ವಿಡಿಯೋ; ವಿಶಿಷ್ಟವಾಗಿ ತಾಯಂದಿರ ದಿನ ಆಚರಿಸಿದ ಮಕ್ಕಳು
ಹುಬ್ಬಳ್ಳಿ, ಮೇ 08; ಅವರು ಹೆತ್ತ ಮಕ್ಕಳು ದೂರ ಮಾಡಿದ ನತದೃಷ್ಟ ತಾಯಂದಿರು. ಯಾರು ನಮ್ಮನ್ನು ನೋಡುವವರಿಲ್ಲ ಎಂದು ಆಶ್ರಮದಲ್ಲಿ ಬದುಕು ನಡೆಸುತ್ತಿರುವವರು. ಆದರೆ ತಾಯಂದಿರ ದಿನ ಅವರ ಕೊರಗು ದೂರ ಮಾಡಲು ಕೆಲವು ಯುವಕರು ಪಣತೊಟ್ಟರು. ಈ ಮೂಲಕ ತಾಯಂದಿರ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದರು.
ಭಾನುವಾರ ತಾಯಂದಿರ ದಿನ. ಮಕ್ಕಳು ದೂರ ಮಾಡಿದ ತಾಯಿಂದರ ಪಾದ ಪೂಜೆ ಮಾಡಿದ ಯುವ ಪಡೆ ಅವರನ್ನು ಗೌರವಿಸಿತು. ಯುವಕರ ಕಾರ್ಯವನ್ನು ಮೆಚ್ಚಿದ ತಾಯಂದಿರು ಮನತುಂಬಿ ಆಶೀರ್ವಾದ ಮಾಡಿದರು.
ಅವರು ಮಕ್ಕಳಿದ್ದು, ಬೇಡವಾದವರು. ಅವರಿಗೆ ಅನಾಥರು ಎಂಬ ಭಾವನೆ ಬಾರದೇ ಇರಲಿ ಎಂಬ ಕಾರಣಕ್ಕೆ ಹುಬ್ಬಳ್ಳಿಯ ಮಂಜುನಾಥ ಹೆಬಸೂರು ಗೆಳೆಯರ ಬಳಗದಿಂದ ಅರ್ಥಪೂರ್ಣವಾಗಿ ವಿಶ್ವ ತಾಯಂದಿರ ದಿನ ಆಚರಿಸಲಾಯಿತು.

ನವನಗರದ ಮೈತ್ರಿ ಆಶ್ರಮದಲ್ಲಿ ಯುವಕರು ವಿಶ್ವ ತಾಯಂದಿರ ದಿನಾಚರಣೆ ಹಿನ್ನಲೆಯಲ್ಲಿ ತಾಯಂದಿರ ಪಾದ ತೊಳೆದು ಅರಿಶಿನ, ಕುಂಕುಮ ಹಚ್ಚಿ ಆರತಿ ಬೆಳಗಿದರು. ನಂತರ ಆಶೀರ್ವಾದ ಪಡೆದು ಸಿಹಿ ತಿನ್ನಿಸಿದರು.
ಯುವಕರು ಪಾದಪೂಜೆ ಮಾಡಿದ ಬಳಿಕ ತಾಯಂದಿರ ಮುಖದಲ್ಲಿ ಸಂತೋಷ ಮನೆ ಮಾಡಿತು. ತಾಯಂದಿರು ಯುವಕರ ಕಾರ್ಯವನ್ನು ಮೆಚ್ಚಿ ಮನಸಾರೆ ಆಶೀರ್ವಾದ ಮಾಡಿದರು. ತಮ್ಮ ಮಕ್ಕಳು ಕೂಡ ಮಾಡದ ಕಾರ್ಯವನ್ನು ಮಂಜುನಾಥ ಗೆಳೆಯರ ಬಳಗ ಮಾಡಿದ್ದು, ಅವರಲ್ಲಿ ಸಂತಸ ಮೂಡುವಂತೆ ಮಾಡಿತು.
ಶಂಕರಗೌಡ , ಮಹಾಂತೇಶ , ಹರೀಶ್, ಗುರು ಹಿರೇಮಠ, ಹರೀಶ ಹಿರೇಮಠ, ವಿಜಯ ಸೇರಿದಂತೆ ಇನ್ನೂ ಅನೇಕ ಯುವಕರು ಈ ಕಾರ್ಯದ ಮೂಲಕ ವಿಶೇಷವಾಗಿ ತಾಯಂದಿರ ದಿನವನ್ನು ಆಚರಣೆ ಮಾಡಿದರು.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications