ಏರ್ ವಿಸ್ತಾರ ಊಟದಲ್ಲಿ ಜಿರಳೆ; ವಿಮಾನಯಾನ ಸಂಸ್ಥೆಯ ಉತ್ತರ ಹೀಗಿದೆ
ನವದೆಹಲಿ, ಅ. 14: ಏರ್ ವಿಸ್ತಾರಾ ವಿಮಾನಯಾನ ಪ್ರಯಾಣಿಕರೊಬ್ಬರಿಗೆ ಶುಕ್ರವಾರ ಪ್ಯಾಕ್ ಮಾಡಿದ ಆಹಾರದಲ್ಲಿ ಸಣ್ಣ ಜಿರಳೆಯೊಂದು ಕಂಡು ಬಂದಿದೆ. ಅದರ ಚಿತ್ರವನ್ನು ಪ್ರಯಾಣಿಕ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಿಕುಲ್ ಸೋಲಂಕಿ ಎಂಬ ಪ್ರಯಾಣಿಕರೊಬ್ಬರು, "ಏರ್ ವಿಸ್ತಾರಾ ಊಟದಲ್ಲಿ ಸಣ್ಣ ಜಿರಳೆ" ಎಂದು ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟ್ಟರ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಪ್ರಯಾಣಿಕ ನಿಕುಲ್ ಸೋಲಂಕಿ , ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಒಂದು ಚಿತ್ರದಲ್ಲಿ ಇಡ್ಲಿ ಸಾಂಬಾರ್ ಮತ್ತು ಉಪ್ಪಿಟ್ಟು ಇರುವುದು ನೋಡಬಹುದು. ಮತ್ತೊಂದರಲ್ಲಿ ಆಹಾರದೊಳಗೆ ಸತ್ತ ಜಿರಳೆಯ ಝೂಮ್-ಇನ್ ಛಾಯಾಚಿತ್ರವಿದೆ.

ಪ್ರಯಾಣಿಕ ಟ್ವೀಟ್ ಮಾಡಿದ ಹತ್ತು ನಿಮಿಷಗಳ ನಂತರ, ಏರ್ ವಿಸ್ತಾರಾರ ಅಧಿಕೃತ ಹ್ಯಾಂಡಲ್ ದೂರಿಗೆ ಪ್ರತಿಕ್ರಿಯಿಸಿದೆ. "ಹಲೋ ನಿಕುಲ್, ನಮ್ಮ ಎಲ್ಲಾ ಊಟಗಳನ್ನು ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ. ದಯವಿಟ್ಟು ನಿಮ್ಮ ವಿಮಾನದ ವಿವರಗಳನ್ನು ನಮಗೆ ಕಳುಹಿಸಿ ಇದರಿಂದ ನಾವು ವಿಷಯವನ್ನು ಪರಿಶೀಲಿಸಬಹುದು. ಅದನ್ನು ಶೀಘ್ರವಾಗಿ ಪರಿಹರಿಸಬಹುದು. ಧನ್ಯವಾದಗಳು" ಎಂದು ಏರ್ ವಿಸ್ತಾರಾ ಹ್ಯಾಂಡಲ್ ಬರೆದಿದೆ.
ಇದಕ್ಕೂ ಮುನ್ನ ಗುರುವಾರ ಸಿಂಗಾಪುರ್ ಏರ್ಲೈನ್ಸ್ ಲಿಮಿಟೆಡ್, 'ವಿಸ್ತಾರಾ ಮತ್ತು ಏರ್ ಇಂಡಿಯಾದ ಏಕೀಕರಣವನ್ನು ಒಳಗೊಂಡಿರುವ ಸಂಭಾವ್ಯ ಒಪ್ಪಂದದ ಕುರಿತು ಭಾರತದ ಟಾಟಾ ಗ್ರೂಪ್ನೊಂದಿಗೆ ಗೌಪ್ಯ ಚರ್ಚೆಯಲ್ಲಿದೆ' ಎಂದು ತಿಳಿಸಿದೆ.
"ಚರ್ಚೆಗಳು ಎಸ್ಐಎ ಮತ್ತು ಟಾಟಾ ನಡುವಿನ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತವೆ. ವಿಸ್ತಾರಾ ಮತ್ತು ಏರ್ ಇಂಡಿಯಾದ ಸಂಭಾವ್ಯ ಏಕೀಕರಣವನ್ನು ಒಳಗೊಂಡಿರಬಹುದು" ಎಂದು ಸಿಂಗಾಪುರ್ ಏರ್ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಆದರೂ, ಚರ್ಚೆಗಳು ನಡೆಯುತ್ತಿವೆ ಮತ್ತು ಯಾವುದೇ ನಿರ್ಣಾಯಕ ನಿಯಮಗಳನ್ನು ಇನ್ನೂ ಒಪ್ಪಿಕೊಂಡಿಲ್ಲ ಎಂಬುದನ್ನು ಅದು ಸೇರಿಸಿದೆ.
ಸಿಂಗಾಪುರ್ ಏರ್ಲೈನ್ಸ್ ಟಾಟಾ ಎಸ್ಐಎ ಏರ್ಲೈನ್ಸ್ನಲ್ಲಿ 49% ಪಾಲನ್ನು ಹೊಂದಿದ್ದು, ಇದು ವಿಸ್ತಾರಾ ಏರ್ಲೆನ್ಸ್ ಅನ್ನು ನಿರ್ವಹಿಸುತ್ತದೆ, ಉಳಿದ 51% ಭಾರತೀಯ ಸಮೂಹದ ಒಡೆತನದಲ್ಲಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications