ತಿರುಚಾನೂರು ಪದ್ಮಾವತಿ ಕಾರ್ತಿಕ ಬ್ರಹ್ಮೋತ್ಸವ
ತಿರುಮಲ, ನ.24: ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ ತಿರುಪತಿ ತಿಮ್ಮಪ್ಪನ ವಾರ್ಷಿಕ 'ಬ್ರಹ್ಮೋತ್ಸವ' ದ ನಂತರ ಕಾರ್ತಿಕ ಮಾಸದಲ್ಲಿ ತಿರುಚಾನೂರು ಅಲಮೇಲು ಮಂಗಮ್ಮನ ಉತ್ಸವ ವಿಜೃಂಭಣೆಯಿಂದ ನಡೆದಿದೆ.
ವೈಜ್ರವೈಢೂರ್ಯ ಚಿನ್ನಾಭರಣ ಭೂಷಿತನಾದ ಏಳುಬೆಟ್ಟದ ಒಡೆಯ ತಿಮ್ಮಪ್ಪ ಮೋಹಿನಿ ಅವತಾರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡು ಭಕ್ತರಿಗೆ ದರ್ಶನ ನೀಡುವುದನ್ನು ಕಂಡ ಭಕ್ತಾದಿಗಳು ಕಾರ್ತಿಕ ಮಾಸದಲ್ಲಿ ಚಿತ್ತೂರು ಜಿಲ್ಲೆ ತಿರುಪತಿ ತಾಲೂಕಿನ ತಿರುಚಾನೂರಿನ ಅಲಮುಲು ಮಂಗಮ್ಮ(ಪದ್ಮಾವತಿ) ದೇವರ ಬ್ರಹ್ಮೋತ್ಸವವನ್ನು ಕಂಡು ಪುಳಕಿತರಾಗಿದ್ದಾರೆ. [ಮೋಹಿನಿ ರೂಪದಲ್ಲಿ ತಿಮ್ಮಪ್ಪನನ್ನು ನೋಡಿ]
ತಿರುಚಾನೂರು ಅಥವಾ ಅಲಮೇಲು ಮಂಗಾಪುರದ ದೇವಾಲಯವು ಅಲಮೇಲು ಮಂಗಮ್ಮ ಅಥವಾ ಪದ್ಮಾವತಿ ದೇವಿಗೆ ಸೇರಿದ್ದಾಗಿದೆ. ಈ ದೇವತೆ ಪುಷ್ಕರಣಿ ಎಂಬ ಕೊಳದಲ್ಲಿ ಜನಿಸಿದಳು ಎಂದು ನಂಬಲಾಗುತ್ತದೆ. ಈ ದೇವಾಲಯ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಧಾರ್ಮಿಕ ನಂಬಿಕೆ ಉಳ್ಳ ಪ್ರವಾಸಿಗರಿಗೆ ಇದು ಪ್ರಶಸ್ತ ತಾಣ.
ಕಲಶಗಿತ್ತಿಯರು ಸಾಲು ಸಾಲಾಗಿ ಜಗನ್ಮಾತೆಯ ಮುಂದೆ ಸಾಗಿದರು. ಅರಿಶಿನ, ಕುಂಕುಮ, ಬಳೆ ಬಿಚ್ಚೋಲೆ, ರೇಷ್ಮೆ ಸೀರೆ, ವಿವಿಧ ಆಭರಣಗಳು ಮಾತೆಗೆ ಅರ್ಪಿಸಿ ಭಕ್ತರು ಕೃತಾರ್ಥರಾಗಿದ್ದಾರೆ. ಬ್ರಹ್ಮೋತ್ಸವದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗಿನ ಚಿತ್ರ ಸರಣಿ ಮುಂದಿದೆ ತಪ್ಪದೇ ನೋಡಿ...

ಹಂಸವಾಹನರೂಢಳಾದ ಪದ್ಮಾವತಿ ಅಮ್ಮ
ಕಾರ್ತಿಕ ಮಾಸದಲ್ಲಿ ತಿರುಚನೂರಿನ ಅಲಮುಲು ಮಂಗಮ್ಮ(ಪದ್ಮಾವತಿ) ದೇವರ ಬ್ರಹ್ಮೋತ್ಸವವನ್ನು ಕಂಡು ಪುಳಕಿತರಾಗಿದ್ದಾರೆ. ಹಂಸವಾಹನರೂಢಳಾದ ಪದ್ಮಾವತಿ ಅಮ್ಮನವರನ್ನು ಕಾಣಬಹುದು.

