ಬೇಲ್ಗಾಗಿ ಡೀಲ್ ಪ್ರಕರಣದಲ್ಲೂ ರೆಡ್ಡಿಗೆ ಜಾಮೀನು
ಹೈದರಾಬಾದ್, ಡಿ. 18: ಜೈಲಿನಿಂದ ಹೊರಬರಲು ಜಾಮೀನು ಪಡೆಯಲೆಂದೇ ನ್ಯಾಯಾಧೀಶರೊಂದಿಗೆ ಡೀಲ್ ನಡೆಸಿ ಸಿಕ್ಕಿಬಿದ್ದಿದ್ದ ಪ್ರಕರಣದಲ್ಲಿ ಆರೋಪಿ ಜನಾರ್ದನ ರೆಡ್ಡಿಗೆ ಜಾಮೀನು ದೊರೆತಿದೆ.
ಏನಿದು ಪ್ರಕರಣ: ಓಬಳಾಪುರಂ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ರೆಡ್ಡಿಗೆ 2012ರ ಮೇ11 ರಂದು ಜಡ್ಜ್ ಪಟ್ಟಾಭಿರಾಮರಾವ್ ಅವರು ಜಾಮೀನು ನೀಡಿದ್ದರು. ಆದರೆ, ಈ ಜಾಮೀನಿನ ಹಿಂದೆ ಜಡ್ಜ್ ಹಾಗೂ ಗಾಲಿ ರೆಡ್ಡಿ ನಡುವೆ ಡೀಲ್ ನಡೆದಿದೆ ಎಂಬುದನ್ನು ಸಿಬಿಐ ಸಾಕ್ಷಿ ಸಮೇತ ಬಹಿರಂಗಪಡಿಸಿತ್ತು. ಆಗ ಪಟ್ಟಾಭಿರಾಮರಾವ್ ಅವರನ್ನು ಅಮಾನತುಗೊಳಿಸಿ ಬಂಧಿಸಲಾಗಿತ್ತು. [ಬೇಲ್ ಗಾಗಿ ಡೀಲ್ : 3ನೇ ಜಡ್ಜ್ ಅಮಾನತು]
ನಂತರ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಮಧ್ಯವರ್ತಿಯಾಗಿರುವ ಆರೋಪಿಯಾಗಿರುವ ಶ್ರೀಕಾಕುಲಂ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಡಿ. ಪ್ರಭಾಕರ ರಾವ್ ಅವರನ್ನು ಹೈಕೋರ್ಟ್ ಅಮಾನತುಗೊಳಿಸಿತ್ತು. ನಂತರ ಸಿಟಿ ಸಿವಿಲ್ ತ್ವರಿತಗತಿ ಕೋರ್ಟ್ ನ್ಯಾ. ಲಕ್ಷ್ಮಿನರಸಿಂಹರಾವ್ ಅವರನ್ನು ಅಮಾನತುಗೊಳಿಸಿ ಆಂಧ್ರಪ್ರದೇಶ ಹೈಕೋರ್ಟ್ ಆದೇಶ ಹೊರಡಿಸಿತ್ತು. [ಬೆಂಗಳೂರು ಮನೆ ಕಳೆದುಕೊಂಡ ರೆಡ್ಡಿ]
ಇನ್ನೊಂದೇ ಪ್ರಕರಣ ಬಾಕಿ : ಆದರೆ, ಬಿಡುಗಡೆಗಾಗಿ ಜನಾರ್ದನ ರೆಡ್ಡಿ ಇನ್ನೂ ಕಾಯಬೇಕಾಗಿದೆ. ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿಯೂ ಜಾಮೀನು ಸಿಕ್ಕರೆ ಜನಾರ್ದನ ರೆಡ್ಡಿ ಜೈಲಿನಿಂದ ಹೊರಬರಲು ಸಾಧ್ಯವಿದೆ. [ರೆಡ್ಡಿ 650 ಕೋಟಿ ಆಸ್ತಿಗೆ ಕಂಟಕ]