ಮುಸ್ಲಿಂ ಯುವತಿಯೊಂದಿಗೆ ಮದುವೆ: ಪತಿಯನ್ನು ಹೊಡೆದು ಕೊಂದ ಸಂಬಂಧಿಕರು

ಹೈದರಾಬಾದ್ ಮೇ 6: ಹೈದರಾಬಾದ್‌ನಲ್ಲಿ ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾದ ನಂತರ ಕೊಲೆಯಾಗಿದ್ದಾನೆ. 25 ವರ್ಷದ ಕಾರು ಮಾರಾಟಗಾರ ಬಿ ನಾಗರಾಜು ಎಂಬಾತನನ್ನು ಆತನ ಮುಸ್ಲಿಂ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ ಅವರ ಸಹೋದರ ಮತ್ತು ಸಂಬಂಧಿಕರು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇವರಿಬ್ಬರು ಬಾಲ್ಯದ ಸ್ನೇಹಿತರಾಗಿದ್ದು ಮೂರು ತಿಂಗಳ ಹಿಂದೆ ತನ್ನ ಕುಟುಂಬವನ್ನು ವಿರೋಧಿಸಿ ಮದುವೆಯಾಗಿದ್ದರು. ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂದಿಸಲಾಗಿದೆ.

ಈ ಭೀಕರ ಹತ್ಯೆ ಹೈದರಾಬಾದ್‌ನ ಸರೂರ್‌ನಗರ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಬುಧವಾರ ರಾತ್ರಿ 8.45ರ ಸುಮಾರಿಗೆ ದಂಪತಿ ಬೈಕ್‌ನಲ್ಲಿ ಮನೆಯಿಂದ ಹೊರಟಾಗ ಇಬ್ಬರು ವ್ಯಕ್ತಿಗಳು ನಾಗರಾಜು ಅವರನ್ನು ಎಳೆದೊಯ್ದು ಕಬ್ಬಿಣದ ರಾಡ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ದೃಶ್ಯ ನೆರೆದ ಜನಸಮೂಹದ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಯಾರೂ ದಾಳಿಯನ್ನು ತಡೆಯಲು ಪ್ರಯತ್ನಿಸಲಿಲ್ಲ. ಅನೇಕರು ತಮ್ಮ ಮೊಬೈಲ್ ಫೋನ್‌ಗಳನ್ನು ಹೊರತೆಗೆದು ಅಪರಾಧವನ್ನು ರೆಕಾರ್ಡ್ ಮಾಡಿದ್ದಾರೆ.

ಕ್ಯಾಮರಾದಲ್ಲಿ ನಾಗರಾಜು ಶೀಘ್ರದಲ್ಲೇ ನಿರ್ಜೀವವಾಗುವಂತೆ ಕಾಣಿಸಿಕೊಂಡರು. ಅವರ ತಲೆ ರಕ್ತಸಿಕ್ತವಾಗಿರುವುದು ಕಂಡು ಬಂದಿದೆ. ಅವರ ಹೆಂಡತಿ ಸಹಾಯಕ್ಕಾಗಿ ಕಿರುಚುತ್ತಿರುವುದು ಕೇಳಿಸಿದೆ. ಒಂದು ವಿಡಿಯೋದಲ್ಲಿ ನಾಗರಾಜು ಪತ್ನಿ ಅಶ್ರಿನ್ ಸುಲ್ತಾನಾ ಅವರು ನಾಗರಾಜು ಅವರ ಮೇಲೆ ದಾಳಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ದಾಳಿಕೋರರು ಮುನ್ನುಗ್ಗುತ್ತಿರುವುದು ಕಂಡುಬಂದಿದೆ. ಆಕೆ ದಾಳಿಕೋರನನ್ನು ತನ್ನ ಸಹೋದರ ಎಂದು ಗುರುತಿಸಿದ್ದಾಳೆ. ಕೆಲವೇ ಸೆಕೆಂಡ್‌ಗಳಲ್ಲಿ ಟ್ರಾಫಿಕ್ ಮತ್ತು ಜನರಿಂದ ಗಿಜಿಗುಡುತ್ತಿದ್ದ ರಸ್ತೆಯಲ್ಲಿ ನಾಗರಾಜು ಸಾವನ್ನಪ್ಪಿದ್ದಾನೆ ಆದರೆ ಯಾರೂ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ.

