ಪತ್ನಿಯ ಹತ್ಯೆ ಮಾಡಿದ್ದ ಟೆಕ್ಕಿ- ತಂದೆ ತಾಯಿ ಅರೆಸ್ಟ್

ನಗರದ ಚಿಕ್ಕಡಪಲ್ಲಿಯಲ್ಲಿರುವ ಬೃಂದಾವನ್ ಕಾಲನಿಯ ಶಾಂತಿ ನಿಲಯ ಅಪಾರ್ಟ್ ಮೆಂಟ್ ನಿವಾಸಿ ಬಾಲಕೃಷ್ಣ ಪ್ರತಿಷ್ಠಿತ ಬಂಜಾರಾ ಹಿಲ್ಸ್ ನಲ್ಲಿರುವ Karvy Consultancyಯಲ್ಲಿ ಟೆಕ್ಕಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಬಾಲಕೃಷ್ಣ ತನ್ನ ಪತ್ನಿ 35 ವರ್ಷದ ರಜನಿಯನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಪ್ರಕರಣದ ಸಂಬಂಧ ಟೆಕ್ಕಿ ಬಾಲಕೃಷ್ಣ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ದಿಕ್ಕು ತಪ್ಪಿಸಲು ಮಾಟ-ಮಂತ್ರದ ಹೆಸರಿನಲ್ಲಿ ರಜನಿಯನ್ನು ಸಾಯಿಸಲಾಗಿದೆ ಎಂದು ಬಿಂಬಿಸುವಂತೆ ಆಕೆಯ ಶವದ ಪಕ್ಕದಲ್ಲಿ ಹರಿಶಿನ-ಕುಂಕುಮ ಚೆಲ್ಲಲಾಗಿತ್ತು. ಆದರೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ರಜನಿ ಪತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಟೆಕ್ಕಿ ಬಾಲಕೃಷ್ಣ ಪ್ರೇಮ ಪ್ರಸಂಗ ಬಯಲಿಗೆ ಬಂದಿದೆ.
'ಸಹೋದ್ಯೋಗಿಯ ಜತೆ ನನಗೆ ಅಕ್ರಮ ಸಂಬಂಧವಿತ್ತು. ಅದು ಪತ್ನಿ ರಜನಿಗೆ ಗೊತ್ತಾಯಿತು. ಅವಳಿಂದ ದೂರವಾಗಿವಂತೆ ರಜನಿ ನನಗೆ ಬುದ್ಧಿವಾದ ಹೇಳತೊಡಗಿದಳು. ಆಗ ಮನೆಯವರೊಂದಿಗೆ ವ್ಯವಸ್ಥಿವಾಗಿ ಪ್ಲಾನ್ ಮಾಡಿ ಹತ್ಯೆ ಮಾಡಿದೆವು. ರಜನಿ ಹೆಚ್ಚು ವರದಕ್ಷಿಣೆ ತಂದಿರಲಿಲ್ಲವೆಂದು ನನ್ನ ಮನೆಯವರೂ ಅವಳ ಬಗ್ಗೆ ಅಸಮಾಧಾನಗೊಂಡಿದ್ದರು' ಎಂದು ವಿಚಾರಣೆ ವೇಳೆ ಟೆಕ್ಕಿ ಬಾಲಕೃಷ್ಣ ಬಾಯ್ಬಿಟ್ಟಿದ್ದಾನೆ.
'ಪೂರ್ವಯೋಜನೆಯಂತೆ ಶುಕ್ರವಾರ ರಾತ್ರಿಯೇ ರಜನಿ ಹತ್ಯೆಗೆ ಮಹೂರ್ತವಿಡಲಾಗಿತ್ತು. ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಅವಳಿಗೆ ನೀಡಲಾಗಿತ್ತು. ಅವಳು ಪ್ರಜ್ಞೆ ತಪ್ಪುತ್ತಿದ್ದಂತೆ ಪತಿರಾಯ ಟೆಕ್ಕಿ ಬಾಲಕೃಷ್ಣನೇ ತನ್ನ ಪತ್ನಿಯನ್ನು ಕತ್ತು ಸೀಳಿ, ಬೆನ್ನು-ಹೊಟ್ಟೆಗೆ ತಿವಿದು ಸಾಯಿಸಿದ್ದಾನೆ. ಇದಕ್ಕೆ ಮನೆಯವರೂ ಸಹಕಾರ ನೀಡಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಲು ಮಾಟ-ಮಂತ್ರ ಪ್ರಯೋಗ ಮಾಡಿದ್ದಾರೆ' ಎಂದು ಚಿಕ್ಕಡಪಲ್ಲಿ ಇನ್ಸ್ ಪೆಕ್ಟರ್ ಪಿ ಶ್ರೀಧರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications