ಚಿತ್ರ ಸಂಪುಟ: ಸುದ್ದಿಯಾದರೂ ಸದ್ದು ಮಾಡದ 10 ಪ್ರಮುಖ ಸುದ್ದಿಗಳು
ಸಿನಿಮಾ ನಟಿಯ ಮೇಲೆ ಕಾಮುಕರ ಅಟ್ಟಹಾಸ, ಸಿಎಂ ಸಿದ್ದರಾಮಯ್ಯ - ಯಡಿಯೂರಪ್ಪ ವಾಕ್ಸಮರ, ನೆಲಮಂಗಲದ ಬಳಿ ಬಸ್ ಗೆ ಬೆಂಕಿ - ಇವೆಲ್ಲಾ ಸುದ್ದಿ ಜಂಜಾಟಗಳ ನಡುವೆ ಕೊಂಚ ಮನಸ್ಸಿಗೆ ಮುದ ಕೊಡುವಂಥ, ನಿತ್ಯ ಕಿಚ್ಚು ಹೊತ್ತಿಸುವ ಸುದ್ದಿಗಳಿಗಿಂತ ಭಿನ್ನವಾದ ಮತ್ತೊಂದಿಷ್ಟು ವಿಚಾರಗಳ ಗಮನ ಕೊಡುವುದು ಆರೋಗ್ಯಕ್ಕೆ ಒಳ್ಳೆಯದು!
ಹಾಗಾಗಿಯೇ, ಅಂಥ ಕೆಲವು ಸಚಿತ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಉದಾಹರಣೆಗೆ, ದೇಶದಲ್ಲಿಯೇ ಅತಿ ದೊಡ್ಡ ಸ್ಥಳೀಯ ಸರ್ಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈ ಮಹಾನಗರ ಪಾಲಿಕೆಗೆ ಮಂಗಳವಾರ ಮತದಾನ ನಡೆಯುತ್ತಿದೆ. ಅಲ್ಲಿ, ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಮತ ಚಲಾಯಿಸಿದ್ದಾರೆ.
ದೂರದ ಇಂಡೋನೇಷ್ಯಾದ ಜಕಾರ್ತಾದಲ್ಲಿ ಪ್ರವಾಹವೇರ್ಪಟ್ಟು ಜನ, ಮನೆಗಳು ಜಲಾವೃತವಾಗಿವೆ. ಕೊಲಂಬೋದಲ್ಲಿ ಐಸಿಸಿ ಮಹಿಳೆಯರ ವಿಶ್ವಕಪ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಟೂರ್ನಿಯ ಫೈನಲ್ ನಲ್ಲಿ ಇಂದು ಭಾರತ- ದಕ್ಷಿಣ ಆಫ್ರಿಕಾ ಸೆಣೆಸಿವೆ.
ಮತ್ತೆ ವಾಪಸ್, ಭಾರತಕ್ಕೆ ಬರುವುದಾದರೆ ಉತ್ತರ ಪ್ರದೇಶದಲ್ಲಿ ಚುನಾವಣಾ ಬಿಸಿಯಿದೆ. ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾಡೆಲ್ಲಾ ಅವರು ಭಾರತದ ನಾಡನ್ನು ಸುತ್ತುತ್ತಿರುವ ವಿಚಾರಗಳಿವೆ.
ಫೋಟೋ ಸಹಿತ ಸಂಕ್ಷಿಪ್ತ ಮಾಹಿತಿ ನಮ್ಮದು, ಸುಮ್ಮನೇ ಒಂದು ಓದು ನಿಮ್ಮದು....

ಮತದಾರರ ಮೇಲೆ ಮೋಡಿ
ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ಮುಂಬೈನ ಮತಗಟ್ಟೆಯೊಂದರಲ್ಲಿ ವೋಟು ಹಾಕಿದ ಸಚಿನ್ ತೆಂಡೂಲ್ಕರ್ ದಂಪತಿ.

ಸೇನೆಯ ಕಾರ್ಯಾಚರಣೆ
ದೂರದ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಪ್ರವಾಹವುಂಟಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ಅಲ್ಲಿನ ಯೋಧರು ನಾಗರಿಕರ ನೆರವಿಗಾಗಿ ರಬ್ಬರ್ ಬೋಟ್ ನಲ್ಲಿ ಸಾಗುತ್ತಿರುವ ಚಿತ್ರವಿದು.

