7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?
ಬೆಂಗಳೂರು, ಜೂನ್ 30: ಸರ್ಕಾರಿ ನೌಕರರಿಗೆ ನರೇಂದ್ರ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ ಸಿಕ್ಕಿದೆ. 7ನೇ ವೇತನ ಆಯೋಗದ ಶಿಫಾರಸ್ಸಿಗೆ ಬುಧವಾರ (ಜೂನ್ 29) ದಂದು ಎನ್ ಡಿಎ ಕ್ಯಾಬಿನೆಟ್ ಸಮ್ಮತಿಸಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಶೇ 23.55 ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳ ಸಿಗಲಿದೆ. ಏನಿದು ವೇತನ ಆಯೋಗ? ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ? ಮುಂದೆ ಓದಿ...
ಸಂಪುಟ ಕಾರ್ಯದರ್ಶಿ ಪಿ.ಕೆ ಸಿನ್ಹಾ ನೇತೃತ್ವದ ಕಾರ್ಯದರ್ಶಿಗಳ ಸಮಿತಿಯು ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಆಧಾರಿಸಿ ವಿತ್ತ ಸಚಿವಾಲಯವು ಸಂಪುಟಕ್ಕೆ ತನ್ನ ಟಿಪ್ಪಣಿ ನೀಡಿದೆ.
ಇದಕ್ಕೆ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಸಹಮತ ವ್ಯಕ್ತಪಡಿಸಿದೆ. ಇದರಿಂದಾಗಿ ಸುಮಾರು 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 58 ಲಕ್ಷಕ್ಕೂ ಅಧಿಕ ಮಂದಿ ಪಿಂಚಣಿದಾರರಿಗೆ ಹೆಚ್ಚುವರಿ ವೇತನ, ಭತ್ಯೆ ಸಿಗಲಿದೆ.[ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಏರಿಕೆ ಬಂಪರ್!]
ಏಳನೇ ವೇತನ ಆಯೋಗ:
ಕೇಂದ್ರ ಸರ್ಕಾರ ತನ್ನ ನೌಕರರ ವೇತನ, ಪಿಂಚಣಿ ಹಾಗೂ ಭತ್ಯೆಗಳನ್ನು ಪರಿಷ್ಕರಿಸಲು ಪ್ರತಿ ಹತ್ತು ವರ್ಷಕ್ಕೊಮ್ಮೆ ರಚಿಸುವ ಸಮಿತಿ ಇಅದಾಗಿದೆ. ಈಗ ಚಾಲ್ತಿಯಲ್ಲಿರುವ ಏಳನೇ ವೇತನ ಆಯೋಗ ರಚನೆಯಾಗಿದ್ದು ಯುಪಿಎ ಸರ್ಕಾರದ ಕಾಲದಲ್ಲಿ. ಜಸ್ಟೀಸ್ ಎ.ಕೆ ಮಾಥೂರ್ ಅವರು ಇದರ ಮುಖ್ಯಸ್ಥರು. [ಸಂಸದರ ತಿಂಗಳ ವೇತನ ಡಬ್ಬಲ್, ಝಣ ಝಣ ಕಾಂಚಾಣ]
* ಸಮಿತಿಯ ಇತರೆ ಸದಸ್ಯರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿವೇರ್ ರಾಯಿ, ಆರ್ಥಿಕ ತಜ್ಞ ರಾಥಿನ್ ರಾಯ್, ಆಯೋಗದ ಕಾರ್ಯದರ್ಶಿ ಮೀನಾ ಆಗರವಾಲ್ ಅವರಿದ್ದಾರೆ.
* ಆಯೋಗ ನೀಡಿದ ಶಿಫಾರಸುಗಳಿಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿರುವುದರಿಂದ ಜನವರಿ 1, 2016ರಿಂದ ಪೂರ್ವನ್ವಯವಾಗುವಂತೆ ಶಿಫಾರಸು ಜಾರಿಗೊಳ್ಳಲಿದೆ.

* 2014ರ ಗಣತಿಯಂತೆ ಒಟ್ಟಾರೆ 48 ಲಕ್ಷ (ಈಗ 50 ದಾಟಿದೆ) ಕೇಂದ್ರ ಸರಕಾರಿ ನೌಕರರು (ಭಾರತೀಯ ರೈಲ್ವೆಯಲ್ಲೇ 13 ಲಕ್ಷ, ಗೃಹ ಇಲಾಖೆಯಲ್ಲಿ 9.80 ಲಕ್ಷ, ರಕ್ಷಣಾ ಇಲಾಖೆಯಲ್ಲಿ 3.98 ಲಕ್ಷ ಸೇರಿದ್ದಾರೆ) 14 ಲಕ್ಷಕ್ಕೂ ಅಧಿಕ ಮಂದಿಯನ್ನು ಹೊಂದಿರುವ ಭಾರತೀಯ ಸಶಸ್ತ್ರ ಪಡೆಯನ್ನು ನಾಗರಿಕ ಸೇವೆ ವಿಭಾಗಕ್ಕೆ ಸೇರಿಸಿಲ್ಲ.
* 58 ಲಕ್ಷಕ್ಕೂ ಅಧಿಕ ಪಿಂಚಣಿ ದಾರರಿಗೂ ಜನವರಿ 1ರಂತೆ ಪಿಂಚಣಿ ಪರಿಷ್ಕರಣೆಗೊಳ್ಳಲಿದೆ. ಇವರಲ್ಲಿ ಶೇ 36ರಷ್ಟು ಸಶಸ್ತ್ರಪಡೆಗೆ ಸೇರಿದವರು ಹಾಗೂ ಶೇ 25ರಷ್ಟು ರೈಲ್ವೆ ಇಲಾಖೆಗೆ ಸೇರಿದ ಪಿಂಚಣಿದಾರರು.[ಐಟಿ ಫ್ರೆಶರ್ಸ್ ಗೆ ಈಗ ಕೆಟ್ಟ ಕಾಲ, ಸಂಬಳ ಏರಿಕೆ ಆಗೋದಿಲ್ಲ!]
ಸಂಬಳ ಏರಿಕೆ ಲೆಕ್ಕಾಚಾರ
* ಹಣದುಬ್ಬರ ದರ(ಜಿಡಿಪಿ)ದ ಏರಿಳಿತದ ಆಧಾರದ ಮೇಲೆ ವೇತನ ಪರಿಷ್ಕರಣೆ ಶಿಫಾರಸು ಮಾಡಲಾಗುತ್ತದೆ. ಇದರಲ್ಲಿ ಗ್ರಾಹಕ ದರ ಸ್ಯೂಚಂಕ(consumer price index) ಸೇರಿರುತ್ತದೆ.
* ಇದು ಕೂಡಾ ಉದ್ಯೋಗಿಗಳ ತುಟ್ಟಿ ಭತ್ಯೆ ಹೆಚ್ಚಳದ ಲೆಕ್ಕಾಚಾರದಂತೆ ನಡೆಯಲಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.[ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಕೊಡುಗೆ]
7ನೇ ವೇತನ ಆಯೋಗಸ ಶಿಫಾರಸುಗಳೇನು?
* ಸುಮಾರು 18 ಹಂತದ ವೇತನ ಮ್ಯಾಟ್ರಿಕ್ ಹೊಂದಿರುವ ಈ ಶಿಫಾರಸ್ಸಿನ ಮೂಲಕ ಹಳೆ ಪಿಂಚಣಿದಾರರು ಹಾಗೂ ಈಗಷ್ಟೇ ನಿವೃತ್ತಿಯಾದ ಪಿಂಚಣಿದಾರರ ನಡುವಿನ ವೇತನ ತಾರತಮ್ಯವನ್ನು ಸರಿಪಡಿಸಲಾಗಿದೆ.
* ಕನಿಷ್ಠ ವೇತನ 7,000 ರು ನಿಂದ 18,000 ರು ಗೇರಿಸಲಾಗಿದೆ. ಕ್ಲಾಸ್ 1 ಅಧಿಕಾರಿಗೆ 56,100 ರು ನಷ್ಟಿರಲಿದೆ. ಗರಿಷ್ಠ ಮೊತ್ತ 2.25 ಲಕ್ಷ ರು ನಷ್ಟಿದೆ.
* ಒಟ್ಟಾರೆ ಶೇ 23.55ರಷ್ಟು ವೇತನ ಏರಿಕೆ ಸಿಕ್ಕಿದೆ.ವೇತನ ಶೇ 16, ಭತ್ಯೆ ಶೇ 63ರಷ್ಟು ಹಾಗೂ ಪಿಂಚಣಿ ಸುಮಾರು ಶೇ 24ರಷ್ಟು ಏರಿಕೆಯಾಗಲಿದೆ.
* ಇದರ ಜೊತೆಗೆ ವೇತನ ಆಯೋಗ ಶೇ 3ರಷ್ಟು ವಾರ್ಷಿಕ ಇಂಕ್ರೀಮೆಂಟ್ ಹಾಗೂ ಪಿಂಚಣಿಯಲ್ಲಿ ಶೇ 24ರಷ್ಟು ಏರಿಕೆಗೆ ಶಿಫಾರಸು ಮಾಡಿದೆ.
ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ:
7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿರುವುದರಿಂದ ಕೇಂದ್ರ ಸರ್ಕಾರಕ್ಕೆ 2016-17ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ ಲಕ್ಷ ಕೋಟಿ ರು ಹೊರೆ ಬೀಳಲಿದೆ. ಇದರಲ್ಲಿ ವೇತನಕ್ಕೆ ಶೇ 36(39,100 ಕೋಟಿ ರು), ಭತ್ಯೆ ಶೇ 29 (29,300 ಕೋಟಿ ರು), ಪಿಂಚಣಿ ಶೇ 33 (33,700 ಕೋಟಿ ರು)
ಯಾರಿಗೆ ಅನ್ವಯವಾಗುವುದಿಲ್ಲ: ಸಾರ್ವಜನಿಕ ವಲಯದ ಉದ್ಯಮ(ಪಿಎಸ್ ಯು), ಸ್ವಾಯುತ್ತ ಸಂಸ್ಥೆ, ಗ್ರಾಮೀಣ ಅಂಚೆ ಸೇವಕರಿಗೆ ಈ ಶಿಫಾರಸು ಅನ್ವಯವಾಗುವುದಿಲ್ಲ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications