Get Updates
Get notified of breaking news, exclusive insights, and must-see stories!

ತೂತ್ ಕಾಂಗ್ರೆಸ್ ಅಂತಿರೇನ್ರಿ: ಸ್ವಪಕ್ಷದವರಿಂದಲೇ ಶಿವಲಿಂಗೇಗೌಡ ವಿರುದ್ಧ ಅಸಮಾಧಾನ

ಹಾಸನ, ಜುಲೈ, 10: ಹಾಸನ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ಸ್ವಪಕ್ಷದವರೇ ಆದ ಹಾಸನ ಜಿಲ್ಲಾ ಕಾಂಗ್ರೆಸ್‌ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಖುರೇಜ್ ಅಸಮಾಧಾನ ಹೊರಹಾಕಿದ್ದಾರೆ.

ರೀ ಸ್ವಾಮಿ ಬಿಜೆಪಿಯಲ್ಲಿ ಸುಧಾಕರ್ ಕೆಲಸ ಮಾಡಿರಲಿಲ್ಲವಾ?, ಆದರೆ ಅವರೇ ಸೋತಿದ್ದಾರೆ. ನೀವು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದರಿಂದಲೇ ಗೆದ್ದಿರುವುದು. ನಿಮಗೆ ಈ ಪಕ್ಷದ ಇತಿಹಾಸ ಗೊತ್ತಿದೆಯಾ? ಎಂದು ಪ್ರಶ್ನಿಸುವ ಮೂಲಕ ಶಿವಲಿಂಗೇಗೌಡ ವಿರುದ್ಧ ಖುರೇಜ್ ಆಕ್ರೋಶ ವ್ಯಕ್ತಪಡಿಸಿದರು.

Hassan District Congress Vice President of Minority Unit outrage against K.M.Shivalinge Gowda

ನಾವು 15 ವರ್ಷಗಳಿಂದ ಬೇರೆ ಪಕ್ಷದವರ ಜೊತೆ ಗುದ್ದಾಡಿದ್ದೆವೆ. ಯೂಥ್ ಕಾಂಗ್ರೆಸ್ ಅಂದ್ರೆ ತೂತ್ ಕಾಂಗ್ರೆಸ್ ಅಂತಿರೇನ್ರೀ, ನೀವು ಹಿಂಗೆಲ್ಲ ಮೆರಿಬೇಡಿ. ನಮ್ಮ ಪಕ್ಷಕ್ಕೆ ಇತಿಹಾಸ ಇದೆ. ಜೆಡಿಎಸ್‌ನಿಂದ ಬಂದು ಕಾಂಗ್ರೆಸ್‌ ನಾಯಕರನ್ನು ತುಳೀತಾ ಇದ್ದೀರಿ. ಇದು ತುಂಬಾ ದಿನ ನೆಡೆಯುವುದಿಲ್ಲ. ನಿಮ್ಮ ಸಿದ್ಧಾಂತವನ್ನು ಅರಸೀಕೆರೆಯಲ್ಲಿ ಇಟ್ಟುಕೊಳ್ಳಿ, ಇಲ್ಲಿ ನೆಡಸಲಿಕ್ಕೆ ಹೋಗಬೇಡಿ ಎಂದು ತರಾಟೆ ತೆಗೆದುಕೊಂಡು.

ಜೆಡಿಎಸ್‌ನಿಂದ ಬಂದು ಇಲ್ಲಿ ಆಟ ಆಡಲಿಕ್ಕೆ ಹೋಗಬೇಡಿ, ನಾವು ಪಕ್ಷ ಕಟ್ಟಿದ್ದೇವೆ ಸ್ವಾಮಿ ಎಂದು ಹೇಳುವ ಮೂಲಕ ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡ ವಿರುದ್ಧ ಸ್ವಪಕ್ಷದವರೇ ಆದ ಖುರೇಜ್ ಹಿಗ್ಗಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

Hassan District Congress

ಎಚ್‌ಡಿಕೆ ವಿರುದ್ಧ ಎನ್‌.ಚಲುವರಾಯಸ್ವಾಮಿ ಆಕ್ರೋಶ

ಹಾಗೆಯೇ ಸರ್ಕಾರದ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅದರ ಬಗ್ಗೆ ನನಗೇನೂ ಕುತೂಹಲ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯದಲ್ಲಿ ಇತ್ತೀಚೆಗಷ್ಟೇ ತಿರುಗೇಟು ನೀಡಿದರು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಏನಾದರೂ ದಾಖಲೆಗಳು ಇದ್ದರೆ ಬಿಡುಗಡೆ ಮಾಡಬಾರದು ಎಂದು ಯಾರೂ ಹೇಳಿಲ್ಲ. ದಾಖಲೆ ಬಿಡುಗಡೆ ಮಾಡಲಿ ಸಂತೋಷ. ಬೇಕಿದ್ದರೆ ಸದನದಲ್ಲೇ ದಾಖಲೆ ಬಿಡುಗಡೆ ಮಾಡಲಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಗೆ ಓಪನ್‌ ಚಾಲೆಂಜ್‌ ಹಾಕಿದ್ದರು.

ಕೇವಲ ದಾಖಲೆ ಇದೆ, ಬಿಡುಗಡೆ ಮಾಡುತ್ತೇನೆಂದಷ್ಟೇ ಹೇಳಿದರೆ ಸಾಲದು. ಬಿಡುಗಡೆ ಮಾಡಿ ಮಾತನಾಡಬೇಕು. ಆದರೆ ಜನಾರ್ದನರೆಡ್ಡಿ ಬಾಂಬ್ ರೀತಿ ಆಗುವುದು ಬೇಡ ಅಷ್ಟೇ ಎಂದು ಟೀಕಿಸಿದ್ದರು.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸಲ್ಲ ಎಂದು ಕುಮಾರಸ್ವಾಮಿ ಹೆಸರೇಳದೆ ಟೀಕಿಸಿದ ಸಚಿವ ಚಲುವರಾಯಸ್ವಾಮಿ, ಎಲ್ಲಾ ಒಕ್ಕಲಿಗರನ್ನು ಅವರು ದೂರ ಇಡುತ್ತಾ ಬಂದಿದ್ದಾರೆ. ಈಗ ನನ್ನ ಸರದಿ ಬಂದಿದೆ. ಹಾಗಾಗಿ ನನ್ನನ್ನೂ ದೂರ ಇಟ್ಟಿದ್ದಾರೆ ಎಂದು ತಿಳಿಸಿದ್ದರು.

ಮತ್ತೆ ನಾನು ಎಂದೂ ಗೆಲ್ಲುವುದಿಲ್ಲ ಎಂದು ಅವರು ಅಂದುಕೊಂಡಿದ್ದರು. ಮಂಡ್ಯದ ಜನ ನನ್ನ ಪಾಪದ ಹುಡುಗ ಎಂದು ಗೆಲ್ಲಿಸಿಬಿಟ್ಟಿದ್ದಾರೆ. ನಾನು ಈಗ ಮಂತ್ರಿ ಆಗಿದ್ದೇನೆ. ಅದನ್ನು ಹೇಗೆ ಅವರು ಸಹಿಸಿಕೊಳ್ಳುತ್ತಾರೆ?, ಅವರಿಗೆ ಕಷ್ಟ ಆಗುತ್ತದೆ. ನಾವು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದರು.

ನಮ್ಮ ಬೆಳವಣಿಗೆಯನ್ನು ಸಹಿಸುವುದಕ್ಕೆ ಆಗದಿರುವಂತಹ ಪ್ರವೃತ್ತಿ ಇರುವವರು. ನಮಗೇನೂ ಅವರ ಮೇಲೆ ದ್ವೇಷ ಇಲ್ಲ. ಆದರೆ ಅವರಿಗೇ ನಮ್ಮನ್ನು ಕಂಡರೆ ಆಗುವುದಿಲ್ಲ. ಇವರು ಯಾರನ್ನೂ ಕೂಡ ಸಹಿಸಲ್ಲ ಎಂಬುದನ್ನು ಹಳೇ ಮೈಸೂರು ಭಾಗದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ನಾನು ಒಕ್ಕಲಿಗ ನಾಯಕ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ದೇವೇಗೌಡರು ಹಿರಿಯರು, ಪ್ರಧಾನಿ ಆಗಿದ್ದವರು. ನಾವೆಲ್ಲಾ ಅವರನ್ನು ಪ್ರೀತಿ ಮಾಡುತ್ತೇವೆ. ಆದರೆ ಕುಮಾರಸ್ವಾಮಿ ದೇವೇಗೌಡರ ಹೆಸರನ್ನು ತರದೆ ರಾಜಕೀಯ ಮಾಡುವುದಕ್ಕೆ ಆಗುವುದೇ ಇಲ್ಲ. ಅದಕ್ಕಾಗಿ ನಿತ್ಯ ದೇವೇಗೌಡರ ಹೆಸರನ್ನು ತರುತ್ತಾರೆ. ಸದನದಲ್ಲಿ ದೇವೇಗೌಡರ ಹೆಸರನ್ನು ನಾವು ಬಳಸಿಲ್ಲ.

ದೇವೇಗೌಡರ ಹೆಸರನ್ನು ಬಳಸುವವರೇ ಎಚ್‌.ಡಿ. ಕುಮಾರಸ್ವಾಮಿಯವರು. ಗೌಡರ ಹೆಸರನ್ನು ತೆಗೆಯದಿದ್ದರೆ ಅವರ ಬೇಳೆಕಾಳು ಬೇಯಲ್ಲ ಅನ್ನುವುದು ಅವರಿಗೂ ಗೊತ್ತಿದೆ. ಆದ್ದರಿಂದಲೇ ನಿತ್ಯ ದೇವೇಗೌಡರ ಹೆಸರನ್ನು ಬಳಸಿಯೇ ಮಾತು ಪ್ರಾರಂಭಿಸುತ್ತಾರೆ ಎಂದು ಟಾಂಗ್ ನೀಡಿದ್ದರು.

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌, ನಾವು ಬಹಳಷ್ಟು ಡ್ರೈವ್ ನೋಡಿದ್ದೇವೆ. ನಾನು ಕಿವಿಯಲ್ಲಿ ಕೇಳಿದ್ದನ್ನು ನಂಬುವುದಿಲ್ಲ. ಕಣ್ಣಾರೆ ನೋಡಿದ್ದನ್ನು ಮಾತ್ರ ನಂಬುತ್ತೇನೆ. ಅವರ ಬಳಿ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲೆಸೆದಿದ್ದರು. ಹಾಗೆಯೇ ಇಂದು ಚಲುವರಾಯಸ್ವಾಮಿ ಅವರು ಕೂಡ ಸವಾಲಾಕಿದ್ದಾರೆ. ಹಾಗಾದರೆ ಎಚ್‌.ಡಿ.ಕೆ ಅವರ ಮುಂದಿನ ನಿಲುವು ಏನಾಗಿರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+