Get Updates
Get notified of breaking news, exclusive insights, and must-see stories!

ನಾಳೆಯಿಂದ (ಸೆ.18) ವಿಶೇಷ ಅಧಿವೇಶನ ಶುರು, ಅಜೆಂಡಾ ಏನು?

ಬೆಂಗಳೂರು, ಸೆಪ್ಟಂಬರ್ 17: ಸೋಮವಾರ ಸೆಪ್ಟಂಬರ್ 18ರಿಂದ ಐದು ದಿನಗಳ ಸಂಸತ್ತಿನ 'ವಿಶೇಷ ಅಧಿವೇಶನ' (Parliament Special Session) ಆರಂಭವಾಗಲಿದೆ. 'ಸಂವಿಧಾನ ಸಭೆ' ಯೊಂದಿಗೆ ಮೊದಲ ದಿನದ ಸಂಸತ್ತಿನ ಕಲಾಪಗಳು ಪ್ರಾರಂಭವಾಗಲಿವೆ. ಸಂಸತ್ತಿನ 75 ವರ್ಷಗಳ ಪ್ರಯಾಣದ ಚರ್ಚೆಯೊಂದಿಗೆ ವಿಶೇಷ ಅಧಿವೇಶನವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ- ಡಿಸೆಂಬರ್ 9, 1946 ರಂದು ಸಭೆ ಸೇರಿದ ಮೊದಲ ಸಭೆ.

ಕೇಂದ್ರ ಸರ್ಕಾರ ಸಂಸತ್ತಿ ಅಧಿವೇಶನದ ಕಾರ್ಯವಿಧಾನದ ತಾತ್ಕಾಲಿಕ ಕಾರ್ಯಸೂಚಿ ಬಿಡುಗಡೆಗೊಳಿಸಿದೆ. ಅದರ ಪ್ರಕಾರ, ವಿಶೇಷ ಅಧಿವೇಶನ ಆರಂಭದ ಮೊದಲು ಕೇಂದ್ರವು ಸರ್ವಪಕ್ಷ ಸಭೆ ನಡೆಸಲಿದೆ. ಈ ಸಭೆಯಲ್ಲಿ ನಾಯಕರು ಅಜೆಂಡಾ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿವೆ.

5-days-parliament-special-session

ಗೌರಿಗಣೇಶ ಹಬ್ಬದ ಸಂಸತ್ತಿನ ವಿಶೇಷ ಅಧಿವೇಶನವು ಎರಡನೇ ದಿನ ಸೆಪ್ಟೆಂಬರ್ 19ರಂದು ಮಂಗಳವಾರ ಹಳೆಯ ಸಂಸತ್ತಿನ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಔಪಚಾರಿಕವಾಗಿ ಸ್ಥಳಾಂತರಗೊಳ್ಳಲಿದೆ. ವಿಶೇಷ ಅಧಿವೇಶನ ಸೆಪ್ಟೆಂಬರ್ 22 ರಂದು ಮುಕ್ತಾಯಗೊಳ್ಳಲಿದೆ.

ಈ ವಿಶೇಷ ಸಂಸತ್ತು ಅಧಿವೇಶನ: ಕಾರ್ಯಸೂಚಿಯಲ್ಲಿ ಏನಿದೆ?

ಹಿಂದಿನಿಂದ ನಡೆದು ಸಂಸತ್ತಿನ 75 ವರ್ಷಗಳ ಸುದೀರ್ಘ ಪ್ರಯಾಣದ ಚರ್ಚೆಯ ಹೊರತಾಗಿ, ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತಾಧಿಕಾರಿಗಳ ನೇಮಕ, ಸೇವಾ ಷರತ್ತು ಹಾಗೂ ಅಧಿಕಾರದ ಅವಧಿ ನಿಯಂತ್ರಣ ಮಸೂದೆ ಸೇರಿದಂತೆ ನಾಲ್ಕು ಮಸೂದೆಗಳು ಅಧಿವೇಶನದಲ್ಲಿ ಸರ್ಕಾರದ ಶಾಸಕಾಂಗ ವ್ಯವಹಾರದ ಭಾಗವೇ ಆಗಿದೆ.

