ಈ ರೀತಿಯ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹದ್ದಿನ ಕಣ್ಣು, ತನಿಖೆ
ಬ್ಯಾಂಕ್ ಗಳಲ್ಲಿ ಅನುಮಾನಾಸ್ಪದ ಆರ್ಥಿಕ ವ್ಯವಹಾರಗಳ ಪ್ರಮಾಣದಲ್ಲಿ ವಿಪರೀತ ಏರಿಕೆ ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿಯಲ್ಲಿ ಇದು ಬಹಿರಂಗವಾಗಿದೆ. 2015-16ರಲ್ಲಿ 61,361ರಷ್ಟಿದ್ದ ಇಂಥ ವ್ಯವಹಾರಗಳ ಸಂಖ್ಯೆ 2016-17ರ ವೇಳೆಗೆ 3.61 ಲಕ್ಷಕ್ಕೆ ಏರಿಕೆಯಾಗಿದೆ. 2014-15ರಲ್ಲಿ ಈ ಪ್ರಮಾಣ 45,858 ಇತ್ತು.
2004ರಲ್ಲಿ ಆರಂಭಿಸಲಾದ ಆರ್ಥಿಕ ಗುಪ್ತಚರ ಇಲಾಖೆ ವಿಭಾಗವು ಯಾವ್ಯಾವ ವ್ಯವಹಾರಗಳು ಅನುಮಾನಾಸ್ಪದವಾದವು ಎಂಬ ಬಗ್ಗೆ ಒಂದು ಪಟ್ಟಿ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿನ ವಿವರಗಳು ಹೀಗಿವೆ.

* ಸುಳ್ಳು ದಾಖಲೆ ಪತ್ರಗಳು, ಗುರುತಿನ ಪತ್ರಗಳನ್ನು ನಿಗದಿತ ಕಾಲಾವಧಿಯಲ್ಲಿ ಪರಿಶೀಲನೆ ಮಾಡದಿರುವುದು ಮತ್ತು ಅದಾಗಲೇ ಆರಂಭವಾದ ಸಂಸ್ಥೆಗಳ ಹೆಸರಿಗೆ ಹತ್ತಿರ ಇರುವಂತೆ ಖಾತೆಗಳನ್ನು ತೆರೆಯುವುದು.
* ಬಹಳ ಬ್ಯಾಂಕ್ ಖಾತೆಗಳಿಗೆ ಒಬ್ಬರೇ ಖಾತೆದಾರ ಇರುವುದು, ವಿವರಣೆಯೇ ಇಲ್ಲದಂತೆ ಹಲವು ಖಾತೆಗಳು ಹಣ ವರ್ಗಾವಣೆ ಮಾಡಿರುವುದು.
* ಒಬ್ಬರೇ ಗ್ರಾಹಕರು ಪರ್ಯಾಯವಾಗಿ ಹಲವು ಖಾತೆಗಳನ್ನು ಬಳಕೆ ಮಾಡಿರುವುದು
* ಮುಂಚಿನ ವ್ಯವಹಾರಗಳಿಗೆ ಹೋಲಿಸಿದರೆ ಅನುಮಾನ ಮೂಡುವಷ್ಟು ಪ್ರಮಾಣದಲ್ಲಿ ವ್ಯವಹಾರ ಮಾಡಿರುವುದು
* ವರ್ಷಗಟ್ಟಲೆ ಯಾವುದೇ ಚಟುವಟಿಕೆ ಇಲ್ಲದ ಬ್ಯಾಂಕ್ ಖಾತೆಯಲ್ಲಿ ದಿಢೀರನೆ ವ್ಯವಹಾರ ನಡೆಸಿರುವುದು
* ವಿಧಿಸಿದ ಮಿತಿಗಿಂತ ಸ್ವಲ್ಪೇ ಸ್ವಲ್ಪ ಕಡಿಮೆ ಮೊತ್ತ ಜಮೆ, ವಿದೇಶಿ ಖಾತೆಗಳಿಂದ ಪಾವತಿಯಂತೆ ತೋರಿಸಿ ದೊಡ್ಡ ಮೊತ್ತದ ವರ್ಗಾವಣೆ
* ಆದಾಯದ ಮೂಲದ ಬಗ್ಗೆ ಅನುಮಾನಗಳಿದ್ದಲ್ಲಿ, ತಮ್ಮ ವ್ಯವಹಾರಕ್ಕೂ ನಡೆಸುತ್ತಿರುವ ಆರ್ಥಿಕ ಚಟುವಟಿಕೆಗೂ ತಾಳೆಯಾಗದಿದ್ದಲ್ಲಿ, ಗ್ರಾಹಕರ ಆರ್ಥಿಕ ಚೈತನ್ಯಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ಕಂಡುಬಂದಲ್ಲಿ
* ಒಳಗಿನವರ ಕೈವಾಡದಿಂದಲೇ ವ್ಯವಹಾರ ನಡೆಸಿರುವುದು, ಮಾರುಕಟ್ಟೆ ವ್ಯವಹಾರ ಎಂದು ತಪ್ಪು ಲೆಕ್ಕ ತೋರಿಸಿದ್ದರೆ, ಅನುಮಾನ ಮೂಡಿಸುವಂಥ ಆಫ್ ಮಾರುಕಟ್ಟೆ ವ್ಯವಹಾರಗಳು
* ನಗದು ಮೂಲಕ ಅನುಮಾನ ಮೂಡುವ ಪ್ರಮಾಣದಲ್ಲಿ ಡಿಡಿ, ಎಫ್ ಡಿ ಅಥವಾ ಇನ್ಯಾವುದೇ ಡ್ರಾಫ್ಟ್ ಗಳ ಖರೀದಿ
ಇವೆಲ್ಲವನ್ನೂ ಅನುಮಾನಾಸ್ಪದ ಬ್ಯಾಂಕ್ ವ್ಯವಹಾರಗಳೆಂದು ಪರಿಗಣಿಸಲಾಗುತ್ತದೆ ಮತ್ತು ಆ ಬಗ್ಗೆ ತನಿಖೆ ಮಾಡುವ ಸಾಧ್ಯತೆಯಿರುತ್ತದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications