ರಾಜ್ಯಸಭೆಗೆ ವೀಲ್ಹ್ ಚೇರ್ ಮೂಲಕ ಬಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್!
ನವದೆಹಲಿ,ಆಗಸ್ಟ್ 08: ರಾಜ್ಯಸಭೆಯಲ್ಲಿ ದೆಹಲಿ ಸುಗ್ರೀವಾಜ್ಞೆ ಮಸೂದೆ ರಾಜ್ಯಸಭೆಯಲ್ಲಿಯೂ ಪಾಸಾಗಿ ಕಾಯ್ದೆಯಾಗಿ ಬದಲಾಯ್ತು. ಈ ಮಸೂದೆಯ ವಿರುದ್ಧ ಮತ ಚಲಾಯಿಸುವ ಸಲುವಾಗಿ ದೇಶದ ಮಾಜಿ ಪ್ರಧಾನಿ 90 ವರ್ಷದ ಮನಮೋಹನ್ ಸಿಂಗ್ ಅವರು ವೀಲ್ಹ್ ಚೇರ್ ಮೂಲಕ ರಾಜ್ಯಸಭಾ ಕಲಾಪಕ್ಕೆ ಆಗಮಿಸಿದ್ದರು.
ರಾಜ್ಯಸಭೆಯಲ್ಲಿ ಆಡಳಿತರೂಢ ಬಿಜೆಪಿಗೆ ಬಹುಮತದ ಕೊರತೆಯಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಈ ಬಿಲ್ಗೆ ತಡೆ ಬೀಳಲೇಬೇಕೆಂಬ ದೃಷ್ಟಿಯಿಂದ ಕಾಂಗ್ರೆಸ್ ತನ್ನ ಹಿರಿಯ ನಾಯಕನನ್ನು ಕೂಡ ಕಲಾಪಕ್ಕೆ ಬರುವಂತೆ ಮಾಡಿತ್ತು. ಆದರೆ ಅಲ್ಲಿ ಜಗನ್ ನೇತೃತ್ವದ ವೈಎಸ್ಆರ್ ಸೇರಿದಂತೆ ಕೆಲ ಪಕ್ಷಗಳು ಆಡಳಿತರೂಢ ಬಿಜೆಪಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ದೆಹಲಿ ಸುಗ್ರೀವಾಜ್ಞೆ ಸಲೀಸಾಗಿ ರಾಜ್ಯಸಭೆಯಲ್ಲೂ ಪಾಸಾಯ್ತು.

ಈ ಮಧ್ಯೆ 90 ವರ್ಷದ ಮನಮೋಹನ್ ಸಿಂಗ್ ಅವರನ್ನು ಕೇವಲ ವಿಧೇಯಕಕ್ಕೆ ವೋಟು ಹಾಕುವುದಕ್ಕಾಗಿ ವೀಲ್ಹ್ ಚೇರ್ ನಲ್ಲಿ ಕರೆ ತಂದ ಕಾಂಗ್ರೆಸ್ ಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಕಾಂಗ್ರೆಸ್ನ ಈ ಗೀಳನ್ನು ದೇಶವು ನೆನಪಿಸಿಕೊಳ್ಳುತ್ತದೆ! ಮಾಜಿ ಪ್ರಧಾನಿಯ ಆರೋಗ್ಯದ ಹೊರತಾಗಿಯೂ, ತಡರಾತ್ರಿಯಲ್ಲಿ ಸದನದಲ್ಲಿ ಇರಿಸಲು ಕಾಂಗ್ರೆಸ್ ಎಲ್ಲಿಯವರೆಗೆ ಹೋಯಿತು. ಅದರ ಅಪ್ರಾಮಾಣಿಕ ಮೈತ್ರಿಯನ್ನು ಉಳಿಸಿಕೊಳ್ಳಲು! ನಿಜವಾಗಿಯೂ ನಾಚಿಕೆಗೇಡು ಎಂದು ಬಿಜೆಪಿ ಕಿಡಿಕಾರಿದೆ.
ಸದನದಲ್ಲಿ ಭಾವನಾತ್ಮಕವಾಗಿ ಆರು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಆರಂಭದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮತ್ತು ಈಗ ಮಸೂದೆಯನ್ನು ಮಂಡಿಸುವ ಹಿಂದಿನ ತುರ್ತು ದೆಹಲಿಯ ಆಡಳಿತಾರೂಢ ಎಎಪಿ 2,000 ಕೋಟಿ ರೂ.ಗಳ ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಮರು ನಿಯೋಜಿಸುವುದನ್ನು ತಡೆಯುವುದಾಗಿದೆ ಎಂದು ವಿವರಿಸಿದರು
ಈ ವರ್ಷದ ಮೇ ತಿಂಗಳಲ್ಲಿ ಸರ್ಕಾರ ತಂದ ಸುಗ್ರೀವಾಜ್ಞೆಗೆ ವಿರೋಧ ಪಕ್ಷದ ಸದಸ್ಯರು ನಿರ್ಣಯವನ್ನು ಮಂಡಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ತಿದ್ದುಪಡಿ) ಮಸೂದೆ, 2023 ಅನ್ನು ಸದನದಲ್ಲಿ ಅಂಗೀಕಾರಕ್ಕಾಗಿ ಮಂಡಿಸಿದರು. ಕಳೆದ ವಾರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿತ್ತು.












Click it and Unblock the Notifications