2020-21ರಲ್ಲಿ ನರೇಗಾ ಯೋಜನೆಯ 39% ಜನರಿಗೆ ಒಂದು ದಿನವೂ ಕೆಲಸವಿಲ್ಲ!
ನವದೆಹಲಿ, ಅ. 13: 2020-21ರ ಕೋವಿಡ್ ಸಾಂಕ್ರಾಮಿಕ ವರ್ಷದಲ್ಲಿ ಎಂಎನ್ಆರ್ಇಜಿಎ ಯೋಜನೆಯಡಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಶೇ 39ರಷ್ಟು ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳು ಒಂದು ದಿನವೂ ಕೆಲಸ ಪಡೆದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಗುರುವಾರ ಬಿಡುಗಡೆಯಾದ ಸರ್ವೆಯನ್ನು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಮತ್ತು ನಾಗರಿಕ ಸಮಾಜ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ ಮತ್ತು ಸಹಕಾರಿ ಸಂಶೋಧನೆ ಮತ್ತು ಪ್ರಸರಣ ಸಹಭಾಗಿತ್ವದಲ್ಲಿ ನಡೆಸಿವೆ.
2,500 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಬೈಜುಸ್
ಸಮೀಕ್ಷೆಯನ್ನು ನವೆಂಬರ್-ಡಿಸೆಂಬರ್ 2021 ರಲ್ಲಿ ನಾಲ್ಕು ರಾಜ್ಯಗಳ ಎಂಟು ಬ್ಲಾಕ್ಗಳಲ್ಲಿ 2,000 ಕುಟುಂಬಗಳ ಸಮೀಕ್ಷೆಯನ್ನು ನಡೆಸಲಾಗಿದೆ. ಬಿಹಾರದ ಫುಲ್ಪಾರಸ್ (ಮಧುಬನಿ) ಮತ್ತು ಛತಾಪುರ್ ಬ್ಲಾಕ್ಗಳು (ಸುಪೌಲ್), ಕರ್ನಾಟಕದ ಬೀದರ್ (ಬೀದರ್) ಮತ್ತು ದೇವದುರ್ಗ (ರಾಯಚೂರು), ಖಲ್ವಾ (ಖಾಂಡ್ವಾ) ಮತ್ತು ಘಾಟಿಗಾಂವ್ (ಗ್ವಾಲಿಯರ್) ಮಧ್ಯಪ್ರದೇಶ ಮತ್ತು ವಾರ್ಧಾದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಸುರ್ಗಾನಾ (ನಾಸಿಕ್) ನಲ್ಲಿ ನಡೆಸಲಾಗಿದೆ.
ಕೆಲವರಿಗೆ ಕೆಲಸ ಸಿಕ್ಕರೂ 64 ದಿನಗಳ ಅಂತರವಿದೆ!
"ಎಲ್ಲಾ ಬ್ಲಾಕ್ಗಳಾದ್ಯಂತ, ಕೋವಿಡ್ ವರ್ಷದಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಎಲ್ಲಾ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ ಸರಿಸುಮಾರು 39 ಪ್ರತಿಶತದಷ್ಟು ಜನರಿಗೆ ಒಂದೇ ಒಂದು ದಿನ ಕೆಲಸ ಮಾಡಲು ಸಾಧ್ಯವಾಗಿಲ್ಲ. ಅವರಿಗೆ ಕೆಲಸ ಸಿಕ್ಕಿಲ್ಲ. ಕಾರ್ಡ್ ಹೊಂದಿರುವವರು ಸರಾಸರಿ 77 ದಿನಗಳ ಕೆಲಸ ಬೇಕು ಎಂದು ಬಯಸಿದರೂ ಕೆಲಸ ಸಿಕ್ಕಿಲ್ಲ.
