ಗಣಿ ಬಳಿ ಮೂರು ಹೆಲ್ಮೇಟ್ ಪತ್ತೆ, ಕಾರ್ಮಿಕರ ಕುರುಹು ಮಾತ್ರ ಸಿಕ್ಕಿಲ್ಲ!
ಶಿಲ್ಲಾಂಗ್, ಡಿಸೆಂಬರ್ 29: ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿಕೊಂಡ ಕಾರ್ಮಿಕರ ಬಗ್ಗೆ ಇದುವರೆಗೂ ಯಾವುದೇ ಕುರುಹೂ ಸಿಕ್ಕಿಲ್ಲ. ಆದರೆ ಗಣಿಯಾಳದಲ್ಲಿ ಮೂರು ಹೆಲ್ಮೇಟ್ ಗಳು ಸಿಕ್ಕಿವೆ.
ಸುಮಾರು 320 ಅಡಿ ಆಳದಲ್ಲಿ 15 ಕಾರ್ಮಿಕರು ಸಿಲುಕಿಕೊಂಡ ಘಟನೆಗೆ ಸಂಬಂಧಿಸಿದಂತೆ ಶೋಧ ಕಾರ್ಯ ಮುಂದುವರಿದಿದ್ದು, 16 ದಿನಗಳ ನಂತರವೂ ಕಾರ್ಮಿಕರು ಪತ್ತೆಯಾಗದಿರುವುದು ಆತಂಕ ಸೃಷ್ಟಿಸಿದೆ.

ಇವರಲ್ಲಿ ಬಹುಪಾಲು ಕಾರ್ಮಿಕರು ಮೃತರಾಗಿದ್ದಾರೆ ಎಂದು ಮೇಘಾಲಯದ ಕಾಂಗ್ರೆಸ್ ಸಂಸದ ವಿನ್ಸೆಂಟ್ ಎಚ್ ಪಾಲಾ ಶುಕ್ರವಾರವಷ್ಟೇ ಹೇಳಿಕೆ ನೀಡಿದ್ದರು. 16 ದಿನಗಳ ಕಾಲ ಅಷ್ಟು ಆಳದಲ್ಲಿ ಆಮ್ಲಜನಕವಿಲ್ಲದೆ ಬದುಕುವುದು ಸಾಧ್ಯವಿಲ್ಲ. ಅಕಸ್ಮಾತ್ ಕಾರ್ಮಿಕರು ಬದುಕಿದ್ದರೆ ಅದು ಪವಾಡವೇ ಸರಿ.












Click it and Unblock the Notifications