ಗದಗ ಪೊಲೀಸರ ಪರಿಸರ ಪ್ರೇಮಕ್ಕೆ ಹೇಳಿ ಸಲಾಂ
ಗದಗ, ಡಿಸೆಂಬರ್ 12 : ಪೊಲೀಸರ ಕೆಲಸವೆಂದರೆ ಹಾಗೆಯೇ ಬಿಡುವು ಸಿಗುವುದು ಕಷ್ಟ. ಗದಗ ಜಿಲ್ಲೆಯ ಪೊಲೀಸರು ಕರ್ತವ್ಯದ ನಡುವೆಯೂ ಪರಿಸರ ಪ್ರೇಮವನ್ನು ಮೆರೆದಿದ್ದಾರೆ. ಹೂವು, ಹಣ್ಣಿನ ಗಿಡಗಳನ್ನು ಬೆಳೆಸಿ ಪರಿಸರವನ್ನು ಸುಂದರವಾಗಿಸಿದ್ದಾರೆ.
ಪೊಲೀಸ್ ಇಲಾಖೆ ಮತ್ತು ಪರಿಸರಕ್ಕೆ ಅವಿನಾಭಾವ ಸಂಬಂಧವಿದೆ. ವಿವಿಧ ಪೊಲೀಸ್ ಠಾಣೆ, ಹಿರಿಯ ಅಧಿಕಾರಿಗಳ ಕಚೇರಿಗಳಲ್ಲಿ ಹಸಿರು ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಕರ್ತವ್ಯದ ಬಿಡುವಿನ ನಡುವೆಯೇ ಪೊಲೀಸ್ ಅಧಿಕಾರಿಗಳು ಪರಸರ ಸಂರಕ್ಷಣೆ ಮಾಡಿದ್ದಾರೆ.
ಕರ್ತವ್ಯದ ಬಿಡುವಿನ ವೇಳೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಂತ ಇಚ್ಛೆಯಿಂದ ಗಿಡಮರಗಳನ್ನು ಬೆಳೆಸುವ ಪರಿಪಾಠ ಇಲಾಖೆಗೆ ಮೆರಗು ನೀಡಿದೆ. ಸಿಬ್ಬಂದಿಗಳು ಬೇರೆ ಕಡೆಗೆ ಸಿಗುವ ವಿಶೇಷ ಗಿಡಮರಗಳನ್ನು ತಂದು ತಮ್ಮ ಠಾಣೆ, ಘಟಕದ ಮುಂದೆ ನೆಟ್ಟು ಸಂತಸ ಪಡುತ್ತಿದ್ದಾರೆ. ಇತರ ಜನರಿಗೆ ಮಾದರಿಯಾಗಿದ್ದಾರೆ.
ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ನರ್ಸರಿಗಳಿಂದ ಸಸಿಗಳನ್ನು ತರಿಸಲಾಗಿದೆ. ಈ ಗಿಡ-ಮರಗಳು ಸಾವಿರಾರು ಪಕ್ಷಿಗಳ ವಾಸಸ್ಥಾನವಾಗಿದೆ. ಬಿರುಬಿಸಿಲಿನಲ್ಲಿ ತಂಪನ್ನು ನೀಡುತ್ತಿವೆ.

ಗದಗದ ಡಿಎಆರ್ ಘಟಕ
ಮರ-ಗಿಡಗಳಿಂದ ಕೂಡಿರುವ ಈ ಹಸಿರಿನ ತಾಣ ಮಲ್ಲಸಮುದ್ರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗದಗ ಘಟಕವಾಗಿದೆ. ಗುಡ್ಡದ ಇಳಿಜಾರಿನಲ್ಲಿರುವ ಡಿಎಆರ್ ಘಟಕವು ಕಲ್ಲುಗಳಿಂದ ಕೂಡಿದ ಕೆಂಪು ಭೂಮಿಯಾಗಿತ್ತು. ಸಾಕಷ್ಟು ಕಲ್ಲುಗಳನ್ನು ತೆಗೆದು ಗಿಡಮರ ಬೆಳೆಯಲು ಅನುಕೂಲವಾಗುವ ರೀತಿಯಲ್ಲಿ 4-5 ವರ್ಷಗಳ ಕಾಲ ಶ್ರಮಪಟ್ಟು ಹಸಿರಿನ್ನು ಬೆಳೆಸಲಾಗಿದೆ.

40-50 ಜಾತಿಯ ಗಿಡಗಳು
ಗಂಧದ ಗುಡಿ ಸಿನಿಮಾದ ಹಾಡನ್ನು ನೆನಪು ಮಾಡುವಷ್ಟು ಹಸಿರು ವಾತಾವರಣ ನಿರ್ಮಾಣ ಮಾಡಲಾಗಿದೆ. ಬಿರು ಬಿಸಿಲಿನಲ್ಲಿಯೂ ಮರ-ಗಿಡಗಳು ಒಂದಷ್ಟು ತಂಪು ನೀಡುತ್ತಿವೆ. ಸುಮಾರು 2 ಸಾವಿರಕ್ಕೂ ಅಧಿಕ 40-50 ಬೇರೆ ಬೇರೆ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.

ಹಣ್ಣ, ಹೂವಿನ ಗಿಡಗಳು
ಹಣ್ಣು, ಹೂವು, ನೆರಳು ಮತ್ತು ಅಂದಕ್ಕಾಗಿ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. 4-5 ತಳಿಯ ಪಾಮ್ ಗಿಡಗಳಿರುವುದು ಇಲ್ಲಿಯ ವಿಶೇಷ. ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನರ್ಸರಿಗಳಿಂದ ಸಸಿಗಳನ್ನು ತರಿಸಲಾಗಿದೆ. ಈ ಗಿಡ-ಮರಗಳು ಸಾವಿರಾರು ಪಕ್ಷಿಗಳ ವಾಸಸ್ಥಾನವಾಗಿದೆ.

ಪಕ್ಷಿಗಳನ್ನು ಸಾಕಲಾಗಿದೆ
ಪೊಲೀಸರ ಕೇವಲ ಗಿಡಗಳನ್ನು ಬೆಳೆಸಿಲ್ಲ. 8-10 ವಿವಿಧ ಜಾತಿಯ ಪಕ್ಷಿಗಳನ್ನು ಸಾಕಿದ್ದಾರೆ. ಇಲ್ಲಿಯ ಗಿಡಮರಗಳ ಕಾಳಜಿ ಸೇರಿದಂತೆ ಉದ್ಯಾನ ನಿರ್ವಹಣೆಗೆ ಇಲ್ಲಿನ ಡಿ.ಎಸ್.ಪಿ, ಆರ್.ಪಿ.ಐ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ.
-
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion












Click it and Unblock the Notifications