ಪಂಚಮಸಾಲಿ ಮೀಸಲಾತಿ: ಅಗಸ್ಟ್ 22ರವರೆಗೆ ಸತ್ಯಾಗ್ರಹ ಮುಂದೂಡಿದ ಸ್ವಾಮೀಜಿ
ಧಾರವಾಡ, ಜು.13: ಸಂವಿಧಾನಬದ್ಧವಾಗಿ ಲಿಂಗಾಯತರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಈ ಕುರಿತು ಧಾರವಾಡದ ಲಿಂಗಾಯತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸರ್ಕಾರ ಮೀಸಲಾತಿ ಭರವಸೆ ನೀಡಿತ್ತು ಹೀಗಾಗಿ ತಾತ್ಕಾಲಿಕವಾಗಿ ಸತ್ಯಾಗ್ರಹ ಮುಂದೂಡಿದ್ದೇವೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಬೇಡಿಕೆ ಈಡೇರಿಕೆ ಭರವಸೆ ಇತ್ತು. ಅವರು ಗೃಹ ಸಚಿವರಾಗಿದ್ದಾಗ ಹೋರಾಟಕ್ಕೆ ಸಹಕಾರ ನೀಡಿದ್ದರು. ಅವರೇ ಸಿಎಂ ಆದ ಬಳಿಕ ಸಾಕಷ್ಟು ನಿರೀಕ್ಷೆ ಮಾಡಿದ್ದೇವು ಆದರೆ ಅವರು ಕೊಟ್ಟ ಮಾತು ಈಡೇರಿಸಿಲ್ಲ ಬಜೆಟ್ ನಲ್ಲಿಯೂ ನಮಗೆ ನ್ಯಾಯ ಕೊಡಲಿಲ್ಲ ಎಂದರು.

ಸತ್ಯಾಗ್ರಹವನ್ನು ಅಗಸ್ಟ್ 22ರವರೆಗೆ ಮುಂದೂಡಿದ ಸ್ವಾಮೀಜಿ
ಹೀಗಾಗಿ ಪುನಃ ನಮ್ಮ ಹೋರಾಟ ಶುರುವಾಗಿತ್ತು. ಜೂನ್ 22ಕ್ಕೆ ಸಿ.ಸಿ.ಪಾಟೀಲ ಮನೆಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ಆಗಿದೆ. ಈ ಬಳಿಕ ಹಾವೇರಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಆಯೋಗ ಸರ್ವೆ ಶುರು ಆಗಿದೆ. ಇನ್ನೂ 18 ಜಿಲ್ಲೆಗಳ ಸರ್ವೆ ಬಾಕಿ ಇದೆ. ಸರ್ಕಾರ ಈಗ ಎರಡು ತಿಂಗಳ ಅವಕಾಶ ಕೇಳಿದೆ. ಅಗಸ್ಟ್ 22ರೊಳಗೆ ಸಿಹಿ ಸುದ್ದಿ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಈಗ ನಾಲ್ಕನೇ ಸಲ ಸಿಎಂ ಸಮಯಾವಕಾಶ ಕೇಳಿದ್ದಾರೆ. ಸದ್ಯ ಸತ್ಯಾಗ್ರಹವನ್ನು ಅಗಸ್ಟ್ 22ರವರೆಗೆ ಮುಂದೂಡಿದ್ದೇವೆ ಎಂದರು.

ಧಾರವಾಡ ಜಿಲ್ಲೆಯ ಮೂಲಕ ಈಗ ಹೋರಾಟ ಶುರು
ಧಾರವಾಡ ಜಿಲ್ಲೆಯ ಮೂಲಕ ಈಗ ಹೋರಾಟ ಶುರುವಾಗಿದೆ. ಸರ್ಕಾರ ಮೈ ಮರೆಯಬಾರದು ಅಂತಾ ಹೋರಾಟ ನಿರಂತರವಾಗಿ ಇರುತ್ತದೆ. ಜಿಲ್ಲೆಯ ಎಲ್ಲ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಹೋರಾಟ ಶುರುವಾಗಿದೆ. ಜು. 30ರಂದು ಧಾರವಾಡ ನಗರದಲ್ಲಿ ಬೃಹತ್ ರ್ಯಾಲಿ ಮಾಡಲಾಗುವುದು. ಅಗಸ್ಟ್ 22ಕ್ಕೆ ಸರ್ಕಾರ ಸಿಹಿಸುದ್ದಿ ಕೊಡಬೇಕು. ಇಲ್ಲದೇ ಹೋದಲ್ಲಿ ಅಗಸ್ಟ್ 23ಕ್ಕೆ ಸಿಎಂ ನಿವಾಸದ ಎದುರು ಹೋರಾಟ ಮಾಡುತ್ತೇವೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications