ಕಾಂಗ್ರೆಸ್ನವರು ಅಧಿವೇಶನದಲ್ಲಿ ಮಹದಾಯಿ ಬಗ್ಗೆ ಯಾಕೆ ಮತನಾಡಲಿಲ್ಲ?: ಜಗದೀಶ್ ಶೆಟ್ಟರ್ ಪ್ರಶ್ನೆ
ಹುಬ್ಬಳ್ಳಿ, ಜನವರಿ, 04: ಕಾಂಗ್ರೆಸ್ಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಚುನಾವಣೆಗಾಗಿ ಈ ಹೋರಾಟವನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಧಿವೇಶನದಲ್ಲಿ ಮಹದಾಯಿ ಬಗ್ಗೆ ಒಂದು ಶಬ್ಧವನ್ನೂ ಮಾತನಾಡಿಲ್ಲ. ಎಲ್ಲಿ ಮಾತನಾಡಬೇಕು ಅಲ್ಲಿ ಮಾತಾಡೋದು ಬಿಟ್ಟು, ಇಲ್ಲಿ ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಧಿನಾಯಕಿ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲಾ ಅಂದಿದ್ದರು. ಸೋನಿಯಾ ಗಾಂಧಿ ಮಾತು ಮೀರಿ ಹೋರಾಡುತ್ತಿದ್ದೀರಾ? ಇವರು ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಒಮ್ಮೆಯೂ ಹೋರಾಡಿಲ್ಲ. ಮಹದಾಯಿ ಹೋರಾಟಗಾರರು, ರೈತರ ಮೇಲೆ ಲಾಠಿಚಾರ್ಜ್ ಮಾಡಿಸಿದ್ದರು. ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆ ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅಂದಿದ್ದಾರೆ. ಯಾರು ಇಲರೆಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್
ವಿರುದ್ಧ
ಜಗದೀಶ್
ಶೆಟ್ಟರ್
ವಾಗ್ದಾಳಿ
ಕಾಂಗ್ರೆಸ್ನವರು
ಸುಳ್ಳುಗಾರರು,
ಇವರನ್ನು
ಜನರು
ನಂಬುವುದಿಲ್ಲ.
ನ್ಯಾಯಾಧಿಕರಣದಲ್ಲಿ
ನಮ್ಮ
ಪರ
ಆದೇಶ
ಬಂದಿದ್ದು,
ಯೋಜನೆ
ಜಾರಿ
ಮಾಡುತ್ತೇವೆ.
ಗೋವಾದವರು
ಏನು
ಖ್ಯಾತೆ
ಮಾಡಿದರೂ
ಪ್ರಯೋಜನವಿಲ್ಲ.
ವಿಪಕ್ಷಗಳು
ರಚನಾತ್ಮಕ
ಸಲಹೆ,
ಸಹಕಾರ
ಕೊಡಲಿ.
ಡಿ.ಕೆ.
ಶಿವಕುಮಾರ್,
ಸಿದ್ದರಾಮಯ್ಯ
ನಾಟಕವನ್ನು
ಜನರು
ನಂಬಲ್ಲ
ಎಂದು
ವಾಗ್ದಾಳಿ
ನಡೆಸಿದರು.
ಲವ್
ಜಿಹಾದ್
ಕೂಡ
ಗಂಭೀರ
ಸಮಸ್ಯೆ
ಆಗಿದೆ
ರಸ್ತೆ
ಅಭಿವೃದ್ಧಿ
ಬಿಡಿ,
ಲವ್
ಜಿಹಾದ್
ಬಗ್ಗೆ
ಗಮನ
ಕೊಡಿ
ಎನ್ನುವ
ನಳಿನ್
ಕುಮಾರ್
ಕಟೀಲ್
ಹೇಳಿಕೆ
ಹಿನ್ನೆಲೆ
ಪ್ರತಿಕ್ರಿಯೆ
ನೀಡಿದ
ಅವರು,
ನಳಿನ್
ಕುಮಾರ್
ಕಟೀಲ್
ಹೇಳಿರುವ
ಉದ್ದೇಶವೇ
ಬೇರೆ.
ಅವರು
ಆ
ಅರ್ಥದಲ್ಲಿ
ಹೇಳಲಿಕ್ಕೆ
ಸಾಧ್ಯವೇ
ಇಲ್ಲ.
ರಾಜ್ಯದಲ್ಲಿ
ಅಭಿವೃದ್ಧಿ
ಕೆಲಸಗಳು
ತಾನಾಗಿಯೇ
ನಡೆಯುತ್ತಿರುತ್ತವೆ.
ಹೀಗಾಗಿ
ಅದರ
ಬಗ್ಗೆ
ಹೆಚ್ಚು
ತಲೆ
ಕೆಡಿಸಿಕೊಳ್ಳುವ
ಅಗತ್ಯವಿಲ್ಲ.
ಲವ್
ಜಿಹಾದ್
ಕೂಡ
ಗಂಭೀರ
ಸಮಸ್ಯೆ
ಆಗಿದೆ.
ಹಿಂದೂ
ಹೆಣ್ಣು
ಮಕ್ಕಳನ್ನು
ಬ್ರೈನ್
ವಾಶ್
ಮಾಡಿ
ಕರೆದುಕೊಂಡು
ಹೋಗುತ್ತಿದ್ದಾರೆ.
ಲವ್
ಜಿಹಾದ್
ಹೆಸರಿನಲ್ಲಿ
ಹಿಂದೂ
ಯುವತಿಯರನ್ನು
ವಂಚಿಸಲಾಗುತ್ತಿದೆ.
ಲವ್
ಜಿಹಾದ್ನಿಂದ
ಎಷ್ಟೋ
ಹೆಣ್ಣು
ಮಕ್ಕಳ
ಜೀವನ
ಹಾಳಾಗಿದೆ.
ಇದೊಂದು
ಜ್ವಲಂತ
ಗಂಭೀರ
ಸಮಸ್ಯೆ
ಎನ್ನುವ
ಅರ್ಥದಲ್ಲಿ
ಹೇಳಿದ್ದಾರೆ.
ಅಭಿವೃದ್ಧಿ
ಬೇಡ
ಎಂದು
ಯಾರೂ
ಕೂಡ
ಹೇಳಲಿಕ್ಕೆ
ಸಾಧ್ಯವಿಲ್ಲ
ಎಂದರು.