'ದಿ ಅಡ್ವೊಕೇಟ್ಸ್ (ತಿದ್ದುಪಡಿ) ಮಸೂದೆ, 2023' ಮತ್ತು 'ದಿ ಪ್ರೆಸ್ ಮತ್ತು ರಿಜಿಸ್ಟ್ರೇಷನ್ ಆಫ್ ಪಿರಿಯಾಡಿಕಲ್ಸ್ ಬಿಲ್, 2023' ಅನ್ನು ಈಗಾಗಲೇ ರಾಜ್ಯಸಭೆಯು ಕಳೆದ ಆಗಸ್ಟ್ 3 ರಂದು ಅಂಗೀಕರಿಸಿದ್ದು, ಇವು ಮಸೂದೆಗಳ ಪಟ್ಟಿಯಲ್ಲಿವೆ.

5-days-parliament-special-session

ವಕೀಲರ (ತಿದ್ದುಪಡಿ) ಮಸೂದೆ, 2023 ವಕೀಲರ ಕಾಯಿದೆ 1961 ಅನ್ನು ತಿದ್ದುಪಡಿಗೆ ತರುತ್ತದೆ. ಆದರೆ ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ, 2023 ಪತ್ರಿಕಾ ಮತ್ತು ಪುಸ್ತಕಗಳ ನೋಂದಣಿ ಕಾಯಿದೆ, 1867 ಅನ್ನು ರದ್ದುಗೊಳಿಸುತ್ತದೆ.

'ಪೋಸ್ಟ್ ಆಫೀಸ್ ಬಿಲ್, 2023' ಅನ್ನು ಲೋಕಸಭೆಯ ವ್ಯವಹಾರದಲ್ಲಿ ಪಟ್ಟಿ ಮಾಡಲಾಗಿದೆ. ಈ ಮಸೂದೆಯನ್ನು ಮೊದಲು ರಾಜ್ಯಸಭೆಯಲ್ಲಿ 2023 ಆಗಸ್ಟ್ 10 ರಂದು ಪರಿಚಯಿಸಲಾಯಿತು, ಇದು ಭಾರತೀಯ ಅಂಚೆ ಕಚೇರಿ ಕಾಯಿದೆ, 1898 ಅನ್ನು ರದ್ದುಗೊಳಿಸುತ್ತದೆ.

INDIA ಬ್ಲಾಕ್‌ನ ಎಲ್ಲ ಪಕ್ಷಗಳು ಭಾಗಿ

ಮುಖ್ಯವಾಗಿ ನೂತನ ಮೈತ್ರಿಕೂಟ INDIA ಬ್ಲಾಕ್‌ನ ಒಟ್ಟು 24 ಪಕ್ಷಗಳು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲಿವೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಅಧಿವೇಶ ಬಗ್ಗೆ ಇತ್ತೀಚೆಗೆ ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ಅವರು ಒತ್ತಾಯಿಸಿದ್ದಾರೆ. ವಿಪಕ್ಷಗಳ ಜೊತೆ ಚರ್ಚಿಸದೇ ಅಧಿವೇಶನಕ್ಕೆ ನೀರ್ಧರಿಸಿದ್ದಾರೆ ಎಂದು ಆರೋಪಿಸಿದ್ದರು.

ಈ ವಿಶೇಷ ಅಧಿವೇಶನವನ್ನು ಇತರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ಮಾಡದೇ ಕರೆಯಲಾಗಿದೆ. ವಿಪಕ್ಷಗಳಿಗೆ ಅಧಿವೇಶ ಕಾರ್ಯಸೂಚಿ ಬಗ್ಗೆ ಅರಿವಿಲ್ಲದಾಗಿದೆ ಎಂದು ಸೋನಿಯಾ ಗಾಂಧಿ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜಾತಿ ಗಣತಿಯ ಅಗತ್ಯತೆ, ಮಣಿಪುರ, ಕೋಮು ಘರ್ಷಣೆಗಳು ಮತ್ತು ಹಣದುಬ್ಬರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸುವಂತೆ ಸೋನಿಯಾ ಗಾಂಧಿ ಅವರು ಒತ್ತಾಯಿಸಿದ್ದಾರೆ. ಇನ್ನೂ ಹಲವು ರಾಜ್ಯಗಳು ಹಾಗೂ ಕೇಂದ್ರದ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆ ಆಗಬೇಕಿದೆ ಎಂದಿದ್ದರು. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ತಿರುಗೇಟು ನೀಡಿ ಪ್ರತಿಕ್ರಿಯಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+