Lahore Blasts: ಇಂದು ಲಾಹೋರ್ನಲ್ಲಿ ಬಹು ಸ್ಪೋಟಗಳ ಸದ್ದು: ಭಾರತ ಯುದ್ಧ ಮುಂದುವರಿಸಿತಾ..!
Lahore Blasts: ಪಾಕಿಸ್ತಾನ ಗಡಿಯ ಪಂಜಾಬ್ ವ್ಯಾಪ್ತಿಯ ಲಾಹೋರ್ನಲ್ಲಿ ಗುರುವಾರ ಬೆಳಗ್ಗೆ ಎರಡು- ಮೂರು ಕಡೆಗಳಲ್ಲಿ ಬೃಹತ್ ಸದ್ದು ಕೇಳಿ ಬಂದಿದೆ. ಲಾಹೋರ್ನಲ್ಲಿ ಉಂಟಾದ ಕೇಳಿ ಬಂದ ಬ್ಲಾಸ್ಟ್ಗಳ ಸದ್ದುಗಳ ಬಳಿಕ ಅದರ ಹೊಗೆ ಆಕಾಶದೆತ್ತರಕ್ಕೆ ತಲುಪಿತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿವೆ. ಭಾರತದಿಂದ ಬುಧವಾರ 'ಸಿಂದೂರ ಆಪರೇಷನ್' ನಡೆದ ಒಂದು ದಿನದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಲಾಹೋರ್ ಜನರಲ್ಲಿ ಆತಂಕ, ಭಯ ಮನೆ ಮಾಡಿದೆ.
ಪಾಕಿಸ್ತಾನದ ಅತಿದೊಡ್ಡ ನಗರವಾದ ಪಂಜಾಬ್ ಪ್ರಾಂತ್ಯದ ಲಾಹೋರ್ನ ವಾಲ್ಟನ್ ರಸ್ತೆಯಲ್ಲಿ ಸರಣಿ ಸ್ಫೋಟಗಳು ಕಂಡು ಬಂದಿವೆ. ಈ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಅವುಗಳು ಹಂಚಿಕೊಂಡ ವಿಡಿಯೋದಲ್ಲಿ ಜನರು ಬ್ಲಾಸ್ಟ್ ಸದ್ದು ಕೇಳುತ್ತಿದ್ದಂತೆ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಜಮಾಯಿಸಿದ್ದಾರೆ. ಎಲ್ಲರು ಹೊಗೆ ಹೋಗುವ ಆಕಾಶೆದತ್ತ ನೋಡುತ್ತಿರುವುದು ಗೊತ್ತಾಗುತ್ತದೆ.

ಲಾಹೋರ್ ಭಾಗದಲ್ಲಿ ಒಟ್ಟು ಮೂರು ಬಾರಿ ಸ್ಪೋಟಗಳು ಸಂಭವಿಸಿವೆ. ಅಸ್ಕರಿ ಬಳಿ ಬೃಹತ್ ಎರಡು ಸದ್ದು ಕೇಳಿ ಬಂದಿವೆ. ಇಲ್ಲಿನ ನೌಕಾ ಕಾಲೇಜಿನ ಕಟ್ಟಡದಿಂದ ಹೊಗೆ ಚಿಮ್ಮಿದ್ದನ್ನು ಕಂಡ ಸ್ಥಳಿಯ ಕಂಡು ಭಯಭೀತರಾಗಿದ್ದಾರೆ. ಬೆಳ್ಳಂಬೆಳಗ್ಗೆ ಜನರು ಇದೇನಿದು ಸದ್ದು ಎಂದು ಶಾಕ್ಗೆ ಒಳಗಾಗಿದ್ದಾರೆ.
ಭಾರತ ಮತ್ತು ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಕಾರಣದಿಂದಲೇ ಲಾಹೋರ್ ಮತ್ತು ಸಿಯಾಲ್ಕೋಟ್ನಲ್ಲಿನ ಅನೇಕ ವಿಮಾನಯಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಾಹೋರ್, ಪಂಜಾಬ್ ವಾಯು ಮಾರ್ಗಗಳಲ್ಲಿನ ಸಂಚಾರ ರದ್ದುಗೊಳಿಸಲಾಗಿದೆ.
لاہور میں دھماکے کی آوازیں۔۔۔۔🚨🚨
— Omar Malik (@Mr_OmarMalik) May 8, 2025
نصیر آباد کے قریب لوگ گھروں سے باہر نکل آئے۔۔۔۔
pic.twitter.com/1BF8m1ECnT
ಕಳೆದ ತಿಂಗಳು ಏಪ್ರಿಲ್ 22ರಂದು ನಡೆದ ಪಹಲ್ಗಾಮ್ನಲ್ಲಿನ ಉಗ್ರರ ದಾಳಿಗೆ 26 ಜನರ ಮೃತಪಟ್ಟಿದ್ದರು. ಅದರ ಪ್ರತಿಕಾರವಾಗಿ ಭಾರತೀಯ ಸೇನೆ ಜಮ್ಮ ಮತ್ತು ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿ ಯಿಂದ ಒಟ್ಟು ಸುಮಾರು 31ಮಂದಿ ಮೃತಪಟ್ಟಿದ್ದಾರೆ. ಇವರೊಂದಿಗೆ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. ಇದರ ಬೆನ್ನಲ್ಲೇ ಭಾರತವು ಲಾಹೋರ್ ಮೇಲೆ ಯುದ್ಧ ಮುಂದುವರೆಸಿತೇ ಎಂಬ ಅನುಮಾನ ಉಂಟಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಅದಾದ ಬಳಿಕ ಲಾಹೋರ್ ಮೇಲೆ ನಡೆದ ದಾಳಿಯ ಕುರಿತು ಹಾಗೂ ಪಾಕ್ ಮೇಲೆ ಯುದ್ಧ ಮುಂದುವರೆಯುತ್ತಾ ಎಂಬುದರ ಬಗ್ಗೆ ಮಾಹಿತಿ ತಿಳಿಯುವ ಸಾಧ್ಯತೆ ಇದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications