Get Updates
Get notified of breaking news, exclusive insights, and must-see stories!

Yagachi Dam: ಬೇಲೂರಿನ ಯಗಚಿ ಜಲಾಶಯಕ್ಕಿಲ್ಲ ಬಾಗಿನ ಭಾಗ್ಯ: ಯಾಕೆ..?

ಹಾಸನ, ಅಕ್ಟೋಬರ್‌ 22: ಜಿಲ್ಲೆಯ ಬೇಲೂರು ವಾಸ್ತುಶಿಲ್ಪಕ್ಕೆ ಹೆಸರು ಮಾಡಿದ್ದು ಇಲ್ಲಿರುವ ಚೆನ್ನಕೇಶವ ದೇಗುಲ ವಿಶ್ವ ವಿಖ್ಯಾತಿ ಪಡೆದಿದೆ. ಜೊತೆಗೆ ತಾಲೂಕಿಗೆ ಸೇರುವ ಯಗಚಿ ಜಲಾಶಯ ಕೂಡ ಪ್ರೇಕ್ಷಣೀಯ ತಾಣವೇ. ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಸಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಮರೀಚಿಕೆಯಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಇಲ್ಲಿರುವ ಯಗಚಿ ಜಲಾಶಯ ಭರ್ತಿಯಾಗಿದ್ದರೂ ಬಾಗಿನ ಅರ್ಪಿಸಲು ಮುಂದಾಗದಿರುವುದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವ ಪಾರಂಪರಿಕಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಜಾಗತಿಕ ಮನ್ನಣೆ ಪಡೆದ ಬೇಲೂರಿನ ಮೇಲೆ ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಕನಿಷ್ಟ ಸೌಜನ್ಯಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಅಧಿಕಾರಿಗಳು ಬೇಲೂರಿನ ಸಮಸ್ಯೆಗಳ ಬಗ್ಗೆ ಗಮನ ನೀಡುತ್ತಿಲ್ಲ. ಜೊತಗೆ ಯಗಚಿಗೆ ಬಾಗಿನ ಅರ್ಪಣೆ ಮಾಡುತ್ತಿಲ್ಲ, ಹೊಯ್ಸಳ ಮತ್ತು ಹಲ್ಮಿಡಿ ಉತ್ಸವ ನಡೆಸುತ್ತಿಲ್ಲ ಎಂಬ ಆಕ್ರೋಶ ಕನ್ನಡಪರ ಸಂಘಟನೆಗಳದ್ದಾಗಿದೆ.

State Government MLA Or Government Officers Not Offers Gagina To Belur Yagachi Dam

ಬೇರೆ ಕಡೆಗಳಲ್ಲಿ ಬಾಗಿನ ಅರ್ಪಣೆ ಮಾಡಲಾಗುತ್ತದೆ. ಆದರೆ ಯಗಚಿ ಜಲಾಶಯಕ್ಕೆ ಏಕೆ ಬಾಗಿನ ಅರ್ಪಿಸಲು ಮುಂದಾಗುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ. ಈ ಕುರಿತಂತ ಮಾತನಾಡಿರುವ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್. 2004ರಲ್ಲಿ ಯಗಚಿ ಜಲಾಶಯ ನಿರ್ಮಿಸಿದ್ದು, ಅನ್ಯ ತಾಲ್ಲೂಕಿಗೆ ಮಾತ್ರ ಉಪಯುಕ್ತವಾಗಿದೆಯೇ ಹೊರತು ಬೇಲೂರು ತಾಲ್ಲೂಕಿಗೆ ಜೋಳಿಗೆ ಸಿಕ್ಕಿದೆ.

ಜಲಾಶಯವಿದ್ದರೂ ನೀರಿಗೆ ಸಂಕಷ್ಟ

ಇದಕ್ಕೆ ಕಾರಣ ಇಲ್ಲಿನ ಇಚ್ಚಾಶಕ್ತಿ ಇಲ್ಲದ ರಾಜಕಾರಣಿಗಳು, ಪ್ರವಾಸಿತಾಣ ಬೇಲೂರಿನ ಅಭಿವೃದ್ದಿಗೊಳಿಸಲು ಮೀನಾ-ಮೇಷ ಎಣಿಸಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್ ಅವರು ಕೆಆರ್ಎಸ್ ಮಾದರಿಯಲ್ಲಿ ಹೈಟೆಕ್ ಉದ್ಯಾನವನ ನಿರ್ಮಿಸುವ ಭರವಸೆ ನೀಡಿದ್ದರೂ ಇಲ್ಲಿಯ ತನಕ ಬರುವ ಪ್ರವಾಸಿಗರಿಗೆ ಕನಿಷ್ಟ ಶೌಚಾಲಯ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಯಗಚಿಗೆ ಸೂಕ್ತ ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮಾರ ಇಲ್ಲವಾಗಿದೆ. ಅಲ್ಲದೆ ಯಗಚಿ ಸಮೀಪದ ನೂರಾರು ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಅಭಾವವಿದೆ.

State Government MLA Or Government Officers Not Offers Gagina To Belur Yagachi Dam

ಯಗಚಿ ಜಲಾಶಯದ ನೀರು ಮಾತ್ರ ಚಿಕ್ಕಮಗಳೂರು ಮತ್ತು ಹೊಳೆನರಸೀಪುರಕ್ಕೆ ಹರಿಯುತ್ತಿದೆ ಈ ಬಗ್ಗೆ ಹತ್ತಾರು ಬಾರಿ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿದರೂ ಯಾವುದೇ ಪ್ರಯೋಜವಾಗಿಲ್ಲ, ಜಿಲ್ಲಾ ಮಂತ್ರಿಗಳು ಬೇಲೂರಿನ ಮೇಲೆ ಏಕೆ? ಮಲತಾಯಿಧೋರಣೆ ಅನುಸರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ, ಮಾತನಾಡಿ, ಐತಿಹಾಸಿಕ ಮತ್ತು ಭವ್ಯ ಪರಂಪರೆಯನ್ನು ಹೊಂದಿರುವ ಬೇಲೂರಿನಲ್ಲಿ ನಡೆಯುತ್ತಿದ್ದ ಹೊಯ್ಸಳ ಮಹೋತ್ಸವ ಹಾಗೂ ಕನ್ನಡಕ್ಕೆ ಪ್ರಥಮ ಶಿಲಾ ಶಾಸನ ನೀಡಿದ ಹಲ್ಮಿಡಿಯ ಉತ್ಸವಗಳು ಸ್ಥಗೀತವಾಗಿದೆ. ಇದಕ್ಕೆ ಕಾರಣ ಜಿಲ್ಲಾಡಳಿತ ಮತ್ತು ಜಿಲ್ಲಾ ಮಂತ್ರಿಗಳ ಮೃದುಧೋರಣೆಯಾಗಿದೆ ಎಂದು ಕಿಡಿಕಾರಿದರು.

ಇನ್ನಾದರೂ ಇತ್ತ ಗಮನ ನೀಡುತ್ತಾರಾ?

ಜಿಲ್ಲಾ ಮಂತ್ರಿಗಳಾದ ಕೆ.ಎನ್.ರಾಜಣ್ಣ ಅವರಿಗೆ ಹಾಸನಾಂಬೆ ಮಾತ್ರ ಉತ್ಸವ ನಡೆಸಲು ಮನಸ್ಸು ಮಾಡುತ್ತಾರೆ. ಆದರೆ ಅದಾಯವಿಲ್ಲದ ಕಡೆ ತಿರಗಿ ನೋಡುತ್ತಿಲ್ಲ. ಈಗಾಗಲೇ ನಾಲ್ಕು ಬಾರಿ ಯಗಚಿ ಜಲಾಶಯ ಭರ್ತಿಯಾಗಿದೆ. ಜಿಲ್ಲಾ ಮಂತ್ರಿಗಳ ಇಲ್ಲಿಗೆ ಆಗಮಿಸಿ ಬಾಗಿನ ಅರ್ಪಣೆ ಜೊತೆಗೆ ಬೇಲೂರು ಅಭಿವೃದ್ಧಿಗೆ ಸೂಕ್ತ ಅನುದಾನ ನೀಡಬೇಕು. ಸ್ಥಳೀಯ ಶಾಸಕರು ಕೂಡ ತಮ್ಮ ಇಚ್ಚಾಶಕ್ತಿಯಿಂದ ನೆನಗುಂದಿಗೆ ಬಿದ್ದ ಹೊಯ್ಸಳ ಮಹೋತ್ಸವ, ಹಲ್ಮಿಡಿ ಉತ್ಸವ ನಡೆಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

State Government MLA Or Government Officers Not Offers Gagina To Belur Yagachi Dam

ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸುವುದು ಸೇರಿದಂತೆ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸುತ್ತಾರಾ? ಹಾಗೆಯೇ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಚೆನ್ನಕೇಶವ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೂ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+