ಪ್ರಶಸ್ತಿಗಾಗಿ ಹೋರಾಟ
ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ನಡೆದ ಇದೇ ವರ್ಷ ಜೂನ್ ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಗಾಗಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಾವಳಿಯ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದ ಶಬನಮ್ ಇಸ್ಮಾಯಿಲ್ ಅವರನ್ನು ಭಾರತದ ವಿಕೆಟ್ ಕೀಪರ್ ಸುಷ್ಮಾ ವರ್ಮಾ ಔಟ್ ಮಾಡಿದ್ದು ಹೀಗೆ.

ಕಾರ್ಯಕರ್ತರ ಹರ್ಷ
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಲಹಾಬಾದ್ ನ ಸ್ವರಾಜ್ ಭವನ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸಿದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ.

ಚುನಾವಣಾ ರ್ಯಾಲಿ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆ ರಾಜ್ಯದ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು, ಅಲಹಾಬಾದ್ ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರಚಾರ ನಡೆಸಿದರು.

ಮಾಲ್ ಮೇಲೆ ಬಂದು ಬಿದ್ದ ಉಕ್ಕಿನ ಹಕ್ಕಿ
ಮೆಲ್ಬೋರ್ನ್ ನಲ್ಲಿ ಶಾಪಿಂಗ್ ಮಾಲ್ ಮೇಲೆ ಬಂದು ಬಿದ್ದ ಪುಟ್ಟ ವಿಮಾನದ ಅವಶೇಷಗಳನ್ನು ತೆಗೆಯುವಲ್ಲಿ ನಿರತರಾಗಿರುವ ಕಾರ್ಮಿಕರು.

ಟಾಟಾ ಸನ್ಸ್ ಹೊಸ ಮುಖ್ಯಸ್ಥ
ಬಹು ದಿನಗಳಿಂದ ವಿವಾದದ ಗೂಡಾಗಿದ್ದ ಟಾಟಾ ಸನ್ಸ್ ಗ್ರೂಪ್ ಗೆ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿರುವ ನಟರಾಜನ್ ಚಂದ್ರಶೇಖರ್ ಅವರು ಬಾಂಬೆ ಹೌಸ್ ನಿಂದ ಹೊರಬರುತ್ತಿರುವುದು.

ನ್ಯಾಟ್ ಜಿಯೋ ವಿಶೇಷ ಕಾರ್ಯಕ್ರಮ
ಜನಪ್ರಿಯ ವಾಹಿನಿಯಾದ ನ್ಯಾಷನಲ್ ಜಿಯೋಗ್ರಾಫಿಕ್, ಈ ವಾರ ಬಿಗ್ ಕ್ಯಾಟ್ ವೀಕ್ ಎಂಬ ಆಚರಣೆಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಹೊಸದಾದ ಆಂದೋಲನವನ್ನು ಆರಂಭಿಸಲಾಗಿದ್ದು ಅದರ ಶೂಟಿಂಗ್ ವೇಳೆ ಕಲಾವಿದೆಯೊಬ್ಬರು ಚಿರತೆ ಮರಿಯೊಂದಿಗೆ ಕಂಡಿದ್ದು ಹೀಗೆ.

ಕೇಂದ್ರ ಸಚಿವರ ಜತೆ ಮಾತು
ಭಾರತದ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ ಅವರು, ಮಂಗಳವಾರ ಕೇಂದ್ರ ಸರ್ಕಾರದ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಬಾಲ್ಟಿಕ್ ನಲ್ಲಿ ಕಾರ್ಯಕ್ರಮ
ಜರ್ಮನಿಯ ಬಾಲ್ಟಿಕ್ ದ್ವೀಪದಲ್ಲಿ ಆಯೋಜಿಸಲಾಗಿರುವ ಯೋಗ ಕಾರ್ಯಕ್ರಮವೊಂದಕ್ಕಾಗಿ ತಯಾರಿ ನಡೆಸುತ್ತಿರುವ ಯುವತಿಯರು ಕಂಡಿದ್ದು ಹೀಗೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications