Get Updates
Get notified of breaking news, exclusive insights, and must-see stories!

ತಿರುಪತಿ ದೇವಾಲಯದಲ್ಲಿ ಕೆಲಸ ಕಳೆದುಕೊಂಡ 1,300 ಕಾರ್ಮಿಕರು

ಅಮರಾವತಿ, ಮೇ 2: ಲಾಕ್‌ಡೌನ್‌ನಿಂದ ಸಾಕಷ್ಟು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಕಂಪನಿಗಳು ಮಾತ್ರವಲ್ಲದೆ, ತಿರುಪತಿ ದೇವಲಯದಲ್ಲಿಯೂ 1,300 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.

Recommended Video

      2,500 ವರ್ಷದಲ್ಲಿ ಮೊದಲಬಾರಿಗೆ ತಿರುಪತಿಗೆ ಬೀಗ | Tirupathi Locked After 2500 Years

      ಕೆಲಸ ಕಳೆದುಕೊಂಡ 1,300 ಕಾರ್ಮಿಕರು ತಿರುಪತಿ ದೇವಾಲಯದಲ್ಲಿ ನೈರ್ಮಲ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಒಪ್ಪಂದದ (ಕಾಂಟ್ರಾಕ್ಟ್) ಆಧಾರದಲ್ಲಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಕಾಂಟ್ರಾಕ್ಟ್ ಏಪ್ರಿಲ್ 30ಕ್ಕೆ ಮುಗಿದಿದೆ. ಈಗ ಈ ಕಾರ್ಮಿಕರ ಕಾಂಟ್ರಾಕ್ಟ್ ರಿನಿವಲ್ ಮಾಡದೆ ಇರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.

      ಏಪ್ರಿಲ್ 30ಕ್ಕೆ ಕಾಂಟ್ರಾಕ್ಟ್ ಮುಗಿದಿದ್ದು, ಮೇ 1 ರಿಂದ ಕೆಲಸಕ್ಕೆ ಬರದೆ ಇರಲು ತಿಳಿಸಲಾಗಿದೆ. ಖಾಯಂ ಕಾರ್ಮಿಕರು ಹಾಗೂ ಸಿಬ್ಬಂದಿಗಳ ಕೆಲಸ ಹಾಗೆ ಉಳಿದುಕೊಂಡಿದೆ. ಮಾರ್ಚ್ 20 ರಂದು ಲಾಕ್‌ಡೌನ್ ಘೋಷಣೆ ಆಗಿದ್ದು, ಆ ದಿನದಿಂದ ಎಲ್ಲ ಸಿಬ್ಬಂದಿಗಳಿಗೂ ರಜೆ ನೀಡಲಾಗಿದೆ.

      Tirupati Balaji Temple Ends Contract With 1300 Workers

      ಕಾರ್ಮಿಕರು ಈ ಕಠಿಣ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಕೆಲಸವನ್ನು ಮುಂದುವರಿಸಲು ಅವಕಾಶ ನೀಡುವಂತೆ ಕೇಳುಕೊಂಡಿದ್ದಾರೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿ ಕಾಂಟ್ರಾಕ್ಟ್ ಮುಂದುವರೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

      ವರದಿಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಟಿಟಿಡಿಯ ಬಜೆಟ್ 3,309 ಕೋಟಿ ರೂಪಾಯಿ ಆಗಿತ್ತು. ಇದು ಫೆಬ್ರವರಿಯಲ್ಲಿ ಅಂತಿಮಗೊಳಿಸಿತ್ತು. ಆದರೆ, COVID-19 ಪರಿಸ್ಥಿತಿಯ ಕಾರಣದಿಂದಾಗಿ ಇದನ್ನು ಬದಲು ಮಾಡುವ ಸಾಧ್ಯತೆ ಇದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+