ದಟ್ಟ ಮಂಜು ಹಿನ್ನೆಲೆ ನವದೆಹಲಿಯ ಹಲವೆಡೆ 14 ರೈಲುಗಳ ಸಂಚಾರ ಹಾಗೂ 30 ವಿಮಾನಗಳ ಹಾರಾಟದಲ್ಲಿ ವಿಳಂಬ
ನವದೆಹಲಿ, ಡಿಸೆಂಬರ್, 26: ಈಗಾಗಲೇ ಮಳೆಗಾಲ ಮುಗಿದಿದ್ದು, ಚಳಿಗಾಲ ಆರಂಭವಾಗಿದೆ. ಮುಂಗಾರು ಮಳೆಯಂತೆಯೇ ಬಹುತೇಕ ರಾಜ್ಯಗಳಲ್ಲಿ ಚಳಿ ಎಂಟ್ರಿ ಕೊಟ್ಟಿದೆ. ಅಲ್ಲದೆ ಉತ್ತರ ಭಾರತ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಮುಚ್ಚಿದ ವಾತಾವರಣ ನಿರ್ಮಾಣದಿಂದ ರೈಲುಗಳ ಸಂಚಾರ ಸೇರಿದಂತೆ ವಿಮಾನ ಹಾರಾಟವನ್ನು ಕೂಡ ರದ್ದು ಮಾಡಲಾಗಿದೆ. ಹಾಗೆಯೇ ಮಂಗಳವಾರವೂ (ಡಿಸೆಂಬರ್ 26) ದಟ್ಟ ಮಂಜು ಹಿನ್ನೆಲೆ ಈ ಭಾಗಗಳಲ್ಲಿ ರೈಲು ವಿಮಾನಗಳ ಆಗಮನ ವಿಳಂಬವಾಗಿದ ಎನ್ನುವ ಮಾಹಿತಿ ಲಭ್ಯವಾಗಿದೆ.
ದಟ್ಟ ಮಂಜು ಹಿನ್ನೆಲೆ ನವದೆಹಲಿಯಿಂದ ಹಲವು ಕಡೆ ಹೋಗುವ ವಿಮಾನಗಳು, 14 ರೈಲುಗಳ ವಿಳಂಬವಾಗಿವೆ. ನವದೆಹಲಿ ವಿಮಾನ ನಿಲ್ದಾಣದಿಂದ ದುಬೈ, ಕುವೈತ್, ಕಠ್ಮಂಡು, ಲಂಡನ್ ಮತ್ತು ಮಾರಿಷಸ್ಗೆ ಹೋಗುವ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿವೆ. ಇನ್ನು ಅಬುಧಾಬಿ, ಮಿಲನ್, ಅಡಿಸ್ ಅಬಾಬಾ ಮತ್ತು ದೋಹಾದಿಂದ ಆಗಮನವೂ ವಿಳಂಬವಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ಬೆಳಗ್ಗೆ ನವದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಇದರ ಪರಿಣಾಮ ಹಲವು ವಿಮಾನಗಳು ಮತ್ತು ರೈಲುಗಳು ವಿಳಂಬವಾಗುವುದರೊಂದಿಗೆ, ಇನ್ನು ಇದರಿಂದ ಪ್ರಯಾಣದಲ್ಲಿ ಅಡಚಣೆಗಳು ಉಂಟಾದವು. ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಏನು ಕಾಣದೇ ಬರೀ ಮಂಜು ಆವರಿಸಿದ್ದು, ಇದರ ಪರಿಣಾಮ ಮಂಗಳವಾರ ಹಲವಾರು ವಿಮಾನಗಳ ಆಮನ, ನಿರ್ಗಮನದಲ್ಲಿ ವಿಳಂಬವಾದವು. ಬೆಳಗ್ಗೆ 8:30 ರಿಂದ 10ರವರೆಗೆ ಐದು ವಿಮಾನಗಳನ್ನು ಜೈಪುರಕ್ಕೆ ತಿರುಗಿಸಲಾಗಿದೆ ಎಂದು ವಿಮಾನನಿಲ್ದಾಣ ಅಧಿಕಾರಿಗಳು ಮಾಹಿತಿ ನೀಡಿದರು.
ರಾಷ್ಟ್ರ ರಾಜಧಾನಿಯ ತಾಪಾಮಾನ ಸುಮಾರು 7 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ನವದೆಹಲಿ ವಿಮಾನ ನಿಲ್ದಾಣದಲ್ಲಿ, ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಸುಮಾರು 30 ವಿಮಾನಗಳು ಆಗಮನ ಮತ್ತು ನಿರ್ಗಮನ ಎರಡರಲ್ಲೂ ವಿಳಂಬವನ್ನು ಅನುಭವಿಸಿದವು. ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದ ಫ್ಲೈಟ್ ಇನರ್ಮೇಷನ್ ಡಿಸ್ಪ್ಲೇ ಸಿಸ್ಟಮ್ ಡೇಟಾವು ಅಡಚಣೆಗಳನ್ನು ಸೂಚಿಸಿದ್ದು, ದಿನವಿಡೀ ಹೆಚ್ಚಿನ ವಿಮಾನಗಳು ಪರಿಣಾಮ ಬೀರಬಹುದು ಎಂದು ಮೂಲಗಳು ಸೂಚಿಸಿವೆ. ಅದೇ ರೀತಿ ಮಂಜು ಕವಿದ ವಾತಾವರಣದಿಂದಾಗಿ 14 ರೈಲುಗಳ ಆಗಮನವೂ ವಿಳಂಬವಾಗಿದೆ.
ಮತ್ತೊಂದೆಡೆ ಚೆನ್ನೈ ಮತ್ತು ಶಿಮ್ಲಾಕ್ಕೆ ದೇಶೀಯ ವಿಮಾನಗಳು ತಡವಾಗಿ ಲಕ್ನೋಗೆ ಹೋಗುವ ವಿಮಾನವನ್ನು ರದ್ದುಗೊಳಿಸಲಾಯಿತು. ಚಂಡೀಗಢ, ಬೆಂಗಳೂರು, ಮುಂಬೈ, ಲಕ್ನೋ, ಜೈಪುರ ಮತ್ತು ಅಹಮದಾಬಾದ್ನಿಂದ ಆಗಮಿಸುವ ವಿಮಾನಗಳು ಪ್ರತಿಕೂಲ ಹವಾಮಾನದಿಂದಾಗಿ ವಿಳಂಬ ಆಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಪುರಿ, ಹೌರಾ, ಕಾನ್ಪುರ್, ಅಲಹಾಬಾದ್, ಅಜಂಗಢ್, ಭಗಲ್ಪುರ್, ಗಯಾ, ದಿಬ್ರುಗಢ್, ದುರ್ಗ್, ಚೆನ್ನೈ, ಹೈದರಾಬಾದ್, ಹಬೀಬ್ಗಂಜ್, ಖಜುರಾಹೊ ಮತ್ತು ವಾಸ್ಕೋ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನವದೆಹಲಿಗೆ ತೆರಳುವ 14 ರೈಲುಗಳ ವಿಳಂಬವಾಗಿದೆ ಎಂದು ಉತ್ತರ ರೈಲ್ವೆ ಮಾಹಿತಿ ನೀಡಿದೆ.
-
Indian Railway: ಬಣ್ಣದಿಂದಲೇ ರೈಲುಗಳ ವ್ಯತ್ಯಾಸ ಗುರುತಿಸುವುದು ಹೇಗೆ? -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್












Click it and Unblock the Notifications