ಪಿಎಂ ಆವಾಸ್ ಯೋಜನೆಯ ಹಣ ಪಡೆದು ಪ್ರೇಮಿಗಳೊಂದಿಗೆ ಪಲಾಯನಗೈದ ಮಹಿಳೆಯರು: ಆಘಾತದಲ್ಲಿ ಪತಿಗಳು- ಇದು ನಡೆದದ್ದೆಲ್ಲಿ ಗೊತ್ತೇ?

ಉತ್ತರ ಪ್ರದೇಶದ ನಾಲ್ವರು ವಿವಾಹಿತ ಮಹಿಳೆಯರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹಣವನ್ನು ಪಡೆದ ನಂತರ ತಮ್ಮ ಗಂಡಂದಿರನ್ನು ಬಿಟ್ಟು ಪ್ರೇಮಿಗಳೊಂದಿಗೆ ಓಡಿಹೋಗಿದ್ದಾರೆ. ಈಗ ಅವರ ಪತಿಯಂದಿರು ಆಘಾತದಲ್ಲಿದ್ದಾರೆ. ಈ ವರದಿ ಓದಿ

ಲಕ್ನೋ, ಫೆಬ್ರವರಿ 08: ಉತ್ತರ ಪ್ರದೇಶದ ನಾಲ್ವರು ವಿವಾಹಿತ ಮಹಿಳೆಯರು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಹಣವನ್ನು ಪಡೆದ ನಂತರ ತಮ್ಮ ಗಂಡಂದಿರನ್ನು ಬಿಟ್ಟು ಪ್ರೇಮಿಗಳೊಂದಿಗೆ ಓಡಿಹೋಗಿದ್ದಾರೆ. PMAY ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಬಡವರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಆರ್ಥಿಕವಾಗಿ ದುರ್ಬಲ ವರ್ಗ (EWS), ಮತ್ತು ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ಸೇರಿದವರಿಗೆ ಈ ಯೋಜನೆಯು ಸಹಾಯ ಮಾಡುತ್ತದೆ. ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ನಗದು ಹಣವನ್ನು ವರ್ಗಾಯಿಸುತ್ತದೆ. ಇದರಿಂದ ಫಲಾನುಭವಿಗಳು ಮನೆ ಹೊಂದಬಹುದು.

ಪಿಎಂಎವೈ ಅಡಿಯಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥರು ಮನೆಯ ಮಾಲೀಕರು ಅಥವಾ ಸಹ-ಮಾಲೀಕರಾಗಿರುವುದನ್ನು ಕೇಂದ್ರವು ಕಡ್ಡಾಯಗೊಳಿಸಿದೆ. ಯೋಜನೆಯ ಫಲಾನುಭವಿಗಳಾದ ನಾಲ್ವರು ಮಹಿಳೆಯರು ಇದನ್ನು ಬಳಸಿಕೊಂಡಿದ್ದಾರೆ. ಅವರ ಖಾತೆಗೆ ₹ 50,000 ಅನುದಾನ ಬಂದ ತಕ್ಷಣ ಅವರು ತಮ್ಮ ಗಂಡನನ್ನು ತೊರೆದಿದ್ದಾರೆ.

ಆದಾಗ್ಯೂ, ಈ ಘಟನೆಯ ಪರಿಣಾಮವಾಗಿ ಗಂಡಂದಿರು ಈಗ ಎರಡು ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ - ಮನೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗದ ಕಾರಣ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆಯಿಂದ (DUDA) ಎಚ್ಚರಿಕೆಯ ನೋಟಿಸ್‌ ಅನ್ನು ಪಡೆದಿದ್ದಾರೆ. ಅವರಿಗೆ ಇಲ್ಲಿಯವರಿಗೂ ಯಾವುದೇ ಹಣ ಬಂದಿಲ್ಲ. ಈಗ ಗಂಡಂದಿರು ಆತಂಕದಲ್ಲಿದ್ದಾರೆ.

4 UP Women Flee With Lovers After Receiving PM Awas Yojana Money, Husbands In Shock

ಗೊಂದಲಕ್ಕೊಳಗಾದ ಗಂಡಂದಿರಿಗೆ ಈಗ ಏನು ಮಾಡಬೇಕೆಂದು ತೋಚುತ್ತಿಲ್ಲ, ಅದಕ್ಕಾಗಿಯೇ ಅವರು ತಮ್ಮ ಓಡಿಹೋದ ಹೆಂಡತಿಯರು ಪ್ರವೇಶಿಸಬಹುದಾದ ಬ್ಯಾಂಕ್ ಖಾತೆಗಳಿಗೆ ಮುಂದಿನ ಕಂತನ್ನು ಕಳುಹಿಸದಂತೆ DUDA ಯ ಯೋಜನಾಧಿಕಾರಿಯನ್ನು ಕೇಳಿದ್ದಾರೆ.

ಜಿಲ್ಲೆಯ ನಗರ ಪಂಚಾಯಿತಿ ಬೆಲ್ಹಾರ, ಬಂಕಿ, ಜೈದ್‌ಪುರ ಮತ್ತು ಸಿದ್ಧೌರ್‌ನ ಈ ನಾಲ್ವರು ಮಹಿಳಾ ಫಲಾನುಭವಿಗಳ ಖಾತೆಗೆ ಮೊದಲ ಕಂತನ್ನು ಕಳುಹಿಸಲಾಗಿದೆ, ಆದರೆ ಅವರು ಪ್ರೇಮಿಗಳು ಮತ್ತು ಹಣದೊಂದಿಗೆ ಪರಾರಿಯಾಗಿದ್ದಾರೆ.

4 UP Women Flee With Lovers After Receiving PM Awas Yojana Money, Husbands In Shock

ಅವರ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗದಿದ್ದಾಗ ಈ ವಿಚಿತ್ರ ಪ್ರಕರಣ ಅಧಿಕಾರಿಗಳ ಗಮನಕ್ಕೆ ಬಂದಿದೆ. ದುಡಾದ ಯೋಜನಾಧಿಕಾರಿ ಸೌರಭ್ ತ್ರಿಪಾಠಿ ಅವರು ನೋಟಿಸ್ ಕಳುಹಿಸಿದ್ದು, ಕೂಡಲೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಆದೇಶ ನೀಡಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ.

ಮಹಿಳೆಯರ ಗಂಡಂದಿರು ಅಂತಿಮವಾಗಿ ಸರ್ಕಾರಿ ಕಚೇರಿಯನ್ನು ತಲುಪಿದ್ದಾರೆ. ತಮ್ಮ ಹೆಂಡತಿಯರು ತಮ್ಮ ಪ್ರಿಯಕರರೊಂದಿಗೆ ಹೊರಟು ಹೋಗಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪಿಎಂಎವೈ ಎರಡನೇ ಕಂತು ಜಮಾ ಮಾಡದಂತೆ ಕೇಳಿಕೊಂಡಿದ್ದಾರೆ. ಈ ಫಲಾನುಭವಿಗಳಿಗೆ ಹಣ ವಸೂಲಿ ಮಾಡುವುದು ಹೇಗೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಆದಾಗ್ಯೂ, ಪ್ರತಿ ಫಲಾನುಭವಿಯಿಂದ ಹಣವನ್ನು ಮರುಪಡೆಯಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ತ್ರಿಪಾಠಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+