Inter-caste Marriage: Hindu Man In Hyderabad Killed After Marrying Muslim

"ಅವರು ನಡುರಸ್ತೆಯಲ್ಲಿ ನನ್ನ ಪತಿಯನ್ನು ಕೊಂದರು. ಐದು ಜನರು ನನ್ನ ಪತಿಯ ಹಲ್ಲೆ ನಡೆಸಿದರು. ಅವರು ನನ್ನ ಸಹೋದರ ಮತ್ತು ಇತರರಾಗಿದ್ದರು. ನಮಗೆ ಸಹಾಯ ಮಾಡಲು ಯಾರೂ ಇರಲಿಲ್ಲ. ನಾನು ಎಲ್ಲರನ್ನೂ ಬೇಡಿಕೊಂಡೆ. ಅವರು ನನ್ನ ಕಣ್ಣೆದುರೇ ನನ್ನ ಪತಿಯನ್ನು ಕೊಂದರು" ಎಂದು ಸುಲ್ತಾನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಏನೂ ಮಾಡಲು ಸಾಧ್ಯವಾಗದಿದ್ದರೆ ಜನರು ಏಕೆ ಬಂದರು? ಅವರು ಯಾಕೆ ನೋಡುತ್ತಾ ನಿಂತಿದ್ದರು? ಹತ್ತಾರು ಜನರ ಕಣ್ಣ ಮುಂದೆ ಕೊಲೆ ಸಂಭವಿಸಿದೆ. ಯಾರೇ ಕೊಲ್ಲಲ್ಪಟ್ಟರು, ಜನರು ಸಹಾಯಕ್ಕೆ ಬರುವುದಿಲ್ಲವೇ? ನಾನು ಅವನನ್ನು ಉಳಿಸಲು ಅವನ ಮೇಲೆ ಬಿದ್ದಿದ್ದೇನೆ. ಆದರೆ ಅವರು ನನ್ನನ್ನು ತಳ್ಳಿದರು. ಅವರು ಕಬ್ಬಿಣದ ರಾಡ್‌ಗಳಿಂದ ಹೊಡೆದು ಆತನ ತಲೆಯನ್ನು ಹೊಡೆದಿದ್ದಾರೆ" ಎಂದು ಅಶ್ರಿನ್ ಸುದ್ದಿಗಾರರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಘಟನೆ ಬಳಿಕ ಕ್ಯಾಮರಾದಲ್ಲಿ ಕಂಡ ಹಂತಕರನ್ನು ಬಂಧಿಸಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ.

ನಾಗರಾಜು ಮತ್ತು ಸುಲ್ತಾನಾ ಅವರು ಜನವರಿ 31 ರಂದು ಆರ್ಯ ಸಮಾಜದ ಪದ್ಧತಿಯಂತೆ ವಿವಾಹವನ್ನು ಮಾಡಿಕೊಂಡಿದ್ದಾರೆ. ಅವರು 10 ನೇ ತರಗತಿಯಿಂದಲೂ ಪರಸ್ಪರ ತಿಳಿದಿದ್ದರು. 11 ವರ್ಷಗಳಿಂದ ನಾಗರಾಜು ಪರಿಚಯಸ್ಥರು. ಆದರೆ ಅವರು ಮದುವೆಯಾಗುವುದನ್ನು ಆಕೆಯ ಮನೆಯವರು ವಿರೋಧಿಸಿದ್ದರು. ಹೀಗಾಗಿ ಈ ಹಿಂದೆ ನಾಗರಾಜು ಅವರಿಂದ ದೂರವಿರಲು ಯತ್ನಿಸಿದ್ದೆ ಎಂದು ಸುಲ್ತಾನಾ ಹೇಳಿದ್ದಾರೆ. "ನಾನು ನಿನ್ನನ್ನು ಮದುವೆಯಾಗದಿದ್ದರೆ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ನಾನು ಅವನಿಗೆ ಹೇಳಿದೆ. ನಾನು ಅವನೊಂದಿಗೆ ಜೀವನ, ಅವನೊಂದಿಗೆ ಸಾಯಲು ಸಿದ್ದಳಿದ್ದೇನೆ'' ಎಂದು ಅಳುತ್ತಾ ಸುದ್ದಿಗಾರರೊಂದಿಗೆ ಅಶ್ರಿನ್ ನೋವು ಹಂಚಿಕೊಂಡಿದ್ದಾರೆ.

Inter-caste Marriage: Hindu Man In Hyderabad Killed After Marrying Muslim

ಮದುವೆಯ ನಂತರ ಸುಲ್ತಾನಾ ತನ್ನ ಹೆಸರನ್ನು ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಳು. ಆಕೆಯ ಮನೆಯವರು ನಾಗರಾಜುಗೆ ಬೆದರಿಕೆ ಹಾಕಿದ್ದರು ಮತ್ತು ಆಕೆಯಿಂದ ದೂರವಿರುವಂತೆ ಹೇಳಿದ್ದರು. "ಆಕೆಯ ಕುಟುಂಬದಿಂದ ಜೀವ ಬೆದರಿಕೆಯ ಕುರಿತು ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರ ನಿರ್ಲಕ್ಷ್ಯದಿಂದ ಇಂದು ನಾನು ನನ್ನ ಸಹೋದರನನ್ನು ಕಳೆದುಕೊಂಡಿದ್ದೇನೆ. ಅವನೇ ಕುಟುಂಬದ ಏಕೈಕ ದುಡಿಮೆದಾರ" ಎಂದು ನಾಗರಾಜು ಅವರ ಸಹೋದರಿ ರಮಾದೇವಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. "ಇಬ್ಬರು ವ್ಯಕ್ತಿಗಳಿಂದ ಹತ್ಯೆಗೀಡಾಗಿದ್ದು, ಮೃತರು ಪತ್ನಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇತ್ತೀಚೆಗಷ್ಟೇ ವಿವಾಹವಾಗಿದ್ದು, ಇಬ್ಬರೂ ಬೇರೆ ಬೇರೆ ಸಮುದಾಯದವರಾಗಿದ್ದು, ಇಂದು ಮೃತನ ಪತ್ನಿಯ ಸಹೋದರರು ನಾಗರಾಜು ಮೇಲೆ ಹಲ್ಲೆ ನಡೆಸಿ ನಂತರ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಶ್ರೀಧರ್ ರೆಡ್ಡಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+