ಡಿಎಂಕೆ ಸಂಸದ ದಯಾನಿಧಿ ಮಾರನ್ ಖಾತೆಯಿಂದ 99,999 ರೂ. ಕದ್ದ ಸೈಬರ್ ಕಳ್ಳರು
ಚೆನ್ನೈ, ಅಕ್ಟೋಬರ್ 10: ತಮಿಳುನಾಡು ಡಿಎಂಕೆ ಸಂಸದ ದಯಾನಿಧಿ ಮಾರನ್ ಸೈಬರ್ ಕಳ್ಳರ ಕೈಚಳಕಕ್ಕೆ ಬಲಿಯಾಗಿದ್ದು, ಅವರ ಖಾತೆಯಿಂದ ಬರೋಬ್ಬರಿ 99,999 ರೂಪಾಯಿ ಕಳ್ಳತನವಾಗಿದೆ.
ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಮಾಜಿ ಸಚಿವ ಮಾರನ್ ಅವರ ವೈಯಕ್ತಿಕ ಉಳಿತಾಯ ಖಾತೆಯಿಂದ 99,999 ರೂಪಾಯಿ ಕಳ್ಳತನವಾಗಿದೆ. ಈ ಬಗ್ಗೆ ಗ್ರೇಟರ್ ಚೆನ್ನೈ ಸಿಟಿ ಪೊಲೀಸ್ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ.

"ಭಾನುವಾರ ತಮ್ಮ ಬ್ಯಾಂಕ್ ಖಾತೆ ನೆಟ್ ಬ್ಯಾಂಕಿಂಗ್ ವರ್ಗಾವಣೆಯ ಮೂಲಕ ನನ್ನ ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಉಳಿತಾಯ ಖಾತೆಯಿಂದ ₹99,999 ಅನ್ನು ಎಲ್ಲಾ ಸಾಮಾನ್ಯ ಸುರಕ್ಷತಾ ಪ್ರೋಟೋಕಾಲ್ಗಳನ್ನು ಮೀರಿ ಕಳ್ಳತನ ಮಾಡಲಾಗಿದೆ. ಅಂತಹ ವಹಿವಾಟುಗಳ ಪ್ರಮಾಣಿತ ಪ್ರೋಟೋಕಾಲ್ ಒಟಿಪಿ ಅನ್ನು ನನ್ನ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಿಂದ ಸ್ವೀಕರಿಸಲಾಗಿಲ್ಲ.
ಬದಲಿಗೆ, ಖಾತೆಯ ಜಂಟಿ ಹೋಲ್ಡರ್ಗೆ ಕರೆ ಮಾಡಲಾಗಿತ್ತು. ನನ್ನ ಹೆಂಡತಿಯ ಸಂಖ್ಯೆಗೆ ವಂಚಕರು ಬ್ಯಾಂಕ್ನಿಂದ ಬಂದವರಂತೆ ನಟಿಸಿದರು. ಆದರೆ ಅವರ ಪ್ರದರ್ಶನ ಚಿತ್ರದಲ್ಲಿ ಸಿಬಿಐಸಿ ಇಂಡಿಯಾ ಎಂದು ಇತ್ತು. ಇದು ನನ್ನ ಅನುಮಾನಗಳನ್ನು ದೃಢಪಡಿಸಿತು. ನಾನು ತಕ್ಷಣವೇ ನನ್ನ ಖಾತೆಯಲ್ಲಿನ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲು ಮುಂದಾದೆ ಎಂದು ಮಾರನ್ ಹೇಳಿದ್ದಾರೆ.
ಅವರು ವೈಯಕ್ತಿಕ ಮಾಹಿತಿಯನ್ನು ಹೇಗೆ ಪಡೆದರು ಮತ್ತು ಭದ್ರತಾ ಪ್ರೋಟೋಕಾಲ್ಗಳನ್ನು ಎಷ್ಟು ಸುಲಭವಾಗಿ ಉಲ್ಲಂಘಿಸಿದರು ಎಂಬುದು ನನಗೆ ಗೊಂದಲವನ್ನುಂಟುಮಾಡುತ್ತದೆ. ಇದು ಫಿಶಿಂಗ್ ದಾಳಿಯಾಗಿರಲಿಲ್ಲ ಅಥವಾ ಯಾವುದೇ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆಕ್ಸಿಸ್ ಬ್ಯಾಂಕ್ ಖಾತೆಗೆ ದಾಳಿ ಹೇಗೆ ನಡೆಯಿತು. ಅವರು ಯಾವುದೇ ವಿವರಣೆಯನ್ನು ನೀಡಲು ಸಾಧ್ಯವಾಗಲಿಲ್ಲ. ವಹಿವಾಟು ನಡೆಯಲು ನನ್ನ ನಂಬರ್ನಿಂದ ಒಟಿಪಿ ಏಕೆ ಅಗತ್ಯವಾಲಿಲ್ಲ ಎಂದು ಅವರು ಹೇಳಿದರು.
"ತಂತ್ರಜ್ಞಾನದ ಬಗ್ಗೆ ತಿಳಿದಿರುವ ಮತ್ತು ಖಾಸಗಿ ಡೇಟಾದೊಂದಿಗೆ ಜಾಗರೂಕರಾಗಿರುವ ಯಾರಿಗಾದರೂ ಇದು ಸಂಭವಿಸಿದೆ, ಅದೇ ಮೊದಲ ಬಾರಿಯ ಡಿಜಿಟಲ್ ಬಳಕೆದಾರರು ಮತ್ತು ಹಿರಿಯ ನಾಗರಿಕರ ಕಥೇ ಏನು? ಯಾರೊಬ್ಬರ ಡೇಟಾ ಸುರಕ್ಷಿತವಾಗಿದೆಯೇ?" ಎಂದು ಪ್ರಶ್ನಿಸಿದರು.












Click it and Unblock the Notifications