ಗದಗ: ಅಕ್ರಮ ಮರಳು ದಂಧೆಗೆ ಕುಮ್ಮಕ್ಕು, 5 ಜನ ಪೇದೆಗಳು ಅಮಾನತು
ಗದಗ, ನವೆಂಬರ್ 11 : ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಅಕ್ರಮ ಮರಳು ದಂಧೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ 5 ಜನ ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಡಿವೈಎಸ್ ಪಿ ಗುರು ಮತ್ತೂರು ಆದೇಶ ಹೊರಡಿಸಿದ್ದಾರೆ.
ಗಜೇಂದ್ರಗಡ ಪೊಲೀಸ್ ಠಾಣೆಯ ಕನಕಯ್ಯ ಜಮಾದಾರ್, ಮಹೇಶ್ ಬಳ್ಳಾರಿ, ಕುಮಾರ್ ತಿಗರಿ, ಚಂದ್ರು ಪಾಟೀಲ್ ಮತ್ತು ಸಿ.ವೈ. ಪೂಜಾರ್ ಅಮಾನತಾಗಿರೋ ಪೊಲೀಸ್ ಪೇದೆಗಳು. ಹಲವು ದಿನಗಳಿಂದ ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆಗೆ ಈ ಐವರು ಪೇದೆಗಳು ಕುಮ್ಮಕ್ಕು ನೀಡಿದ್ದಾರೆ ಎನ್ನುವ ಆರೋಪದ ಅಮಾನತು ಮಾಡಲಾಗಿದೆ.

ಇನ್ನು ಇದೇ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವಾನಂದ ಲಮಾಣಿ ಅವರು ಅಕ್ರಮ ದಂಧೆ ಕೋರರಿಂದ ಲಂಚ ಸ್ವೀಕರಿಸುವ ದೃಶ್ಯವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.












Click it and Unblock the Notifications