ಬಿಎಸ್ವೈ ಸಿಎಂ ಮಾಡುವೆ : ಕೆ.ಎಸ್.ಈಶ್ವರಪ್ಪ ಯೂ ಟರ್ನ್
ಹುಬ್ಬಳ್ಳಿ, ಆಗಸ್ಟ್ 20 : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ವಿಚಾರದಲ್ಲಿ ಭಾರೀ ಸುದ್ದಿಯಲ್ಲಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಯೂ ಟರ್ನ್ ತೆಗೆದುಕೊಂಡಿದ್ದಾರೆ. 'ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಸಿಎಂ ಮಾಡಿಯೇ ತೀರುತ್ತೇನೆ' ಎಂದು ಹೇಳಿದರು.
ಶನಿವಾರ
ಹುಬ್ಬಳ್ಳಿಯಲ್ಲಿ
ಮಾತನಾಡಿದ
ಅವರು,
'ಯಡಿಯೂರಪ್ಪನವರು
ಈ
ಹಿಂದೆ
ಪಕ್ಷ
ಬಿಟ್ಟು
ಹೋಗಿದ್ದರು,
ತಮ್ಮಿಂದ
ತಪ್ಪಾಗಿರುವುದನ್ನು
ಅರಿತುಕೊಂಡು
ಮತ್ತೆ
ಪಕ್ಷಕ್ಕೆ
ಮರಳಿದ್ದಾರೆ.
ಅವರನ್ನು
ಮತ್ತೆ
ಮುಖ್ಯಮಂತ್ರಿಯನ್ನಾಗಿ
ಮಾಡಲು
ಪಕ್ಷವನ್ನು
ರಾಜ್ಯದಲ್ಲಿ
ಮತ್ತೆ
ಅಧಿಕಾರಕ್ಕೆ
ತರುತ್ತೇವೆ'
ಎಂದರು.[ಈಶ್ವರಪ್ಪ
ಕಿವಿ
ಹಿಂಡಲು
ಹೈಕಮಾಂಡಿಗೆ
ದೂರು?]
'ರಾಜ್ಯಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡುವಾಗ ಯಾರ ಜೊತೆಯೂ ಯಡಿಯೂರಪ್ಪನವರು ಚರ್ಚಿಸಿಲ್ಲ ಎಂಬುದು ನಮಗೆ ಸ್ವಲ್ಪ ನೋವಾಗಿತ್ತು. ಆದರೆ, ಈಗ ನಾವು ಅಣ್ಣ-ತಮ್ಮಂದಿರ ಹಾಗೆ ಇದ್ದೇವೆ. ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಜಾತಿ ಸಂಘಟನೆ ಮಾಡುವ ಇರಾದೆ ತಮ್ಮದಲ್ಲ. ನಾನು ಪಕ್ಕಾ ಆರೆಸ್ಸೆಸ್ ಕಾರ್ಯಕರ್ತನಾಗಿದ್ದು ಜೀವನದಲ್ಲಿ ಎಂದೂ ಜಾತಿ ರಾಜಕಾರಣ, ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ' ಎಂದು ಸ್ಪಷ್ಟನೆ ನೀಡಿದರು.[ಸೆ.26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ]
'ಯಡಿಯೂರಪ್ಪ ಅವರಿಂದಲೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಉದ್ಘಾಟನೆ ಮಾಡಿಸುತ್ತೇನೆ. ಅಹಿಂದ ನಾಯಕರ ಸಭೆಯನ್ನು ನಾನಾಗಿಯೇ ನಡೆಸಿಲ್ಲ. ಸಿದ್ದರಾಮಯ್ಯನವರಿಂದ ಅನ್ಯಾಯಕ್ಕೊಳಗಾದವರು ತಮ್ಮ ಸಭೆಗೆ ನನ್ನನ್ನು ಕರೆದಿದ್ದರು. ಹೀಗಾಗಿ ಹೋಗಿದ್ದೆ. ಕಾಂಗ್ರೆಸ್ಸಿನ ಹಿಂದುಳಿದ ವರ್ಗದ ಧುರೀಣರು ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದಾರೆ' ಎಂದು ಹೇಳಿದರು.