ಬಳ್ಳೂರು ಬಳಿ ವಿದ್ಯಾರ್ಥಿಗಳಿದ್ದ ಬಸ್ ಅಪಘಾತ: ಹತ್ತು ಜನರಿಗೆ ಗಂಭೀರ ಗಾಯ
ಹಾಸನ, ನವೆಂಬರ್, 07: ಬೇಲೂರು ತಾಲೂಕಿನ ಬಳ್ಳೂರು-ಕೋನೆರಲು ಬಳಿ ಶಾಲಾ ವಿದ್ಯಾರ್ಥಿಗಳಿದ್ದ ಬಸ್ ಅಪಘಾತವಾಗಿದೆ. ತಡರಾತ್ರಿ 2:45ರ ಸುಮಾರಿಗೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ, ನಿರ್ವಾಹಕ, ಶಾಲೆಯ ಪ್ರಾಂಶುಪಾಲರು, ಆರು ವಿದ್ಯಾರ್ಥಿಗಳು ಸೇರಿದಂತೆ ಹತ್ತು ಜನರು ಗಂಭೀರ ಗಾಯಗೊಂಡಿದ್ದಾರೆ.
ಮೈಸೂರು
ಮಾನಸ
ಗಂಗೋತ್ರಿ
ಪ್ರೌಢಶಾಲಾ
ವಿದ್ಯಾರ್ಥಿಗಳು
ಹೊರನಾಡಿಗೆ
ಪ್ರವಾಸ
ಹೊರಟಿದ್ದ
ಸಂದರ್ಭದಲ್ಲಿ
ಅಪಘಾತ
ಸಂಭವಿಸಿದೆ.
ಬಸ್ನಲ್ಲಿ
ವಿದ್ಯಾರ್ಥಿಗಳು
ಸೇರಿ
ಒಟ್ಟು
40
ಜನರು
ಇದ್ದರು
ಎನ್ನುವ
ಮಾಹಿತ
ಲಭ್ಯವಾಗಿದೆ.
ಗಾಯಾಳುಗಳಿಗೆ
ಹಾಸನ
ಜಿಲ್ಲಾಸ್ಪತ್ರೆಯಲ್ಲಿ
ಚಿಕಿತ್ಸೆಗೆ
ದಾಖಲಿಸಲಾಗಿದ್ದು,
ಉಳಿದ
ವಿದ್ಯಾರ್ಥಿಗಳಿಗೆ
ಲಾಡ್ಜ್ನಲ್ಲಿ
ಉಳಿದುಕೊಳ್ಳಲು
ವ್ಯವಸ್ಥೆ
ಮಾಡಲಾಗಿದೆ.
ಘಟನಾ
ಸ್ಥಳಕ್ಕೆ
ಪೊಲೀಸರು
ಭೇಟಿ
ನೀಡಿ
ಪರಿಶೀಲನೆ
ನಡೆಸಿದ್ದಾರೆ.
ಇನ್ನು
ಬೇಲೂರು
ಗ್ರಾಮಾಂತರ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.
ಭೀಕರ ರಸ್ತೆ ಅಪಘಾತ: 4 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು
ಮಂಚಿಕೊಪ್ಪ
ಬಳಿ
ಭೀಕರ
ರಸ್ತೆ
ಅಪಘಾತ
ಭೀಕರ
ರಸ್ತೆ
ಅಪಘಾತದಲ್ಲಿ
ನಾಲ್ಕು
ವರ್ಷದ
ಮಗು
ಸೇರಿ
ಒಂದೇ
ಕುಟುಂಬದ
ಮೂವರು
ಸ್ಥಳದಲ್ಲೇ
ಸಾವನ್ನಪ್ಪಿರುವ
ಘಟನೆ
ಶಿವಮೊಗ್ಗ
ಜಿಲ್ಲೆಯ
ಶಿರಾಳಕೊಪ್ಪ
ಸಮೀಪದ
ಮಂಚಿಕೊಪ್ಪ
ಬಳಿ
ನಡೆದಿದೆ.
ಹಲುಗಿನಕೊಪ್ಪ
ನಿವಾಸಿಗಳಾದ
ಜ್ಯೋತಿ
(30),
ಗಂಗಮ್ಮ
(50)
ಮತ್ತು
ಸೌಜನ್ಯ
(4)
ಮೃತ
ದುರ್ದೈವಿಗಳು
ಎಂದು
ಗುರುತಿಸಲಾಗಿದೆ.
ನಿನ್ನೆ
(ನವೆಂಬರ್6)ರ
ರಾತ್ರಿ
ಹಲುಗಿನಕೊಪ್ಪ
ನಿವಾಸಿ
ಮಲ್ಲಿಕಾರ್ಜುನ್
ಎನ್ನುವವರು
ಮಗಳು
ಸೌಜನ್ಯ,
ಪತ್ನಿ
ಜ್ಯೋತಿ,
ಅವರ
ತಾಯಿ
ಗಂಗಮ್ಮ
ಅವರೊಂದಿಗೆ
ಬೈಕ್ನಲ್ಲಿ
ತೆರಳುತ್ತಿದ್ದರು.
ಮಲ್ಲಿಕಾರ್ಜುನ್
ಹಾಗೂ
ಕುಟುಂಬಸ್ಥರು
ಶಿರಾಳಕೊಪ್ಪದಿಂದ
ಹಲುಗಿನಕೊಪ್ಪದಲ್ಲಿರುವ
ಮನೆಗೆ
ತೆರಳುತ್ತಿದ್ದರು.
ಈ ವೇಳೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ ಬರುತ್ತಿದ್ದಂತೆ, ಹಿರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತ್ತಿದ್ದ ಕಾರು ಏಕಾಏಕಿ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ನಾಲ್ಕು ವರ್ಷದ ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಲ್ಲಿಕಾರ್ಜುನ, ಜ್ಯೋತಿ ಹಾಗೂ ಗಂಗಮ್ಮ ಅವರನ್ನು ಕೂಡಲೇ ಶಿಕಾರಿಪುರದ ಆಸ್ಪತ್ರೆಗೆ ರವಾನಿಸಲಾಗಿತ್ತು. ದುರಾದೃಷ್ಟವಶಾತ್ ಜ್ಯೋತಿ ಶಿಕಾರಿಪುರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಲ್ಲಿಕಾರ್ಜುನ ಹಾಗೂ ಗಂಗಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಗಂಗಮ್ಮ ಚಿಕಿತ್ಸೆಗೆ ಸ್ಪಂದಿಸದೇ ಶಿವಮೊಗ್ಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಮಲ್ಲಿಕಾರ್ಜುನ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಅಪಘಾತ ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗ ಶಿರಾಳಕೊಪ್ಪ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪಘಾತದಲ್ಲಿ ಮಲ್ಲಿಕಾರ್ಜುನ ಅವರ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಇನ್ನು ಕಾರಿನ ಮುಂಭಾಗ ಕೂಡ ಜಖಂ ಆಗಿದೆ.