ಮೆರವಣಿಗೆಗೂ ಮುನ್ನ ಶ್ರೀಮಜ್ಜನ
ಮೆರವಣಿಗೆಗೂ ಮುನ್ನ ಪದ್ಮಾವತಿ ಅಮ್ಮನವರ ಮೂರ್ತಿಗೆ ಶ್ರೀಮಜ್ಜನ ಮಾಡಲಾಯಿತು

ಕಾರ್ತಿಕ ಮಾಸದ ವಿಶೇಷ ಉತ್ಸವ
ನವೆಂಬರ್ 19ರಂದು ಧ್ವಜಾರೋಹಣ ಪೂಜೆಯೊಂದಿಗೆ ಕಾರ್ತಿಕಮಾಸದ ಬ್ರಹ್ಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನದಂದು ಚಿನ್ನದ ಶೇಷ ವಾಹನರೂಢಳಾಗಿ ಪದ್ಮಾವತಿ ಅಮ್ಮನ ಮೆರವಣಿಗೆ ಸಾಗಿತು.

ದೊಡ್ಡ ಶೇಷ ವಾಹನ ಸೇವೆ
ಉತ್ಸವದ ಎರಡನೇ ದಿನದಂದು ಅಲಮೇಲು ಮಂಗಮ್ಮನವರನ್ನು ದೊಡ್ಡ ಶೇಷವಾಹನ, ಹಂಸವಾಹನದಲ್ಲಿ ಇರಿಸಿಕೊಂಡು ಮೆರವಣಿಗೆ ಮಾಡಲಾಯಿತು.

ಮೂರನೇ ದಿನ ಸಿಂಹವಾಹನ
ಕಾರ್ತಿಕ ಬ್ರಹ್ಮೋತ್ಸವದ ಮೂರನೇ ದಿನ ಸಿಂಹವಾಹನರೂಢಳಾಗಿ ಮಾತೆ ಎಲ್ಲರಿಗೂ ದರ್ಶನ ನೀಡಿದ್ದಾಳೆ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ವಿವಿಧ ರಾಜ್ಯಗಳಿಂದ ಬಂದಿದ್ದ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ವಿವಿಧ ವೇಷ ಭೂಷಣಗಳು
ಬ್ರಹ್ಮೋತ್ಸವದ ಅಂಗವಾಗಿ ವಿಷ್ಣು ಅವತಾರಗಳನ್ನು ಹೋಲುವ ವೇಷ ಭೂಷಣಗಳನ್ನು ಧರಿಸಿದ್ದ ಕಲಾವಿದರು ಭಕ್ತಾದಿಗಳನ್ನು ವಿಶೇಷವಾಗಿ ಆಕರ್ಷಿಸಿದರು.

ವಿವಿಧ ವಾಹನಗಳ ಮೆರವಣಿಗೆ
ನ.19 ರಿಂದ ನ.27ರವರೆಗೆ ವಿವಿಧ ವಾಹನರೂಢಳಾಗಿ ಪದ್ಮಾವತಿ ಅಮ್ಮ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಪ್ರತಿನಿತ್ಯ ಬೆಳಗ್ಗೆ 8 ಗಂಟೆ, ಸಂಜೆ 6 ಹಾಗೂ 8 ಗಂಟೆಗೆ ವಾಹನ ಸೇವೆ ನಡೆಸಲಾಗುತ್ತದೆ.

ಧ್ವಜ ಅವರೋಹಣದೊಂದಿಗೆ ಮುಕ್ತಾಯ
ಬ್ರಹ್ಮೋತ್ಸವ ಕಾರ್ಯಕ್ರಮ ನ.27ರಂದು ಪಂಚಮಿ ತೀರ್ಥ ಸೇವೆ, ಪಲ್ಲಕ್ಕಿ ತಿರುಚ್ಚಿ ಉತ್ಸವ ಧ್ವಜ ಅವರೋಹಣದ ಮೂಲಕ ಸಂಪನ್ನವಾಗಲಿದೆ.

ರಾಮಾಯಣದ ಕಥಾನಕ ಪ್ರದರ್ಶನ
ವಾಲಿ ಸುಗ್ರೀವರ ಕಥೆ, ಹನುಮಂತ, ಜಾಂಬವತರ ಕಥಾಭಾಗ ಸೇರಿದಂತೆ ರಾಮಾಯಣವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು

ಎಲ್ಲಾ ಸೇವೆಗಳ ಸಂಪೂರ್ಣ ವಿವರ
ಶೇಷ ವಾಹನ, ಹಂಸವಾಹನ, ಹನುಮಂತ ವಾಹನ, ಗರುಢವಾಹನ, ಅಶ್ವವಾಹನರೂಢಳಾಗಿ ಪದ್ಮಾವತಿ ದರ್ಶನ ನೀಡುತ್ತಾಳೆ
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications