ಬಿಜೆಪಿ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತ: ಹುಬ್ಬಳ್ಳಿಯಲ್ಲಿ ಎಚ್.ಡಿ.ಕೆ ಆಕ್ರೋಶ
ಹುಬ್ಬಳ್ಳಿ, ಡಿಸೆಂಬರ್, 09: ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಒಬ್ಬರು ಅತ್ತ ಹಾಗೇ ಮಾಡುವುದು, ಮತ್ತೊಬ್ಬರು ಹೊಡೆದ ಹಾಗೇ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಲಕ್ಷ್ಮೇಶ್ವರಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಪಂಚ ರತ್ನಕ್ಕೆ ಹೋದ ಕಡೆಯಲೆಲ್ಲ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಜನವರಿ 3ರಿಂದ ಬೀದರ್ ಭಾಗದಿಂದ ಕಾರ್ಯಕ್ರಮ ಆರಂಭವಾಗತ್ತದೆ ಎಂದರು. ನಾನು ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಭಾಗಿಯಾಗಲ್ಲ. 2023ರ ಫೆಬ್ರವರಿಯಲ್ಲಿ ಬೆಳಗಾವಿ ಭಾಗದಲ್ಲಿ ಪಂಚರತ್ನ ಕಾರ್ಯಕ್ರಮ ಆರಂಭ ಮಾಡಲಾಗುತ್ತದೆ. ಪಂಚರತ್ನ ಯಾತ್ರೆಗೆ ಸಮಯ ನಿಗದಿಯಾಗಿದ್ದು, ಧಿವೇಶನದಲ್ಲಿ ನಾನು ಭಾಗವಹಿಸುತ್ತಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಬಂಡೆಪ್ಪ ಕಾಶಂಪೂರ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ ಎಂದರು.
ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಸಿಎಂ ಬಸವರಾಜ ಬೊಮ್ಮಾಯಿ
ಬಿಜೆಪಿ
ಕೇವಲ
ಘೋಷಣೆಯ
ಪಕ್ಷ
ಬಿಜೆಪಿ
ಸರ್ಕಾರ
ಕೇವಲ
ಘೋಷಣೆಗೆ
ಸೀಮಿತವಾಗಿದೆ.
ಬರಿ
ಸಿಹಿ
ಸುದ್ದಿ,
ಹುಳಿ
ಸುದ್ದಿ
ಅಂತಾರೆ.
ಕೇವಲ
ದೊಡ್ಡ
ಘೋಷಣೆ
ಮಾಡುವುದೇ
ಇವರ
ಕೆಲಸವಾಗಿದೆ
ಎಂದು
ಕುಟುಕಿದರು.
ಇನ್ನು
ಬೆಳಗಾವಿ
ಗಡಿ
ವಿವಾದ
ಕುರಿತು
ಪ್ರತಿಕ್ರಿಯೆ
ನೀಡಿದ
ಅವರು,
ಎರಡು
ರಾಜ್ಯದ
ಬಿಜೆಪಿ
ನಾಯಕರು
ವಿಷಯವನ್ನು
ಡೈವರ್ಟ್
ಮಾಡುತ್ತಿದ್ದಾರೆ.
ಕರ್ನಾಟಕ
ಬಿಜೆಪಿ,
ಮಾಹಾರಾಷ್ಟ್ರ
ಬಿಜೆಪಿ
ನಾಯಕರು
ವಿಷಯವನ್ನು
ಬೇರೆಡೆ
ಡೈವರ್ಟ್
ಮಾಡುತ್ತಿದ್ದಾರೆ.
ಗಡಿ
ವಿವಾದ
ಮುಗಿದು
ಹೋದ
ಅಧ್ಯಾಯ
ಎಂದರು.
ಸಿದ್ದರಾಮಯ್ಯನ ಬಗ್ಗೆ ಮಾತನಾಡಲ್ಲ
ನಾವು ಈ ಬಾರಿ 123 ರಿಂದ 130 ಸೀಟ್ ಗೆಲ್ಲುತ್ತೇವೆ. ರಾಜ್ಯದ ಯಾವ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ. ಸಿದ್ದರಾಮಯ್ಯ ಬಸ್ ಯಾತ್ರೆ ವಿಚಾರವಾಗಿ ಮಾತನಾಡಿದ್ದು, ಅವರು ಎಲ್ಲಿಂದನಾದರೂ ಸ್ಟಾರ್ಟ್ ಮಾಡಲಿ, ಅದು ಅವರವರ ಪಕ್ಷದ ವಿಚಾರವಾಗಿದೆ. ನಾನು ಅವರ ಬಗ್ಗೆ ಯಾಕೆ ಚರ್ಚೆ ಮಾಡಲಿ? ಕೆಸಿಆರ್ ನಮಗೆ ಬೆಂಬಲ ಕೊಡುತ್ತಿದ್ದಾರೆ. ಗಡಿ ಭಾಗದಲ್ಲಿ ನಮಗೆ ಸಪೋರ್ಟ್ ಮಾಡುತ್ತಿದ್ದಾರೆ. ಅವರ ಪಕ್ಷದ ಶಾಸಕರು ನಮಗೆ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಜನಾರ್ದನ್ ರೆಡ್ಡಿ ಜೊತೆಗೆ ಮಾತು ಕತೆ ಆಗಿಲ್ಲ. ಹಾಗೆಯೇ ಯಾರ ಜೊತೆಗೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ, ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಅನ್ನುವುದೇ ಗುರಿಯಾಗಿದೆ ಎಂದರು.