾಜ್ಯಗಳ ನಷ್ಟ ಪ್ರಮಾಣವು ಅಂದಾಜು ಹನ್ನೊಂದು ಸಾವಿರ ಕೋಟಿ ರುಪಾಯಿಯು 2015-16ರಿಂದ 2016-17ಕ್ಕೆ ಕಡಿಮೆ ಆಗಿರುವುದಾಗಿ ವರದಿ ಆಗಿದೆ. ಎಂದು ಅವರು ಹೇಳಿದ್ದಾರೆ.
2012-13ರಿಂದ 2016-17ರ ಮಧ್ಯೆ ಸಾಂಪ್ರದಾಯಿಕ ಮೂಲಗಳಿಂದ ಉತ್ಪಾದನೆ ಮಾಡುತ್ತಿದ್ದ ವಿದ್ಯುತ್ ಪ್ರಮಾಣವು 99209.5 ಮೆಗಾ ವಾಟ್ ಹೆಚ್ಚಳವಾಗಿದೆ. ವಿದ್ಯುತ್ ಉತ್ಪಾದನೆ ಪ್ರಮಾಣ ಹಾಗೂ ಡಿಸ್ಕಾಂಗಳ ನಷ್ಟ ಅಥವಾ ಸಾಲದ ಮಧ್ಯೆ ಯಾವುದೇ ಸಂಬಂಧ ಇಲ್ಲ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಗೋಯಲ್, ಈ ಹಿಂದೆ ಮಾಡಿದ ಪ್ರಯತ್ನಗಳಿಗೆ ಡಿಸ್ಕಾಂಗಳ ಪ್ರತಿಕೂಲ ಆರ್ಥಿಕ ಸ್ಥಿತಿ ಮಿತಿಯಾಗಿತ್ತು. ಏಕೆಂದರೆ ಆರ್ಥಿಕ ಹಾಗೂ ಆಡಳಿತಾತ್ಮಕವಾಗಿ ಯಾವುದೇ ಸಾಧನೆ ಮಾಡಿರಲಿಲ್ಲ ಎಂದರು.
ಸಂಗ್ರಹಿತ ನಷ್ಟ ಹಾಗೂ ಸಾಲ ಹೆಚ್ಚಾಗಲು ಹಲವಾರು ಕಾರಣಗಳಿವೆ. ಯೋಜನೆಗಳ ಮಿತಿ, ರಾಜ್ಯಗಳ ಭಾಗವಹಿಸುವಿಕೆಯ ಮಿತಿ ಹಾಗೂ ಡಿಸ್ಮಾಂಗಳ ಕಾರ್ಯ ಚಟುವಟಿಕೆಯ ಬಾಳಿಕೆ ಇಲ್ಲದ್ದು ಸೇರಿ ನಾನಾ ಕಾರಣಗಳಿವೆ ಎಂದು ಅವರು ತಿಳಿಸಿದರು.
ಗೋಯಲ್ ರನ್ನು ಪ್ರೊಫೆಸರ್ ಎನ್ನಬೇಕು
ವಿದ್ಯುತ್ ವಲಯದಲ್ಲಿನ ಗೋಯಲ್ ಅವರ ಜ್ಞಾನಕ್ಕೆ "ಪ್ರೊಫೆಸರ್" ಅಂತ ಕರೆಯಬೇಕು ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಗುರುವಾರ ಸಲಹೆ ಮಾಡಿದರು. ಇದು ಸಂಸತ್ ನಲ್ಲಿ ನಗೆಯುಕ್ಕಿಸಿತು.
ಪ್ರಶ್ನಾ ಕಾಲದಲ್ಲಿ ಸಚಿವರು ಗ್ರಾಮೀಣ ವಿದ್ಯುದ್ದೀಕರಣದ ಸ್ಥಿತಿ-ಗತಿ ಬಗ್ಗೆ ಹಾಗೂ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸುದೀರ್ಘವಾದ ಭಾಷಣ ಮಾಡಿದ ನಂತರ, ಸ್ಪೀಕರ್ ಈ ರೀತಿಯ ಮೆಚ್ಚುಗೆ ಸೂಚಿಸಿದರು.
ಸಚಿವರ ಹೆಸರನ್ನು ಪ್ರೊಫೆಸರ್ ಪಿಯೂಷ್ ಗೋಯಲ್ ಎಂದು ಬದಲಾಯಿಸಬೇಕು ಎಂಬ ಸ್ಪೀಕರ್ ರ ಮೆಚ್ಚುಗೆಯ ಮಾತು ಸಂಸತ್ ನಲ್ಲಿ ನಗೆಯುಕ್ಕಿಸಿತು.ಪಿಟಿಐ
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications