ಗದಗ ತೋಂಟದಾರ್ಯ ಶ್ರೀಗಳ ಅಂತ್ಯಸಂಸ್ಕಾರ: ಹೆಚ್ಚಿನ ಭದ್ರತೆ ನಿಯೋಜನೆ
ಗದಗ, ಅಕ್ಟೋಬರ್.21: ಗದಗ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮೀಜಿ ಅವರ ಅಂತ್ಯಸಂಸ್ಕಾರ ಇಂದು ಭಾನುವಾರ ಸಂಜೆ 4 ಗಂಟೆಗೆ ಲಿಂಗಾಯತ ಧರ್ಮದ ವಿಧಿವಿಧಾನಗಳ ಮೂಲಕ ನಡೆಯಲಿದೆ.
ಗದಗ ತೋಂಟದಾರ್ಯ ಮಠಕ್ಕೆ ಪಿಠಾಧಿಪತಿ ಇಲ್ಲದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಭಾಗವಹಿಸುವರು.
ಗದಗ: ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿ ಇನ್ನಿಲ್ಲ
ಹೆಚ್ಚಿನ ಭದ್ರತೆ ನಿಯೋಜನೆ
ತೋಂಟದ ಶ್ರೀಗಳು ವಿಧಿವಶ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, 500 ಕಾನ್ಸ್ಟೆಬಲ್, 500 ಹೋಂಗಾರ್ಡ್, 4 ಡಿವೈನ್ ಸ್ಪಿ, 13 ಸಿಪಿಐ, 20 ಪಿಎಸ್ಐ, 60 ಎಎಸ್ಐ, 6ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಅಷ್ಟೇ ಅಲ್ಲ, ಗದಗ ಜಿಲ್ಲೆಯ 750 ಸಿಬ್ಬಂದಿ, 4 ಡಿವೈಎಸ್ಪಿ, 12 ಸಿಪಿಐ, 19 ಪಿಎಸ್ಐ, 10 ಡಿಆರ್ ತುಕಡಿಯನ್ನೂ ನಿಯೋಜಿಸಲಾಗಿದೆ ಎಂದು ಗದಗ ಎಸ್ಪಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.