"ಕೆಲವು ಜಾಬ್ ಕಾರ್ಡ್ ಹೊಂದಿರುವವರಿಗೆ ಕೆಲಸ ಸಿಕ್ಕರೂ ಕೂಡ ಅವರ ಬೇಡಿಕೆಗೆ ಅನುಗುಣವಾಗಿಲ್ಲ. ಕೆಲಸದ ಅಪೇಕ್ಷಿತ ದಿನಗಳ ಸಂಖ್ಯೆ ಮತ್ತು ಕೆಲಸ ಸ್ವೀಕರಿಸಿದ ದಿನಗಳ ನಡುವಿನ ವ್ಯತ್ಯಾಸ 64 ದಿನಗಳಿವೆ" ಎಂದು ವರದಿ ಹೇಳಿದೆ.
ಕೆಲಸದ ಮಂಜೂರಾತಿ ಸರಿಯಾಗಿಲ್ಲ ಎಂದ 63% ಜನ
"ಎಲ್ಲಾ ಬ್ಲಾಕ್ಗಳಲ್ಲಿ ಅಗತ್ಯವಿರುವಷ್ಟು ಕೆಲಸ ಸಿಗದಿರಲು ಪದೇ ಪದೇ ಉಲ್ಲೇಖಿಸಲಾದ ಕಾರಣವೆಂದರೆ, ಸಮರ್ಪಕ ಕೆಲಸ ಮಂಜೂರಾತಿ ಮಾಡದಿರುವುದು. ಸರಾಸರಿ, ಎಲ್ಲಾ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ 63 ಪ್ರತಿಶತವು ಸಮೀಕ್ಷೆಯ ಬ್ಲಾಕ್ಗಳಲ್ಲಿ ಈ ಕಾರಣವನ್ನು ಉಲ್ಲೇಖಿಸಿದೆ" ಎಂದು ವರದಿ ಹೇಳಿದೆ.'
ನರೇಗಾ ಯೋಜನೆಯ ಉದ್ದೇಶವು ಪ್ರತಿ ಗ್ರಾಮೀಣ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ಕೂಲಿ ಉದ್ಯೋಗವನ್ನು ಒದಗಿಸುವುದಾಗಿದೆ.
ನರೇಗಾದಿಂದ ಅತೀ ದುರ್ಬಲರು ಆದಾಯ ನಷ್ಟದಿಂದ ಪಾರು
ಈ ನ್ಯೂನತೆಗಳ ಹೊರತಾಗಿಯೂ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಸಾಂಕ್ರಾಮಿಕ ಸಮಯದಲ್ಲಿ ಗಮನಾರ್ಹ ವ್ಯತ್ಯಾಸವನ್ನು ಉಂಟುಮಾಡಿದ. ಇದು ಅತ್ಯಂತ ದುರ್ಬಲ ಕುಟುಂಬಗಳನ್ನು ಗಮನಾರ್ಹ ಆದಾಯದ ನಷ್ಟದಿಂದ ರಕ್ಷಿಸಿದೆ.
ನರೇಗಾ ಯೋಜನೆಯಿಂದ ಬಂದ ಗಳಿಕೆಯಿಂದಾಗಿ ಕೆಲವು ಬ್ಲಾಕ್ಗಲ್ಲಿ 20 ರಿಂದ 80 ಪ್ರತಿಶತದಷ್ಟು ಆದಾಯದ ನಷ್ಟವನ್ನು ಸರಿದೂಗಿಸಲು ಸಾಧ್ಯವಾಯಿತು ಎಂದು ವರದಿ ಹೇಳಿದೆ.
ಆಡಳಿತ ಸಿಬ್ಬಂದಿ ಹೆಚ್ಚಳದಿಂದ ಭ್ರಷ್ಟಾಚಾರಕ್ಕೆ ಕಡಿವಾಣ
"ನಮ್ಮ ಅಧ್ಯಯನವು ನರೇಗಾ ಯೋಜನೆಯ ಅಗತ್ಯತೆ ಮತ್ತು ಉಪಯುಕ್ತತೆಯನ್ನು ಕಾರ್ಮಿಕರು ಎಷ್ಟು ಗೌರವಿಸುತ್ತಾರೆ ಎಂಬುದನ್ನು ತೋರಿಸುತ್ತದೆ. 10 ರಲ್ಲಿ ಎಂಟು ಕುಟುಂಬಗಳು ಈ ಯೋಜನೆಯು ಪ್ರತಿ ವ್ಯಕ್ತಿಗೆ ವರ್ಷಕ್ಕೆ 100 ದಿನಗಳ ಉದ್ಯೋಗವನ್ನು ಒದಗಿಸಬೇಕೆಂದು ಶಿಫಾರಸು ಮಾಡಿದೆ" ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅಧ್ಯಯನದ ಸಹ-ಲೇಖಕ ಮತ್ತು ಅಧ್ಯಾಪಕ ಸದಸ್ಯ ರಾಜೇಂದ್ರನ್ ನಾರಾಯಣನ್ ಹೇಳಿದ್ದಾರೆ.
"ಹೆಚ್ಚಿನ
ಕೆಲಸದ
ಬೇಡಿಕೆಯನ್ನು
ನಿಭಾಯಿಸಲು
ಕಾರ್ಯಕ್ರಮದ
ಬೃಹತ್
ವಿಸ್ತರಣೆಯ
ಅಗತ್ಯವಿದೆ.
ಕ್ಷೇತ್ರದ
ಕಾರ್ಯನಿರ್ವಹಣಾಧಿಕಾರಿಗಳನ್ನು
ಕನಿಷ್ಠ
ದ್ವಿಗುಣಗೊಳಿಸುವ
ಮೂಲಕ
ಆಡಳಿತ
ಸಿಬ್ಬಂದಿ
ಸಂಖ್ಯೆಯನ್ನು
ಹೆಚ್ಚಿಸಿ.
ಇದರಿಂದ
ಭ್ರಷ್ಟಾಚಾರವೂ
ಕಡಿಮೆಯಾಗುವ
ಸಾಧ್ಯತೆ
ಇದೆ'
ಎಂದು
ವರದಿ
ಸಲಹೆ
ನೀಡಿದೆ.
ಎನ್ಆರ್ಇಜಿಎ
ಒಕ್ಕೂಟದ
ಅಶ್ವಿನಿ
ಕುಲಕರ್ಣಿ
ಮಾತನಾಡಿ,
ಸಂಕಷ್ಟದ
ಸಮಯದಲ್ಲಿ
ಸಾಮಾಜಿಕ
ರಕ್ಷಣಾ
ಕ್ರಮವಾಗಿ
ಕಾರ್ಯನಿರ್ವಹಿಸುವುದು
ನರೇಗಾ
ಯೋಜನೆಯ
ಉದ್ದೇಶಗಳಲ್ಲಿ
ಒಂದಾಗಿದೆ
ಎಂದಿದ್ದಾರೆ.
"ಕೋವಿಡ್
ಸಾಂಕ್ರಾಮಿಕ,
ಲಾಕ್ಡೌನ್
ಭಾರೀ
ಸಂಕಷ್ಟವನ್ನು
ಸೃಷ್ಟಿಸಿತ್ತು.
ಹೀಗಾಗಿ
ನರೇಗಾ
ಕೆಲಸಗಳು
ನಿರೀಕ್ಷೆಯಂತೆ
ಅಗತ್ಯಕ್ಕೆ
ಏರಿತು.
ಹಿಂದಿನ
ವರ್ಷಗಳಿಗಿಂತ
ಹೆಚ್ಚಿನ
ಹಳ್ಳಿಗಳಿಗೆ
ಮತ್ತು
ಹೆಚ್ಚಿನ
ಕುಟುಂಬಗಳಿಗೆ
ಕೆಲಸವನ್ನು
ಒದಗಿಸಿದೆ.
ಆರ್ಥಿಕ
ದುರ್ಬಲತೆಯನ್ನು
ಕಡಿಮೆ
ಮಾಡುವಲ್ಲಿ
ನರೇಗಾ
ಪ್ರಮುಖ
ಪಾತ್ರ
ವಹಿಸಿದೆ"
ಎಂದು
ಹೇಳಿದ್ದಾರೆ.