ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, 6 ವರ್ಷದ ಮಗು, ಸೈನಿಕನ ಹತ್ಯೆ
ಜಮ್ಮು ಮತ್ತು ಕಾಶ್ಮೀರ, ಜುಲೈ 17: ಪಾಕಿಸ್ತಾನ ಮತ್ತೆ ರಜೌರಿ ಪ್ರದೇಶದ ಮಂಜಕೋಟೆ ಹಾಗೂ ಪೂಂಚ್ ನ ಬಲಕೋಟೆಯಲ್ಲಿ ಕದನ ವಿರಾಮ ಉಲಂಘಿಸಿದ್ದು ಇಬ್ಬರನ್ನು ಬಲಿ ಪಡೆದಿದೆ.
ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಗೆ ಸೇರಿದ ಸೈನಿಕ ನಾಯಕ್ ಮುದ್ದಾಸರ್ ಅಹ್ಮದ್ ರಜೌರಿಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು 6 ವರ್ಷದ ಮಗು ಸಾಜಿದಾ ಕಫೀಲ್ ಪೂಂಚ್ ನಲ್ಲಿ ಗುಂಡಿನ ದಾಳಿಗೆ ಅಸುನೀಗಿದ್ದಾರೆ.
ಪಾಪಿ ಪಾಕ್ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮ
ಇನ್ನು ಕದನ ವಿರಾಮ ಉಲ್ಲಂಘನೆಯಲ್ಲಿ ಇಬ್ಬರು ನಾಗರೀಕರು ಗಂಭೀರ ಗಾಯಗೊಂಡಿದ್ದಾರೆ. ರಾಜೌರಿ ಪ್ರದೇಶದ ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದ್ದು, ಜನರನ್ನು ಸ್ಥಳಾಂತರ ಮಾಡಲಾಗಿದೆ.
#WATCH Ceasefire violation by Pakistan along the Line of Control in Rajouri's Manjakote sector (Jammu & Kashmir) pic.twitter.com/nBeko8KCeZ
— ANI (@ANI_news) July 17, 2017
ಇದೇ ಸಂದರ್ಭದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒ ಅಧಿಕಾರಿಗಳ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಭಾರತೀಯ ಸೇನೆಯ ಡಿಜಿಎಂಒ 'ಎಲ್ಲಾ ಅಪ್ರಚೋದಿತ ಗುಂಡಿನ ದಾಳಿಗಳನ್ನು ಪಾಕಿಸ್ತಾನವೇ ನಡೆಸುತ್ತದೆ. ಈ ದಾಳಿಯನ್ನು ಹಿಮ್ಮೆಟ್ಟಿಸಲು ಭಾರತಕ್ಕೆ ಹಕ್ಕಿದೆ. ಆ ಪ್ರಕಾರ ಭಾರತ ಉತ್ತರ ನೀಡುತ್ತದೆ,' ಎಂದು ಪಾಕಿಸ್ತಾನದ ಅಧಿಕಾರಿಗಳಿಗೆ ಹೇಳಿದ್ದಾರೆ.