ಹೈದರಾಬಾದಿನಲ್ಲಿ ಹೆಣ್ಣುಮಕ್ಕಳಿಗೆ 'ಪೆಪ್ಪರ್ ಸ್ಪ್ರೇ' ನೀಡಿದ ಅಸಾದುದ್ದೀನ್ ಓವೈಸಿ
ಹೈದರಾಬಾದ್, ಸೆಪ್ಟೆಂಬರ್ 26: 'ನಮ್ಮ ಗುರಿಯೇನಿದ್ದರೂ ಮಕ್ಕಳಲ್ಲಿ ಭಯ ಹೋಗಲಾಡಿಸುವುದು' ಎಂದಿರುವ ಎಐಎಂಐಎಂ(All India Majlis-e-Ittehad-ul Muslimeen) ಪಕ್ಷದ ಮುಖಂಡ, ಸಂಸದ ಅಸಾದುದ್ದೀನ್ ಓವೈಸಿ ಹೆಣ್ಣು ಮಕ್ಕಳಿಗೆ ಪೆಪ್ಪರ್ ಸ್ಪ್ರೇ ಹಂಚಿದರು!
'ಸುಳ್ಳು ಹೇಳುತ್ತಿರುವುದು ಮೋದಿಯೋ, ಫ್ರಾನ್ಸ್ ಮಾಜಿ ಅಧ್ಯಕ್ಷರೋ?!'
ಮಕ್ಕಳಿಗೆ ರಕ್ಷಣೆ ನೀಡಲು ಸಾಧ್ಯವಾಗದ ಶೈಕ್ಷಣಿಕ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಓವೈಸಿ ಒತ್ತಾಯಿಸಿದರು.
'ಸುಳ್ಳು ಹೇಳುತ್ತಿರುವುದು ಮೋದಿಯೋ, ಫ್ರಾನ್ಸ್ ಮಾಜಿ ಅಧ್ಯಕ್ಷರೋ?!'
ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ ಅವರು, ಹೈದರಾಬಾದಿನ ಸರ್ಕಾರಿ ಜ್ಯೂನಿಯರ್ ಮತ್ತು ಡಿಗ್ರಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಪೆಪ್ಪರ್ ಸ್ಪ್ರೇ ನೀಡಿದರು. 'ನಿಮ್ಮ ಬದುಕನ್ನು ಹಾಳುಮಾಡಲು ಬರುವ ಸೈತಾನರ ವಿರುದ್ಧ ಹೋರಾಡಿ' ಎಂದು ಪೆಪ್ಪರ್ ಸ್ಪ್ರೇ ನೀಡುವ ಸಂದರ್ಭದಲ್ಲಿ ಅವರು ಹೇಳಿದರು.
"ನಿಮ್ಮ ಮೇಲೆ ಯಾರೇ ದೌರ್ಜನ್ಯ ಎಸಗಲು ಪ್ರಯತ್ನಿಸಿಸದರೂ ಹೆದರಬೇಡಿ. ನಿಮ್ಮ ತಂದೆ-ತಾಯಿಗೆ, ಶಿಕ್ಷಕರಿಗೆ ಈ ವಿಶಶಯ ತಿಳಿಸಿ. ಇದರಲ್ಲಿ ಸಂಕೋಚ ಪಡುವಂಥದ್ದು ಏನೂ ಇಲ್ಲ. ಮೌನವಾಗಿರಬೇಡಿ. ನಾವು ನಿಮ್ಮೊಂದಿಗಿದ್ದೇವೆ. ನೀವು ಹೆದರಿದರೆ ನಮ್ಮ ದೇಶ ಸಮೃದ್ಧಿಯಾಗುವುದು ಹೇಗೆ?" ಎಂದು ಓವೈಸಿ ಹೆಣ್ಣು ಮಕ್ಕಳನ್ನು ಪ್ರಶ್ನಿಸಿದರು.