ಉತ್ತರ ಪ್ರದೇಶದಲ್ಲಿ ಮತ್ತೊಂದು ದೋಣಿ ಮುಳುಗಡೆ, 6 ಮಂದಿ ಸಾವು
Recommended Video

Uttar Pradesh : six people drown in Saryu river | Oneindia Kannada
ಲಕ್ನೋ, ಅಕ್ಟೋಬರ್ 07 : ಉತ್ತರ ಪ್ರದೇಶದಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದೆ. ಬಹ್ರೇಚ್ ಜಿಲ್ಲೆಯ ಬೆಹ್ತಾದಲ್ಲಿ ಸರಯೂ ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿ 6 ಮಂದಿ ಜಲ ಸಮಾಧಿಯಾಗಿದ್ದಾರೆ.
Bahraich: 6 dead, including 2 children, after a boat capsized in Saryu river in Behta; all the bodies recovered.
— ANI UP (@ANINewsUP) October 7, 2017
ದೋಣಿ ಮುಳುಗಿದ ಮಾಹಿತಿ ತಿಳಿದ ರಕ್ಷಣಾ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನೀರಿನಲ್ಲಿ ಮುಳುಗಿದ್ದ 6 ಮಂದಿಯ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕಳೆದ 1 ತಿಂಗಳಲ್ಲಿ 2ನೇ ದೋಣಿ ದುರಂತ ಇದಾಗಿದೆ.

ಸೆಪ್ಟಂಬರ್ 14 ರಂದು ಯಮುನಾ ನದಿಯಲ್ಲಿ ದೋಣಿ ಮುಳುಗಿ 22 ಮಂದಿ ನೀರು ಪಾಲಾಗಿದ್ದರು. ಆ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ.











Click it and Unblock the Notifications