ಮಹದಾಯಿ ಹೋರಾಟ, ಹುಬ್ಬಳ್ಳಿಯಲ್ಲಿ 50 ಜನರ ಬಂಧನ
ಹುಬ್ಬಳ್ಳಿ, ಜುಲೈ 29 : ಮಹದಾಯಿ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ 50 ಜನರನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಹೋರಾಟ ಅಕ್ಷರಶಃ ದಂಗೆಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗುರುವಾರ
ಸಂಜೆ
ಹುಬ್ಬಳ್ಳಿಯಲ್ಲಿ
ರೈಲು
ತಡೆಗೆ
ಬಂದ
50
ಜನರನ್ನು
ಪೊಲೀಸರು
ಬಂಧಿಸಿದ್ದಾರೆ.
ಗುರುವಾರ
ಬೆಳಗ್ಗೆಯಿಂದ
ನಡೆಯುತ್ತಿದ್ದ
ಪ್ರತಿಭಟನೆ
ಮಧ್ಯಾಹ್ನದ
ಹೊತ್ತಿಗೆ
ಅರ್ಧ
ಗಂಟೆ
ಸುರಿದ
ಮಳೆಯಿಂದ
ಸ್ವಲ್ಪ
ಹೊತ್ತು
ಬಿಡುವು
ಪಡೆದುಕೊಂಡಿತ್ತು,
ಹೋರಾಟಗಾರರು
ಮಳೆ
ನಿಂತ
ಕೂಡಲೇ
ಮತ್ತೆ
ಪ್ರತಿಭಟನೆ
ನಡೆಸಿದರು.[ಕಳಸಾ
ಹೋರಾಟದ
ಚಿತ್ರಗಳು]
ನವಲಗುಂದದಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದವರು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದರು. ಆದ್ದರಿಂದ, ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನರಗುಂದಲ್ಲಿ ವಿದ್ಯಾರ್ಥಿ ಹೋರಾಟಗಾರರಾದ ನಂದೀಶ ಮಠದ (18), ಸಂಗಮೇಶ (19) ಎಂಬುವವರು ವಿಷ ಸೇವಿಸಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]
ಹಿರಿಯ ಅಧಿಕಾರಿಗಳನ್ನು ಕಳಿಸಲಾಗಿದೆ : ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಗೃಹ ಸಚಿವ ಡಾ.ಜಿ.ಪರಮೇಶ್ವರ ಸೂಚನೆ ನೀಡಿದ್ದಾರೆ. ಆದ್ದರಿಂದ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಉತ್ತರ ಕರ್ನಾಟಕ ಭಾಗದ ವಿವಿಧ ಪ್ರದೇಶಗಳಿಗೆ ಕಳುಹಿಸಲಾಗಿದೆ.
ಹುಬ್ಬಳ್ಳಿಯಲ್ಲಿ
ಇಂದು
ರೈತ
ನಾಯಕರು
ಸಭೆ
ನಡೆಸಲಿದ್ದು,
ತಮ್ಮ
ಮುಂದಿನ
ಹೋರಾಟದ
ಬಗ್ಗೆ
ಚರ್ಚೆ
ನಡೆಸಲಿದ್ದಾರೆ.
ಸೋಮವಾರದಿಂದ
ಮೂರು
ದಿನಗಳ
ಕಾಲ
ಸಾರಿಗೆ
ಸಿಬ್ಬಂದಿಯ
ಮುಷ್ಕರದ
ಬಿಸಿ
ಅನುಭವಿಸಿದ
ಜನರು
ಮತ್ತು
ವಿದ್ಯಾರ್ಥಿಗಳು
ಈಗ
ಮಹದಾಯಿ
ಹೋರಾಟದದಿಂದ
ಮತ್ತಷ್ಟು
ಸಂಕಷ್ಟಕ್ಕೆ
ಸಿಲುಕಿದ್ದಾರೆ.