ಹೈದರಾಬಾದಿನ ಜನನಿ ರಾವ್ ಎಂಬ ಸ್ವಿಗ್ಗಿ ಡೆಲಿವರಿ ಗರ್ಲ್ ಮನದ ಮಾತು
ಹೈದರಾಬಾದ್, ಅಕ್ಟೋಬರ್ 19: ಸ್ವಿಗ್ಗಿ ಡೆಲಿವರಿ ಕೆಲಸ ಮಾಡುವುದೆಲ್ಲ ಮಹಿಳೆಯರಿಗೆ ಹೇಳಿಮಾಡಿಸಿದ್ದಲ್ಲ ಎಂಬ ಪೂರ್ವಗ್ರಹದಲ್ಲಿದ್ದವರಿಗೆ ಹೈದರಾಬಾದಿನ ಈ ಹುಡುಗಿ ಉತ್ತರ ನೀಡಿದ್ದಾಳೆ.
ಜನನಿ ರಾವ್ ಎಂಬ 20 ರ ಹುಡುಗಿ ತನ್ನ ಸ್ಕೂಟರ್ ನಲ್ಲಿ ಹೈದರಾಬಾದಿನ ಬೀದಿ ಬೀದಿ ಅಲೆಯುತ್ತಾಳೆ. ಹಸಿದವರಿಗೆ ಅನ್ನ ನೀಡುತ್ತಾಳೆ.
"ನಾನು ಈ ಕೆಲಸಕ್ಕೆ ಸೇರಿ ಎರಡೂವರೆ ತಿಂಗಳಾಯ್ತು. ಈ ಕೆಲಸದಲ್ಲಿ ನನಗೆ ಸಂಭ್ರಮವಿದೆ. ಇದೊಂದು ಇಂಟರೆಸ್ಟಿಂಗ್ ಕೆಲಸ. ನಾನು ಪ್ರತಿದಿನ ಎಷ್ಟೊಂದು ಜನರನ್ನು ಭೇಟಿ ಮಾಡುತ್ತೇನೆ. ಇದೊಂದು ವಿಭಿನ್ನ ಅನುಭವ" ಎನ್ನುತ್ತಾರೆ ಜನನಿ ರಾವ್.

"ನನ್ನ ಪ್ರಕಾರ ಯಾವ ಕೆಲಸವೂ ಸಣ್ಣದಲ್ಲ, ಯಾವುದೂ ದೊಡ್ದದಲ್ಲ. ಈ ಕೆಲಸಕ್ಕೆ ಗ್ರಾಹಕರ ಪ್ರತಿಕ್ರಿಯೆಯನ್ನು ನೋದಿದಾಗ ಬಹಳ ಖುಶಃಇಯಾಗುತ್ತದೆ. ಇಂಥ ಕೆಲಸದಲ್ಲಿ ಪ್ರತಿದಿನವೂ ನೂರಾರು ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾಗಬಹುದು. ಇದು ಬದುಕಿನಲ್ಲಿ ಉತ್ತಮ ಅನುಭವ ನೀಡುತ್ತದೆ" ಎಂದು ಜನನಿ ರಾವ್ ಹೇಳುತ್ತಾರೆ.
"ಕೆಲಸವೆಂದರೆ ಹೆಚ್ಚಿನ ಸಂಬಳ ನೀಡುವುದು, ಅಥವಾ ಎಸಿ ರೂಮಿನಲ್ಲಿ ಕುಳಿತು ಮಾಡುವುದಷ್ಟೇ ಅಲ್ಲ. ನಾವು ಮಾಡುವ ಕೆಲಸ ನಮಗೆ ಖುಷಿ ಕೊಡಬೇಕು. ಇಲ್ಲವೆಂದರೆ ಎಷ್ಟು ಸಂಬಳ ಬಂದರೂ ಪ್ರಯೋಜನವಿಲ್ಲ. ನಾವು ನಮ್ಮ ಕೆಲಸವನ್ನು ಹೆಚ್ಚು ಸಂಭ್ರಮಿಸಿದಷ್ಟೂ ಅದು ಇಷ್ಟವಾಗುತ್ತದೆ" ಎನ್ನುತ್ತಾರೆ ಜನನಿ ರಾವ್.
"ಈ ಕೆಲಸ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತಿದೆ. ಆದರೆ ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಹೈದರಾಬಾದ್ ತೆಲಂಗಾಣದ ರಾಜ್ಯದ ಅತ್ಯಂತ ಸಯರಕ್ಷಿತ ನಗರಗಳಲ್ಲೊಂದು. ಆದ್ದರಿಂದ ಭಯಪಡುವ ಅಗತ್ಯವೇ ಇಲ್ಲ. ನನಗೆ ಎಂದಿಗೂ ಅಭದ್ರತೆಯ ಭಯ ಕಾಡಲಿಲ್ಲ" ಎನ್ನುತ್ತಾರೆ ಅವರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications