ಉದ್ಯಮಿ ಜಾಕ್ ಮಾಗೆ ಗುರುಗ್ರಾಮದ ಕೋರ್ಟಿಂದ ಸಮನ್ಸ್
ಗುರುಗ್ರಾಮ, ಜುಲೈ 26: ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿರುವ ಆಲಿಬಾಬಾ ಸಂಸ್ಥೆಯ ಜಾಕ್ ಮಾ ಅವರಿಗೆ ಗುರುಗ್ರಾಮ(ಗುರ್ ಗಾಂವ್) ದ ನ್ಯಾಯಾಲಯವೊಂದು ಸಮನ್ಸ್ ಜಾರಿ ಮಾಡಿದೆ.
ಆಲಿಬಾಬಾ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಸಂಸ್ಥೆ ವಿರುದ್ಧ ಹಾಕಿದ್ದ ದಾವೆ ವಿಚಾರಣೆ ನಡೆಸಿದ ಕೋರ್ಟ್, ಸಂಸ್ಥೆಯ ಮುಖ್ಯಸ್ಥರಿಂದ ಎಚ್ ಆರ್ ತನಕ ಎಲ್ಲರಿಗೂ ಸಮನ್ಸ್ ನೀಡಿದೆ.
ಆಲಿಬಾಬಾದ ಯುಸಿ ನ್ಯೂಸ್ , ಯುಸಿ ಬ್ರೌಸರ್ ಹಾಗೂ 57 ಇನ್ನಿತರ ಚೀನಾ ಮೂಲದ ಆಪ್ಲಿಕೇಷನ್ ನಿಂದ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಭಾರತ ಸರ್ಕಾರವು ನಿಷೇಧ ಹೇರಿದೆ.

ಇದಾದ ಬಳಿಕ ಆಲಿಬಾಬಾದ ಯುಸಿ ಬ್ರೌಸರ್ ವೆಬ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪುಷ್ಪಾಂದ್ರ ಸಿಂಗ್ ಪಾರ್ಮಾರ್ ಎಂಬಾತ ತನ್ನ ಹುದ್ದೆ ಕಳೆದುಕೊಂಡಿದ್ದರು. ಸಂಸ್ಥೆಯಲ್ಲಿ ಎಲ್ಲವೂ ಸೆನ್ಸಾರ್ ಆಗುತ್ತಿತ್ತು. ಚೀನಾಕ್ಕೆ ಹಿತವಾಗುವ ಸುದ್ದಿಯನ್ನು ಮಾತ್ರ ಹೊರಕ್ಕೆ ಬಿಡಲಾಗುತ್ತಿತ್ತು.
ಹಲವು ಬಾರಿ ಸುಳ್ಳು, ದೋಷಪೂರಿತ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಅಪನಗದೀಕರಣ, ಭಾರತ- ಪಾಕಿಸ್ತಾನ ನಡುವೆ ಯುದ್ಧ ಸಾಧ್ಯತೆ ಎಂಬ ಸೂಕ್ಷ್ಮ ವಿಷಯಗಳನ್ನು ತಪ್ಪಾಗಿ ಮುಂದಿಡಲಾಗಿದೆ ಎಂದು ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಾರ್ಮಾರ್ ಹೇಳಿದ್ದು, ತಮಗಾದ ನಷ್ಟಕ್ಕೆ 2 ಕೋಟಿ ರು ಪರಿಹಾರ ಕೂಡಾ ಕೇಳಿದ್ದಾರೆ.
ಸಿವಿಎಲ್ ಜಡ್ಜ್ ಸೋನಿಯಾ ಶಿಯೋಕಾಂದ್ ಅವರು ದೂರುದಾರರ ಹೇಳಿಕೆ ಆಧಾರಿಸಿ ಆಲಿಬಾಬಾ ಸಂಸ್ಥೆಯ ಜಾಕ್ ಮಾ, 12ಕ್ಕೂ ಅಧಿಕ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ಜುಲೈ 29ರಂದು ಕೋರ್ಟಿಗೆ ಖುದ್ದು ಹಾಜರಾಗಬೇಕು ಅಥವಾ ವಕೀಲರ ಮೂಲಕ ಹಾಜರಾಗಿ ಸೂಕ್ತ ದಾಖಲೆ ನೀಡಬೇಕು ಎಂದಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications