Get Updates
Get notified of breaking news, exclusive insights, and must-see stories!

ರಾಜ್ಯದ ಒಟ್ಟು ಜನಸಂಖ್ಯೆಯ 4% ರಷ್ಟಿರುವ ಜಾತಿಗಳಿಗೆ 10% ಮೀಸಲಾತಿ: ಮೀಸಲಾತಿಯ ಮೂಲ ಕಲ್ಪನೆಗೆ ವಿರುದ್ಧ

ಮೀಸಲಾತಿಯ ಮೂಲ ಕಲ್ಪನೆಯು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಯುಗಯುಗಾಂತರಗಳಿಂದ ಹಿಂದುಳಿದವರಿಗೆ ಅನುಕೂಲ ಮಾಡುವುದು. ಆದರೆ, ಈಗಿನ ಆಡಳಿತವು ಮೀಸಲಾತಿಯ ಕಲ್ಪನೆಯನ್ನೇ ತಿರುಚಿದೆ.

ಹಾಸನ, ಮಾರ್ಚ್ 16: 'ಆರ್ಥಿಕವಾಗಿ ದುರ್ಬಲ ವರ್ಗಗಳ' ಅಡಿಯಲ್ಲಿರುವ ನೀಡಿರುವ ಮೀಸಲಾತಿಯು ಮೀಸಲಾತಿಯ ಮೂಲ ಕಲ್ಪನೆಗೆ ವಿರುದ್ಧವಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಆರೋಪಿಸಿದ್ದಾರೆ. ಇತ್ತೀಚೆಗೆ ಹಾಸನದಲ್ಲಿ ಮಾವಳ್ಳಿ ಶಂಕರ್, ಬಿ.ಶ್ರೀಪಾದ್ ಭಟ್ ಮತ್ತು ವಿಕಾಸ್ ಆರ್.ಮೌರ್ಯ ಸಂಪಾದಿಸಿರುವ ಇಡಬ್ಲ್ಯೂಎಸ್ 10% ಮಹಾವಾಂಚನೆ ಪುಸ್ತಕವನ್ನು ಬಿಡುಗಡೆ ಮಾಡಿದರು.

"ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಈ ಮೀಸಲಾತಿಯನ್ನು ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಕೇವಲ ಶೇಕಡಾ 4 ರಷ್ಟಿರುವ ಈ ಜಾತಿಗಳು 10% ಮೀಸಲಾತಿಯನ್ನು ಅನುಭವಿಸುತ್ತವೆ. ಯಾರೂ ಕೇಳದಿದ್ದರೂ ಸರ್ಕಾರ ಈ ಮೀಸಲಾತಿಯನ್ನು ಘೋಷಿಸಿದೆ. ಮೀಸಲಾತಿಯ ಮೂಲ ಕಲ್ಪನೆಯು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಯುಗಯುಗಾಂತರಗಳಿಂದ ಹಿಂದುಳಿದವರಿಗೆ ಅನುಕೂಲ ಮಾಡುವುದು. ಆದರೆ, ಈಗಿನ ಆಡಳಿತವು ಮೀಸಲಾತಿಯ ಕಲ್ಪನೆಯನ್ನೇ ತಿರುಚಿದೆ" ಎಂದು ಆರೋಪಿಸಿದ್ದಾರೆ.

Only 4 Percent of The Total Population of Karnataka Enjoys 10 Percent Reservation

"ಈಗಾಗಲೇ ಈ ವಿಷಯದ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯಬೇಕಿತ್ತು. ಈ ಮೀಸಲಾತಿ ಕೋಟಾವು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಕರಡು ರಚಿಸುವಾಗ ಕಲ್ಪಿಸಿಕೊಂಡಿದ್ದಕ್ಕೆ ವಿರುದ್ಧವಾಗಿದೆ. ಈ ಕೋಟಾ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಅಲ್ಲ" ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಹೇಳಿದ್ದಾರೆ.

ದಶಕಗಳಿಂದ ಮೀಸಲಾತಿಯನ್ನು ವಿರೋಧಿಸಿದ ಜನರು ಈಗ ಇಡಬ್ಲ್ಯೂಎಸ್ ಕೋಟಾದ ಅಡಿಯಲ್ಲಿ ಅದರ ಲಾಭವನ್ನು ಪಡೆಯುತ್ತಿದ್ದಾರೆ. 95% ಜನಸಂಖ್ಯೆಯು ಕೇವಲ 50% ಮೀಸಲಾತಿಯನ್ನು ಪಡೆಯುತ್ತಿದ್ದರೆ, ಜನಸಂಖ್ಯೆಯ ಕೇವಲ 4% ರಷ್ಟಿರುವ ಈ ಮೇಲ್ಜಾತಿಗಳು 10% ಕೋಟಾವನ್ನು ಅನುಭವಿಸುತ್ತಿವೆ. ಇದು ಸಾಮಾಜಿಕ ನ್ಯಾಯದ ಮೂಲ ಕಲ್ಪನೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.

Only 4 Percent of The Total Population of Karnataka Enjoys 10 Percent Reservation

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಅಧ್ಯಕ್ಷ ಮಾವಳ್ಳಿ ಶಂಕರ್‌, ಸಾಹಿತಿ ಶ್ರೀಪಾದ್ ಭಟ್‌, ಮಾನವ ಬಂಧುತ್ವ ವೇದಿಕೆಯ ಕೆ.ಎಸ್‌. ಸತೀಶ್‌ಕುಮಾರ್‌, ಡಿಎಸ್‌ಎಸ್‌ನ ಅಂಬುಗ ಮಲ್ಲೇಶ್‌, ಕವಿವಿ ಶಾಂತಾ ಅತ್ನಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ 2016 ರಲ್ಲಿ ಹೈದರಾಬಾದ್‌ನಲ್ಲಿ ಸಾವಿಗೆ ಶರಣಾದ ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲ ಅವರನ್ನು ಆಧರಿಸಿದ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+