ವಿಡಿಯೋ: ವಿಜ್ಞಾನವೋ? ಪವಾಡವೋ? ಉರುಳಿಬಿದ್ದ ಒನಕೆ
ಧಾರವಾಡ, ಡಿಸೆಂಬರ್ 26: ಇದೇನು ವಿಜ್ಞಾನವೋ, ಪವಾಡವೋ, ತಟ್ಟೆಯ ಮೇಲೆ ಮೂರು ಗಂಟೆ ಕಾಲ ನೆಟ್ಟಗೆ ನಿಂತಿದ್ದ ಒನಕೆ ಗ್ರಹಣ ಮುಗಿದ ಕೂಡಲೇ ಕೆಳಗೆ ಬಿದ್ದಿದೆ!
ಹೌದು, ಗ್ರಹಣದಿನದಂದು ಒನಕೆಯನ್ನು ತಟ್ಟೆಯ ಮೇಲೆ ನಿಲ್ಲಿಸಿದರೆ ನಿಲ್ಲುತ್ತದೆ ಎಂಬುದು ನಂಬಿಕೆ. ಅದರಂತೆ ಹಲವರು ಈ ಪ್ರಯೋಗ ಗ್ರಹಣ ದಿನವಾದ ಇಂದು ನಡೆಸಿದ್ದಾರೆ. ಪ್ರಯೋಗ ಯಶಸ್ವಿಯೂ ಆಗಿದೆ.
ಗ್ರಹಣ ಬಿಡುತ್ತಿದ್ದಂತೆ ಕೆಳಗೆ ಬಿದ್ದ ಒನಕೆ #solareclipse2019 | #SolarEclipse pic.twitter.com/ind20vqvp9
— Oneindia Kannada (@OneindiaKannada) December 26, 2019
ಧಾರವಾಡ, ಮಂಗಳೂರು, ಕಲಬುರ್ಗಿ, ಮಂಗಳೂರು, ಕರಾವಳಿಯ ಹಲವು ಗ್ರಾಮಗಳು ಇನ್ನೂ ಹಲವು ಕಡೆ ಗ್ರಾಮಗಳಲ್ಲಿ ಜನರು ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಒನಕೆ ನಿಲ್ಲಿಸಿದ್ದಾರೆ. ತಟ್ಟೆಯಲ್ಲಿ ಒನಕೆ ನಿಲ್ಲಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಗ್ರಹಣ ದಿನದಂದು ಗ್ರಹಣ ಇರುವಷ್ಟೂ ಹೊತ್ತು ತಟ್ಟೆಯಲ್ಲಿ ಒನಕೆ ನಿಲ್ಲುತ್ತದೆ ಎಂಬುದು ನಂಬಿಕೆ. ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಟ್ಟೆ ಮೇಲೆ ನಿಲ್ಲಿಸಲ್ಪಟ್ಟಿದ್ದ ಒನಕೆ ಗ್ರಹಣ ಮುಗಿಯುವ ಹೊತ್ತಿಗೆ ಮೆಲ್ಲಗೆ ಅಲುಗಾಡಿ ಧುಪ್ಪೆಂದು ನೆಲಕ್ಕೆ ಬಿದ್ದಿದೆ.

ಗ್ರಹಣ ಪ್ರಾಕೃತಿಕ ಘಟನೆಯಷ್ಟೆ ಅದರ ಪರಿಣಾಮ ಭೂಮಿಯ ಮೇಲೆ ಏನೂ ಇರದು ಎಂದು ವಿಜ್ಞಾನಿಗಳು ಬಹುಕಾಲದಿಂದ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ ತಟ್ಟೆಯ ಮೇಲೆ ಒನಕೆ ನಿಲ್ಲುವ, ಗ್ರಹಣ ಸಮಯದ ನಂತರ ಒನಕೆ ತನ್ನಂತಾನೆ ಕೆಳಗೆ ಬಿದ್ದ ವಿದ್ಯಮಾನ ಗ್ರಹಣ ಒಳಗೊಂಡ ಕೌತುಕಗಳನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಗ್ರಹಣಕ್ಕೆ ವೈಜ್ಞಾನಿಕ ಆಯಾಮ ಬಿಟ್ಟು ಬೇರೆಯ ಆಯಾಮಗಳೂ ಇವೆಯೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications