ಎಲ್ಲಾ ಮಸೀದಿಗಳಿಗೆ 'ಅಲ್ಲಾ' ಮಾಲೀಕ: ಹೈದರಾಬಾದ್ ಎಂಪಿ ಓವೈಸಿ
ಎಲ್ಲಾ ಮಸೀದಿಗಳಿಗೆ ಅಲ್ಲಾನೇ ಮಾಲೀಕ ಎಂದ ಹೈದರಾಬಾದ್ ಸಂಸದ ಅಸಾವುದ್ದೀನ್ ಓವೈಸಿ. ರಾಮಜನ್ಮಭೂಮಿ ಹತ್ತಿರದಲ್ಲೇ ಶಿಯಾ ಮಸೀದಿ ಕಟ್ಟಲು ಶಿಯಾ ಪಂಗಡ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಕ್ಕೆ ಆಕ್ಷೇಪ.
ಹೈದರಾಬಾದ್, ಆಗಸ್ಟ್ 14: ಉತ್ತರ ಪ್ರದೇಶದ ವಿವಾದಿತ ಸ್ಥಳವಾದ ರಾಮಜನ್ಮಭೂಮಿಗೆ ಸನಿಹದಲ್ಲೇ ಇರುವ ಅತಿ ಹೆಚ್ಚು ಮುಸ್ಲಿಮರು ವಾಸಿಸುವ ಪ್ರದೇಶದಲ್ಲಿ ಶಿಯಾ ಪಂಗಡಕ್ಕೆ ಸೇರಿದ ಮಸೀದಿಯೊಂದನ್ನು ನಿರ್ಮಿಸುವ ಬಗ್ಗೆ ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿರುವ ಕುರಿತಂತೆ ಹೈದರಾಬಾದ್ ನ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೇಹದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.
ಇತ್ತೀಚೆಗೆ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದ ವಕ್ಫ್ ಮಂಡಳಿಯು, ರಾಮಜನ್ಮಭೂಮಿಯ ವಿವಾದಿದ ಭೂಮಿಯಲ್ಲಿ ಈ ಹಿಂದಿದ್ದ ಬಾಬ್ರಿ ಮಸೀದಿಯು ಶಿಯಾ ಪಂಗಕ್ಕೆ ಸೇರಿದ ಮಸೀದಿಯಾಗಿತ್ತು. ಇದೀಗ, ಅದರ ನಾಶವಾಗಿರುವುದರಿಂದ ಶಿಯಾ ಪಂಗಡದ ಜನರ ಪ್ರಾರ್ಥನೆಗಾಗಿ ಪ್ರತ್ಯೇಕ ಮಸೀದಿಯೊಂದನ್ನು ಕಟ್ಟಿಕೊಳ್ಳಲು ತನಗೆ ಅನುಮತಿ ನೀಡಬೇಕೆಂದು ಅದು ಕೋರಿತ್ತು.

ಇದರ ವಿರುದ್ಧ ಕಿಡ ಕಾರಿರುವ ಓವೈಸಿ, ''ಮಸೀದಿಗಳಿಗೆ ಯಾರೂ ಒಡೆಯರಲ್ಲ. ಹಾಗಾಗಿ, ಮಸೀದಿ ನಮ್ಮದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಎಲ್ಲಾ ಮಸೀದಿಗಳಿಗೂ ಅಲ್ಲಾ (ದೇವರು) ಒಡೆಯ. ಮಸೀದಿಗಳನ್ನು ಶಿಯಾ, ಸುನ್ನಿ, ಬರೆಲ್ವಿ, ಸೂಫಿ, ದಿಯೋಬಂದಿ, ಸಲಾಫಿ, ಬೊಹ್ರಿ ಸಮುದಾಯದವರು ನೋಡಿಕೊಳ್ಳುವ ಪದ್ಧತಿಯಿದೆ. ಅವರು ಕೇವಲ ನಿರ್ವಹಣೆ ಮಾಡಬೇಕೇ ಹೊರತು ಮಸೀದಿಗೆ ತಾವೇ ಒಡೆಯರು ಎಂಬಂತೆ ಮಾತನಾಡಬಾರದು'' ಎಂದು ಹೇಳಿದ್ದಾರೆ.
Masjids can be managed by Shia,Sunni,Barelvi,Sufi,Deobandi,Salafi,Bohri but they are not owners ALLAH is the owner even AIMPLB cannot give
— Asaduddin Owaisi (@asadowaisi) August 13, 2017
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications